Get Updates
Get notified of breaking news, exclusive insights, and must-see stories!

Himachal Pradesh: ಇದಕ್ಕಿಂತ ಸಾವೇ ಮೇಲು: ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರ ಅಳಲು

"ಈ ದುಃಸ್ವಪ್ನವನ್ನು ಅನುಭವಿಸುವುದಕ್ಕಿಂತ ಸಾವು ಉತ್ತಮವಾಗಿತ್ತು" ಇದು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಮನೆ ಕಳೆದುಕೊಂಡವರ ಮಾತು. ಅವರು ಕಳೆದುಕೊಂಡದ್ದು ಮನೆ ಮಾತ್ರವಲ್ಲ ಅವರ ಬದುಕನ್ನು ಕೂಡ.

ಆಗಸ್ಟ್ 23 ರಂದು ಬೆಳಿಗ್ಗೆ ಸಂಭವಿಸಿದ ಭೂಕುಸಿತದಲ್ಲಿ ಪ್ರಾರಿ ಹೌಸ್ ಅನ್ನು ಭಾಗಶಃ ಹಾನಿಗೊಳಿಸಿತು. ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆ (IGMCH) ಬಳಿ ಪ್ರಮೀಳಾ ತನ್ನ ಅನಾರೋಗ್ಯದ ತಾಯಿಯೊಂದಿಗೆ ತಂಗಿದ್ದರು. ಶುಕ್ರವಾರ ಪಿಟಿಐ ಜೊತೆ ಮಾತನಾಡಿದ ಅವರು, ತನ್ನ ಸಂಕಟವನ್ನು ಹೇಳಿಕೊಂಡರು. "ನನ್ನ 75 ವರ್ಷದ ತಾಯಿಯೊಂದಿಗೆ ವಾಸಿಸುತ್ತಿದ್ದು, ಅವರು ಅಂಡಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು 2016ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಹೇಳಿದರು.

 Landslide Tragedy Unleashes Helplessness Among Himachal Rain Fury Survivors

ಭಾರಿ ಮಳೆಯಿಂದ ರಾಜ್ಯದಲ್ಲಿ ಬದುಕು ಅಸ್ತವ್ಯಸ್ತವಾಗಿದ್ದು, ಗ್ರಾಹಕರಿಲ್ಲದ ಕಾರಣ ಆರ್ಥಿಕ ಹಿಂಜರಿತದಿಂದ ಕಳೆದ ವಾರ ಸಿಟಿ ಮಾರ್ಕೆಟ್‌ನ ರಾಮ್‌ನಗರದ ಅಂಗಡಿಯೊಂದರಲ್ಲಿ ಸೇಲ್ಸ್‌ ಗರ್ಲ್‌ ಆಗಿದ್ದ ಅವರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. "ಹೋಗಲು ಸ್ಥಳವಿಲ್ಲದ ಕಾರಣ ನಾನು ಗುರುವಾರ ರಾತ್ರಿ ಐಜಿಎಂಸಿಎಚ್‌ನಲ್ಲಿ ಮಲಗಿದ್ದೆ" ಎಂದು ಪ್ರಮೀಳಾ ಹೇಳಿದ್ದಾರೆ.

ಸಾವಿರಾರು ಜನರ ಬದುಕು ಬೀದಿಗೆ

"ನಾನು ಕೆಲಸಕ್ಕಾಗಿ ತೀವ್ರವಾಗಿ ಹುಡುಕುತ್ತಿದ್ದೇನೆ ಮತ್ತು ನನ್ನ ತಾಯಿಯ ಚಿಕಿತ್ಸೆಗಾಗಿ ನನಗೆ ಹಣದ ಅವಶ್ಯಕತೆ ಇರುವುದರಿಂದ ಕಸ ಗುಡಿಸುವ ಕೆಲಸ ಸಿಕ್ಕರೂ ಸಹ ಮಾತನಾಡಲು ಸಿದ್ಧನಿದ್ದೇನೆ" ಎಂದು ಅವರು ಹೇಳಿದರು.

"ಮನೆ ಕುಸಿಯುವ ಸಂದರ್ಭದಲ್ಲಿ ನಾವು ಧರಿಸಿದ್ದ ಬಟ್ಟೆಯಲ್ಲಿ ಹೊರಗೆ ಬಂದಿದ್ದೇವೆ, ಅಲ್ಲಿಂದ ಮತ್ತೇನನ್ನೂ ತರಲು ಆಗಲಿಲ್ಲ. " ಎಂದು ಮತ್ತೋರ್ವ ಸಂತ್ರಸ್ತೆ ಸುಮನ್ ಹೇಳಿದ್ದಾರೆ. ಭೂಕುಸಿತದಲ್ಲಿ ತನ್ನ ಸರ್ವಸ್ವವನ್ನೂ ಕಳೆದುಕೊಂಡಿದ್ದು, ಮಗನ ಶಾಲಾ ಶುಲ್ಕ ಕಟ್ಟಲೂ ಹಣವಿಲ್ಲ ಎಂದು ಮನೆ ಸಹಾಯಕಿ ಕೆಲಸ ಮಾಡುತ್ತಿರುವ ಸುಮನ್ ಹೇಳುತ್ತಾರೆ. ತಮಗೆ ಸೂರು ಇಲ್ಲ, ಬಟ್ಟೆ ಇಲ್ಲ, 5ನೇ ತರಗತಿ ಓದುತ್ತಿರುವ ತನ್ನ ಮಗನ ಪುಸ್ತಕಗಳೂ ಭೂಕುಸಿತದಲ್ಲಿ ಹಾನಿಗೀಡಾಗಿವೆ ಎಂದು ಅಸಹಾಯಕತೆ ಹೇಳಿಕೊಂಡರು.

"ನಮ್ಮ ಪರಿಸ್ಥಿತಿ ಶೋಚನೀಯವಾಗಿದೆ ಆದರೆ ಈ ಭೂಕುಸಿತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದ ಕಾರಣ ಇದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ವಿಪತ್ತು ಸಂತ್ರಸ್ತರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಇಷ್ಟೊಂದು ದೇಣಿಗೆ ಪಡೆದು ಏನು ಪ್ರಯೋಜನ," ಎಂದು ಹೇಳಿದರು.

ಈವರೆಗೆ ಒಟ್ಟು 238 ಮಂದಿ ಸಾವು

ಕಳೆದ ವಾರದಲ್ಲಿ ಶಿಮ್ಲಾದಲ್ಲಿ ಹಲವು ಬಾರಿ ಭೂಕುಸಿತ ಸಂಭವಿಸಿದೆ. ಕಳೆದ 10 ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಘಟನೆಗಳ ಸಂಖ್ಯೆ 26 ಕ್ಕೆ ಏರಿದೆ, ಇದರಲ್ಲಿ ಸಮ್ಮರ್ ಹಿಲ್ ಭೂಕುಸಿತದಲ್ಲಿ 17 ಸಾವುಗಳು, ಫಾಗ್ಲಿಯಲ್ಲಿ ಐದು ಮತ್ತು ಕೃಷ್ಣ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಜೂನ್ 24 ರಂದು ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಪ್ರಾರಂಭವಾದಾಗಿನಿಂದ ಈ ತಿಂಗಳು ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 120 ಜನರು ಸಾವನ್ನಪ್ಪಿದ್ದಾರೆ ಮತ್ತು ಒಟ್ಟಾರೆ 238 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಇನ್ನೂ ನಾಪತ್ತೆಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+