Kerala Kumbh Mela: ಪುಟ್ಟ ಬಾಲಕಿಗೆ ನಮಸ್ಕರಿಸಿದ ಹಿರಿಯ ಸನ್ಯಾಸಿ; ಇದುವೇ ನಿಜವಾದ ಸಂಸ್ಕೃತಿ ಎಂದ ನೆಟ್ಟಿಗರು
ಕೇರಳ: ಧರ್ಮ ಮತ್ತು ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಗಿರುವ ಕೇರಳದ ಕುಂಭಮೇಳದಲ್ಲಿ (Mahamaham) ನಡೆದ ಘಟನೆಯೊಂದು ನೋಡುಗರ ಕಣ್ಮನ ಸೆಳೆದಿದೆ. ಸಾಮಾನ್ಯವಾಗಿ ಭಕ್ತರು ಸನ್ಯಾಸಿಗಳಿಂದ ಆಶೀರ್ವಾದ ಪಡೆಯುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬರು ಹಿರಿಯ ಸನ್ಯಾಸಿ ಪುಟ್ಟ ಬಾಲಕಿಯೊಬ್ಬಳಿಗೆ ನಮಸ್ಕಾರ ಮಾಡಿ ಅವಳಿಂದ ಆಶೀರ್ವಾದ ಪಡೆದು, ಹೆಣ್ಣುಮಗುವಿಗೆ ನೀಡಬೇಕಾದ ಗೌರವವನ್ನು ಎತ್ತಿ ಹಿಡಿದಿದ್ದಾರೆ.
ವೈರಲ್ ಆದ ಭಾವನಾತ್ಮಕ ಕ್ಷಣ
ಕೇರಳದ ಮಲಪ್ಪುರಂ ಜಿಲ್ಲೆಯ ತಿರುನಾವಯದಲ್ಲಿರುವ ಭರತಪುಳ ನದಿ ತೀರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಈ ದೃಶ್ಯ ಕಂಡುಬಂದಿದೆ. ಕೇಸರಿ ವಸ್ತ್ರಧಾರಿ ಸಾಧುವೊಬ್ಬರು ಯಾತ್ರಾರ್ಥಿಗಳ ನಡುವೆ ನಡೆದು ಹೋಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳಿಗೆ ನಮಸ್ಕಾರ ಮಾಡಿ ಅವಳಿಂದ ಆಶೀರ್ವಾದ ಪಡೆದು, ಅವಳಿಗೆ ಹಣ ನೀಡಿರುವ ಘಟನೆ ನಡೆದಿದೆ. ಆಕೆಯ ಮುಗ್ಧತೆಯಲ್ಲಿ ಸಾಕ್ಷಾತ್ ದೇವಿಯನ್ನು ಕಂಡರೋ ಏನೋ, ತಕ್ಷಣವೇ ಆಕೆಗೆ ಸಾಧು ನಮಸ್ಕರಿಸಿದರು. ಈ ಘಟನೆ ನೆರೆದಿದ್ದ ಭಕ್ತರನ್ನೇಲ್ಲ ಆಶ್ಚರ್ಯಚಕಿತರನ್ನಾಗಿಸಿತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಣ್ಣುಮಗುವೇ ದೇವತೆಯ ಸ್ವರೂಪ
ಹಿಂದೂ ಧರ್ಮದಲ್ಲಿ ಹೆಣ್ಣುಮಕ್ಕಳನ್ನು 'ಕನ್ಯಾ' ಅಥವಾ 'ಶಕ್ತಿ'ಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಬಾಲಕಿಯರ ಪಾದ ಪೂಜೆ ಮಾಡುವ ಸಂಪ್ರದಾಯವಿದೆ. ಆದರೆ, ಸಾರ್ವಜನಿಕವಾಗಿ, ಅದೂ ಕುಂಭಮೇಳದಂತಹ ಬೃಹತ್ ಜನಸ್ತೋಮದ ನಡುವೆ, ಒಬ್ಬ ತ್ಯಾಗಿ ಸನ್ಯಾಸಿ ಮಗುವಿಗೆ ತಲೆಬಾಗಿ ಗೌರವ ಸೂಚಿಸಿದ್ದು ಸನಾತನ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಸಾರುವಂತಿದೆ. "ದೈವತ್ವವು ಕೇವಲ ವಿಗ್ರಹಗಳಲ್ಲಿ ಮಾತ್ರವಲ್ಲ, ಮಗುವಿನ ನಗುವಿನಲ್ಲೂ ಇದೆ," ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.
271 ವರ್ಷಗಳ ನಂತರ ಮರುಕಳಿಸಿದ ವೈಭವ
ದಕ್ಷಿಣದ ಕುಂಭಮೇಳ ಎಂದೇ ಕರೆಯಲ್ಪಡುವ ಈ 'ಮಹಾಮಘಂ ಮಹೋತ್ಸವ'ವು ಸುಮಾರು 271 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಆಯೋಜನೆಗೊಂಡಿದೆ. ಉತ್ತರ ಭಾರತದ ಪ್ರಯಾಗ್ರಾಜ್ ಕುಂಭಮೇಳದ ಮಾದರಿಯಲ್ಲೇ ಜುನಾ ಅಖಾಡದ ಸಾಧು-ಸಂತರು ಇದರಲ್ಲಿ ಪಾಲ್ಗೊಂಡಿದ್ದಾರೆ. ಭರತಪುಳ ನದಿ ತೀರದಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿ ಧನ್ಯತಾ ಭಾವ ಮೆರೆದಿದ್ದಾರೆ.
ಭಕ್ತರ ಭಕ್ತಿ ಪರಾಕಾಷ್ಠೆಯ ನಡುವೆ, ಸನ್ಯಾಸಿಯೊಬ್ಬರು ಬಾಲಕಿಗೆ ನೀಡಿದ ಈ ಗೌರವವು ಮೇಳದ ಪ್ರಮುಖ ಆಕರ್ಷಣೆಯಾಗಿ ಉಳಿಯಿತು. ಇದು ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಿಗೆ ಹೆಣ್ಣುಮಕ್ಕಳನ್ನು ಗೌರವಿಸುವ ಭಾರತೀಯ ಪರಂಪರೆಯ ಜೀವಂತ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.
At the Kerala Kumbh Mela. More than the devotion of the pilgrims, it's the respect the Hindu ascetic gives to the girl child that is noteworthy. pic.twitter.com/1m0x6Ozuv3
— Rakesh Krishnan Simha (@ByRakeshSimha) February 4, 2026
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications