Get Updates
Get notified of breaking news, exclusive insights, and must-see stories!

ಕೇರಳ 'ನರಬಲಿ': ಮಾಟಮಂತ್ರಕ್ಕಾಗಿ ಇಬ್ಬರು ಮಹಿಳೆಯರ ಕೊಲೆ- 3 ಬಂಧನ

ಇತ್ತೀಚೆಗಿನ ಇಬ್ಬರು ಅಸಹಾಯಕ ಮಹಿಳೆಯರ ಸಾವು ಕೇರಳದಲ್ಲಿ ಮಾಟಮಂತ್ರಕ್ಕಾಗಿ ಸಂಭವಿಸಿದೆ ಎಂದು ಆರೋಪಿಸಲಾಗುತ್ತಿದೆ. ನರಬಲಿ ಎಂದು ಹೇಳಲಾದ ಈ ಆಘಾತಕಾರಿ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಈ ಸಂಬಂಧ ಮಂಗಳವಾರ ದಂಪತಿಗಳು ಸೇರಿದಂತೆ ಮೂವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ರಸ್ತೆಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ದಿನನಿತ್ಯದ ಜೀವನ ನಡೆಸುತ್ತಿದ್ದ ಮಹಿಳೆ ಕೆಲ ದಿನಗಳಿಂದ ನಾಪತ್ತೆಯಾಗಿದ್ದಳು. ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನದಲ್ಲಿ ಆರ್ಥಿಕ ಸಮೃದ್ಧಿಯನ್ನು ತರಲು ಮಾಟಮಂತ್ರದ ನೆಪದಲ್ಲಿ ದಂಪತಿ ಮಹಿಳೆಯರಿಬ್ಬರ ಜೀವವನ್ನೆ ಬಲಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಹೂಳುವ ಮೊದಲು ಇಬ್ಬರು ಮಹಿಳೆಯರ ಕತ್ತು ಸೀಳಿ ಅವರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಆರೋಪಿಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಲಾದಲ್ಲಿ ದೇಹದ ಭಾಗಗಳನ್ನು ಹೊರತೆಗೆಯಲಾಗುತ್ತಿದೆ. ಮಹಿಳೆಯರ ಅಪಹರಣಕ್ಕೆ ವ್ಯವಸ್ಥೆ ಮಾಡಿದ ಶಂಕಿತ ಏಜೆಂಟ್ ಮತ್ತು ತಿರುವಲ್ಲಾ ಮೂಲದ ದಂಪತಿಗಳು ಸೇರಿದಂತೆ ಮೂವರು ಪೊಲೀಸ್ ವಶದಲ್ಲಿದ್ದಾರೆ ಎಂದು ವರದಿಯಾಗಿದೆ. ಆದರೂ ಪೊಲೀಸರು ಇದನ್ನು ಇನ್ನೂ ಖಚಿತಪಡಿಸಿಲ್ಲ.

Kerala Human Sacrifice: Two women killed for witchcraft- 3 arrested

ಆರ್ಥಿಕ ಯೋಗಕ್ಷೇಮಕ್ಕಾಗಿ ನರಬಲಿ

ದಂಪತಿಯ ಆರ್ಥಿಕ ಯೋಗಕ್ಷೇಮಕ್ಕಾಗಿ ಈ ಕೊಲೆಗಳನ್ನು ಮಾಡಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಪೊಲೀಸರು ಇನ್ನೂ 'ನರಬಲಿ' ಬಗ್ಗೆ ಖಚಿತಪಡಿಸಿಲ್ಲ.

ಬಲಿಯಾದವರನ್ನು ಎರ್ನಾಕುಲಂನ ಪೊನ್ನುರುನ್ನಿ ನಿವಾಸಿ ಪದ್ಮಮ್ (52) ಮತ್ತು ಅಂಗಮಾಲಿ ಸಮೀಪದ ಕಾಲಡಿ ನಿವಾಸಿ ರೋಸ್ಲಿ ಎಂದು ಗುರುತಿಸಲಾಗಿದೆ. ಕೆಲ ದಿನಗಳಿಂದ ಇಬ್ಬರೂ ಮಹಿಳೆಯರು ಕಾಣೆಯಾಗಿದ್ದರು. ಜೂನ್‌ನಿಂದ ರೋಸ್ಲಿ ನಾಪತ್ತೆಯಾಗಿದ್ದು, ಸೆಪ್ಟೆಂಬರ್ 26 ರಿಂದ ಪದ್ಮಂ ನಾಪತ್ತೆಯಾಗಿದ್ದರು. ಲಾಟರಿ ಮಾರಾಟಗಾರ್ತಿ ಪದ್ಮಂ ನಾಪತ್ತೆ ಪ್ರಕರಣದ ಕುರಿತು ಕಡವಂತರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ವಿಚಾರಣೆ ನಡೆಸಿದಾಗ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.

ಮಾನವ ಬಲಿ

"ನಮ್ಮ ತಂಡ ತಿರುವಲ್ಲಾಗೆ ಹೋಗಿದೆ. ಇಂತಹ ಪ್ರಕರಣಗಳು ಹೆಚ್ಚು ಇವೆಯೇ ಎಂಬುದನ್ನು ಪರಿಶೀಲಿಸಲು ನಾವು ಶಂಕಿತರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಸಂಜೆಯ ವೇಳೆಗೆ ನಾವು ಹೆಚ್ಚಿನ ವಿವರಗಳನ್ನು ಪಡೆಯುತ್ತೇವೆ. ನಾವು ಆರಂಭದಲ್ಲಿ ಅಂದಾಜಿಸಿದಂತೆ, ಇದು ಸಾಮಾನ್ಯ ಪ್ರಕರಣವಲ್ಲ ಮತ್ತು ಇದು ಅತ್ಯಂತ ಸಂವೇದನಾಶೀಲ ಮತ್ತು ಆಘಾತಕಾರಿ ಪ್ರಕರಣ ಎಂದು ಸಾಬೀತುಪಡಿಸುವ ಸಾಧ್ಯತೆಯಿದೆ' ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ (ಕೊಚ್ಚಿ ನಗರ) ಸಿ.ಎಚ್. ನಾಗರಾಜು ಹೇಳಿದ್ದಾರೆ.

ಕೊಚ್ಚಿ ನಗರ ಪೊಲೀಸರು, ಎರ್ನಾಕುಲಂ ಗ್ರಾಮಾಂತರ ಪೊಲೀಸರು ಮತ್ತು ಪತ್ತನಂತಿಟ್ಟ ಪೊಲೀಸರು ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯು ಸಂಭವನೀಯ 'ನರಬಲಿ'ಯತ್ತ ಗಮನಹರಿಸಿದರೆ, ಅದನ್ನು ಖಚಿತಪಡಿಸಲು ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಹಿರಿಯ ಪೊಲೀಸ್ ಮೂಲಗಳು ತಿಳಿಸಿವೆ.

"ಕೊಲೆಗೆ ನಿಖರವಾದ ಕಾರಣಗಳು ಮತ್ತು ಯಾವಾಗ ಮತ್ತು ಹೇಗೆ ಕೊಲೆ ಮಾಡಲಾಗಿದೆ ಎಂಬುದು ವಿವರವಾದ ತನಿಖೆಯ ನಂತರವೇ ತಿಳಿಯುತ್ತದೆ. ಸದ್ಯಕ್ಕೆ ಇದನ್ನು ಕೊಲೆ ಎಂದು ಪರಿಗಣಿಸುತ್ತಿದ್ದೇವೆ'' ಎಂದು ಮೂಲಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+