ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ
ಕೇರಳ ಕೇವಲ ಬಿಸಿಲಿನ ತಾಪಮಾನ ಇರುವ ಪ್ರದೇಶ ಅಷ್ಟೆ ಅಲ್ಲಾ ಇದನ್ನು ದೇವರ ಸ್ವಂತ ನಾಡು ಮತ್ತು ಪ್ರವಾಸಿ ತಾಣ ಎಂದು ಕರೆಯುತ್ತಾರೆ. ಇದು ಭಾರತದ ಮಸಾಲೆ ಉದ್ಯಾನವನ ಎಂದು ಕರೆಯಲ್ಪಡುವ ಈ ಹಚ್ಚ ಹಸಿರುನಿಂದ ಕೂಡಿರುವ ರಾಜ್ಯವು ಶತಮಾನಗಳಿಂದ ವ್ಯಾಪಾರಿಗಳನ್ನು ಮತ್ತು ಆಹಾರಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.
ಪಶ್ಚಿಮ ಘಟ್ಟಗಳ ಮಂಜಿನ ಬೆಟ್ಟಗಳಿಂದ ಹಿಡಿದು ಕರಾವಳಿ ಪ್ರದೇಶಗಳವರೆಗೆ ಕೇರಳವು ಮೆಣಸು, ಏಲಕ್ಕಿ, ದಾಲ್ಚಿನ್ನಿ, ಲವಂಗ, ಜಾಯಿಕಾಯಿ, ಅರಿಶಿನ ಮತ್ತು ಶುಂಠಿ ಸೇರಿದಂತೆ ವಿಶ್ವಪ್ರಸಿದ್ಧ ಮಸಾಲೆಗಳನ್ನು ಉತ್ಪಾದಿಸುತ್ತದೆ. ಇವುಗಳೇ ಈ ರಾಜ್ಯದ ಆರ್ಥಿಕತೆಯ ಜೊತೆಗೆ ಅದರ ಸಂಸ್ಕೃತಿಯ ಪ್ರಮುಖ ಅಂಶಗಳಾಗಿವೆ.

ಮಸಾಲೆ ಬೆಳೆಗೆ ಸೂಕ್ತ
ಕೇರಳದ ಭೌಗೋಳಿಕ ಪರಿಸ್ಥಿತಿಯು ಮಸಾಲೆ ಪದಾರ್ಥಗಳ ಕೃಷಿಗೆ ಅತ್ಯಂತ ಅನುಕೂಲಕರವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ದಟ್ಟ ನೆರಳು, ಉತ್ತಮ ಮಣ್ಣು ಮತ್ತು ಭಾರೀ ಮಳೆ ಆಗುವುದರಿಂದ ಇದು ಕೃಷಿಗೆ ತುಂಬಾ ಅನೂಕೂಲಕರವಾಗಿದೆ. ಕರಾವಳಿ ಪ್ರದೇಶಗಳ ಮಳೆಗಾಲದ ಹವಾಮಾನ ವರ್ಷಪೂರ್ತಿ ಬೆಳೆಗೆ ನೆರವಾಗುತ್ತದೆ. ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳು ಕೇರಳದ ಅತ್ಯಂತ ಸುಂದರವಾದ ಪ್ರದೇಶಗಳು ಮತ್ತು ಮಸಾಲೆ ತೋಟಗಳಿಗೆ ವಿಶೇಷವಾಗಿ ಪ್ರಸಿದ್ಧವಾಗಿವೆ.
ಮಸಾಲೆ ವ್ಯಾಪಾರದ ಕೇಂದ್ರ
ಕೇರಳದ ಮಸಾಲೆಗಳು ಇತಿಹಾಸದಲ್ಲಿ ಅಪಾರ ಮೌಲ್ಯ ಹೊಂದಿದ್ದು ಅರಬ್ ವ್ಯಾಪಾರಿಗಳು ಕಪ್ಪು ಚಿನ್ನ ಎಂದೇ ಕರೆಯಲ್ಪಟ್ಟ ಕರಿಮೆಣಸಿಗಾಗಿ ಈ ಪ್ರದೇಶಕ್ಕೆ ಬರುತ್ತಿದ್ದರು. ನಂತರ ಚೀನಿ ವ್ಯಾಪಾರಿಗಳು ಮತ್ತು 1498ರಲ್ಲಿ ವಾಸ್ಕೋ ಡ ಗಾಮಾ ಆಗಮನದೊಂದಿಗೆ ಯುರೋಪಿಯನ್ ವ್ಯಾಪಾರಿಗಳು ಕೇರಳದತ್ತ ಮುಖ ಮಾಡಿದರು. ಇದರಿಂದ ಮಸಾಲೆ ವ್ಯಾಪಾರದಲ್ಲಿ ಕೇರಳ ಜಾಗತಿಕ ಕೇಂದ್ರವಾಯಿತು.
ದೈನಂದಿನ ಜೀವನದಲ್ಲಿ ಮಸಾಲೆಗಳ ಮಹತ್ವ
ಕೇರಳದಲ್ಲಿ ಮಸಾಲೆಗಳು ಕೇವಲ ರಫ್ತು ಉತ್ಪನ್ನಗಳಲ್ಲ ಅವು ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆಹಾರದಲ್ಲಿ ರುಚಿ ಹೆಚ್ಚಿಸುವುದರ ಜೊತೆಗೆ ಆಯುರ್ವೇದದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅರಿಶಿನ, ಶುಂಠಿ, ಲವಂಗ ಮತ್ತು ಜಾಯಿಕಾಯಿ ಮನೆಮದ್ದುಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಕೇರಳದ ಮಸಾಲೆ ಉದ್ಯಾನ ಎಂಬ ಹೆಸರಿನ ಹಿಂದೆ ಕೇವಲ ಕೃಷಿಯಲ್ಲ, ಶತಮಾನಗಳ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಒಳಗೊಂಡಿದೆ. ಪ್ರವಾಸಿಗರಿಗೆ ಇದು ಕೇವಲ ಪ್ರವಾಸವಲ್ಲ ತೋಟಗಳಲ್ಲಿ ನಡೆಯುತ್ತಾ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಬಹುದು ಮತ್ತು ತಾಜಾ ಮಸಾಲೆಗಳನ್ನು ಖರೀದಿಸಬಹುದು. ಸೆಪ್ಟೆಂಬರ್ನಿಂದ ಮಾರ್ಚ್ವರೆಗೆ ಕೇರಳದ ಮಸಾಲೆ ತೋಟಗಳಿಗೆ ಭೇಟಿ ನೀಡಲು ಉತ್ತಮ ಸಮಯ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್














Click it and Unblock the Notifications