Get Updates
Get notified of breaking news, exclusive insights, and must-see stories!

ಕೇರಳ ಸರ್ಕಾರದಿಂದ ಹಿಂದೂ ದೇವಾಲಯಗಳಲ್ಲಿ ಮಹತ್ವದ ಬದಲಾವಣೆ, ಏನದು ?

ಕೇರಳದ ಕಮ್ಯುನಿಸ್ಟ್‌ ಸರ್ಕಾರವು ದೇವಾಲಯಗಳಲ್ಲಿ ಮಹತ್ವದ ಬದಲಾವಣೆಯೊಂದನ್ನು ತರಲು ಮುಂದಾಗಿದೆ. ಇದು ಸಹಜವಾಗಿಯೇ ಚರ್ಚೆಗೆ ಕಾರಣವಾಗಿದ್ದು, ಹಿಂದೂ ಹಾಗೂ ಹಿಂದೂ ಭಕ್ತಾಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಸಾಮಾನ್ಯವಾಗಿ ಕರ್ನಾಟಕದ ಕೆಲವು ಪ್ರಮುಖ ದೇವಾಲಯಗಳು ಸೇರಿದಂತೆ ದೇಶದ ವಿವಿಧ ದೇವಾಲಯಗಳಲ್ಲಿ ಪುರುಷರು ತಮ್ಮ ಶರ್ಟ್ ತೆಗೆದು ಹೋಗುವ ಪದ್ಧತಿ ಇದೆ.

ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಈ ಪದ್ಧತಿ ಇದೆ. ಕೇರಳದಲ್ಲಿ ಇದು ವ್ಯಾಪಕವಾಗಿದೆ. ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಮಾತ್ರವಲ್ಲ ಸಣ್ಣ ದೇವಸ್ಥಾನಗಳಲ್ಲೂ ಈ ಪದ್ಧತಿ ಆಚರಣೆಯಲ್ಲಿ ಇದೆ. ಇದೀಗ ದೇವಸ್ಥಾನಗಳಿಗೆ ಪ್ರವೇಶಿಸುವಾಗ ಪುರುಷರು ಶರ್ಟ್‌ ತೆಗೆಯಬೇಕು ಎನ್ನವು ನಿಯಮವನ್ನು ತೆಗೆದು ಹಾಕುವುದಕ್ಕೆ ಸಂಬಂಧಿಸಿದಂತೆ ಕೇರಳ ದೇವಸ್ವಂ ಮಂಡಳಿಯು ಚಿಂತನೆ ನಡೆಸಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

Kerala temples considering banning men removing their shirts CM Pinarayi Vijayan

ಕೇರಳದಲ್ಲಿ ಸಾವಿರಾರು ದೇವಾಲಯಗಳು ಇವೆ. ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಹಿಂದೂ ದೇವಾಲಯ ಹಾಗೂ ಹಿಂದೂ ಸಂಪ್ರದಾಯದ ವಿಚಾರವಾಗಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕಳೆದ ವರ್ಷ ತ್ರಿಶೂರ್ ಪೂರಂ ಉತ್ಸವದಲ್ಲಿನ ಘಟನೆ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಕೇರಳ ಸರ್ಕಾರ ನಡೆದುಕೊಂಡ ರೀತಿಗೆ ಪರ - ವಿರೋಧ ವ್ಯಕ್ತವಾಗಿತ್ತು. ಇನ್ನು ಇದೀಗ ಹೊಸ ನಿಯಮ ಜಾರಿ ಮಾಡಲು ಕೇರಳ ಸರ್ಕಾರ ಮುಂದಡಿ ಇರಿಸಿದೆ. ಈ ಸಂಬಂಧ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ಈ ಸಂಬಂಧ ಚಿಂತನೆ ನಡೆದಿದೆ ಎಂದಿದ್ದಾರೆ.

ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರು ಅವರು ಶಿವಗಿರಿ ಮಠವನ್ನು ಸ್ಥಾಪಿಸಿದ್ದರು. ಈ ದೇವಸ್ಥಾನದ ಮುಖ್ಯಸ್ಥರಾದ ಸ್ವಾಮಿ ಸಚ್ಚಿದಾನಂದ ಅವರು, ಈಚೆಗೆ ಪುರುಷರು ಶರ್ಟ್‌ ಅಥವಾ ಮೇಲ್ವಸ್ತ್ರ ತೆಗೆಯುವ ಪದ್ಧತಿ ಸಾಮಾಜಿಕ ಅನಿಷ್ಟವಾಗಿದೆ ಎಂದಿದ್ದರು. ಅಲ್ಲದೆ ಈ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಅವರು ಈ ಹೇಳಿಕೆ ಕೊಟ್ಟ ಮೇಲೆ ಕೇರಳದಲ್ಲಿ ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.

ಚಿಂತನೆ ನಡೆದಿದೆ: ಕೇರಳ ಸರ್ಕಾರವು ಈ ವಿಚಾರವಾಗಿ ಚಿಂತನೆ ನಡೆದಿದೆ ಎಂದು ಹೇಳಿದೆ. ದೇವಸ್ವಂ ಮಂಡಳಿಯ ಪ್ರತಿನಿಧಿಯೊಬ್ಬರು ನನ್ನನ್ನು ಭೇಟಿ ಮಾಡಿದ್ದರು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದಿದ್ದಾರೆ. ಅಲ್ಲದೆ ಇದು ಬೆಳ್ಳೆಯ ಬೆಳವಣಿಗೆ ಎಂದು ನಾನು ಸಹ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಹೇಳಿದ್ದರು.

ಐದು ಪ್ರಮುಖ ದೇವಸ್ವಂ: ಕೇರಳದಲ್ಲಿ ಪ್ರಮುಖವಾಗಿ ಐದು ದೇವಸ್ವಂ ಇವೆ. ಅದರಲ್ಲಿ ತಿರುವಾಂಕೂರ್, ಮಲಬಾರ್, ಕೊಚ್ಚಿನ್, ಗುರುವಾಯೂರ್ ಹಾಗೂ ಕೂಡಲ್ಮಾಣಿಕ್ಯಂ ಎನ್ನುವ ದೇವಸ್ವಂಗಳು ಇವೆ. ಇನ್ನು ಐದು ದೇವಸ್ವಂಗಳಲ್ಲಿ ಯಾವ ದೇವಸ್ವಂನಿಂದ ಈ ಬಗ್ಗೆ ಪ್ರಸ್ತಾವನೆ ಬಂದಿದೆ ಎನ್ನುವುದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸ್ಪಷ್ಟಪಡಿಸಿಲ್ಲ. ಅಲ್ಲದೆ ಕೇರಳದಲ್ಲಿ ಈ ದೇವಸ್ವಂಗಳ ಅಡಿಯಲ್ಲಿ 3,000 ದೇವಾಲಯಗಳು ಬರುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+