Get Updates
Get notified of breaking news, exclusive insights, and must-see stories!

ಕೇರಳ ಸಿಎಂ ಪಿಣರಾಯಿ ವಿಜಯನ್‌ ಕಾರು ಸರಣಿ ಅಪಘಾತ

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ಅವರ ಬೆಂಗಾವಲು ಕಾರುಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿವೆ. ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸಿಎಂ ಪಿಣರಾಯಿ ಅವರು ಎಂದಿನಂತೆ ತಮ್ಮ ಬೆಂಗಾವಲು ವಾಹನಗಳೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮುಖ್ಯರಸ್ತೆಯಲ್ಲೇ ಮುಂದಿದ್ದ ಕಾರು ತಕ್ಷಣ ಬ್ರೇಕ್‌ ಹಾಕಿದೆ. ಸ್ವಲ್ಪ ವೇಗವಾಗಿಯೇ ಬೆಂಗಾವಲು ವಾಹನಗಳು ಚಲಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ, ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ ಎನ್ನಲಾಗಿದೆ.

Kerala CM Pinarayi Vijayan s Escort Vehicles Have Met With A Series Of Accidents

ಸಿಎಂ ಜೊತೆಗೆ ಚಲಿಸುತ್ತಿದ್ದ ಸುಮಾರು ಏಳು ಬೆಂಗಾವಲು ವಾಹನಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಕೂಡ ಆಗಿದೆ. ಮಹಿಳೆಯೊಬ್ಬರು ಈ ಬೆಂಗಾವಲು ವಾಹನಗಳು ಬಂದಾಗಲೇ ರಸ್ತೆಯಲ್ಲಿ ದಿಢೀರನೆ ಬಲಕ್ಕೆ ತಿರುಗಿಸಿದ್ದಾರೆ. ಹಾಗಾಗಿ ಮುಂದೆ ಹೋಗುತ್ತಿದ್ದ ಭದ್ರತಾ ವಾಹನಗಳು ಬ್ರೇಕ್‌ ಹೊಡೆದಿವೆ.

ಈ ವೇಳೆ ಹಿಂದೆಯೇ ವೇಗವಾಗಿ ಬರುತ್ತಿದ್ದ ಸಿಎಂ ವಾಹನ ಸೇರಿದಂತೆ ಕೊನೆಯ ಆಂಬುಲೆನ್ಸ್‌ ಕೂಡ ಏಳು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಅದೃಷ್ಟವಶಾತ್‌ ಸಿಎಂ ಪಿಣರಾಯಿ ವಿಜಯನ್‌ ಅವರು ಕ್ಷೇಮವಾಗಿದ್ದಾರೆ ಎನ್ನಲಾಗಿದೆ. ಇನ್ನು ಸರಣಿ ಅಪಘಾತದಿಂದ ವಾಹನಗಳೆಲ್ಲ ಡ್ಯಾಮೇಜ್‌ ಕೂಡ ಆಗಿವೆ.

ಆರ್‌ಎಸ್‌ಎಸ್ ಜಮಾತ್‌ ಪ್ರತಿರೂಪ ಎಂದ ಪಿಣರಾಯಿ!

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಆರ್‌ಎಸ್‌ಎಸ್ ಅನ್ನು ಜಮಾತ್-ಎ-ಇಸ್ಲಾಮಿಗೆ ಹೋಲಿಸಿರುವ ಅವರು ಜಮಾತ್-ಎ-ಇಸ್ಲಾಮಿ ಆರ್‌ಎಸ್‌ಎಸ್‌ನ ಪ್ರತಿರೂಪ ಎಂದಿದ್ದಾರೆ.

Kerala CM Pinarayi Vijayan s Escort Vehicles Have Met With A Series Of Accidents

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸದಸ್ಯರಾದ ಪಿ.ಜೆ.ರಾಜನ್ ಅವರ ಕೇರಳ, ಮುಸ್ಲಿಂ ರಾಷ್ಟ್ರೀಯಂ, ರಾಷ್ಟ್ರೀಯ ಇಸ್ಲಾಂ (ಕೇರಳ, ಮುಸ್ಲಿಂ ರಾಜಕೀಯ ಮತ್ತು ರಾಜಕೀಯ ಇಸ್ಲಾಂ) ಎಂಬ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಪಿಣರಾಯಿ ಈ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಅವರು ಜಮಾತ್-ಎ-ಇಸ್ಲಾಮಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಇಸ್ಲಾಮಿಕ್ ಆವೃತ್ತಿ ಎಂದಿದ್ದಾರೆ. ಇದೊಂದು ಇಸ್ಲಾಮಿಕ್ ಜಗತ್ತಿನ ಪುನರುಜ್ಜೀವನಗೊಳಿಸುವ ಸಂಸ್ಥೆ ಎಂದು ಹೇಳಿದ್ದಾರೆ.

ಜಮಾತ್-ಎ-ಇಸ್ಲಾಮಿ ಮತ್ತು ಐಯುಎಂಎಲ್ ಅನ್ನು ಒಂದೇ ರೀತಿಯಲ್ಲಿ ನೋಡಬಾರದು. ಮೊದಲನೆಯದ್ದು ಧಾರ್ಮಿಕ ಸಾಮ್ರಾಜ್ಯಶಾಹಿ ಸಂಘಟನೆಯಾಗಿದ್ದು, ಎರಡನೆಯದು ಎಂದಿಗೂ ಅಂತಹ ಕಾರ್ಯಸೂಚಿಯನ್ನೇ ಹೊಂದಿಲ್ಲ. IUML ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾದಾಗಿನಿಂದ ಸಾಮಾಜಿಕ ಸುಧಾರಣೆಗಳಲ್ಲಿ ತೊಡಗಿಸಿಕೊಂಡಿದೆ ಎಂದಿದ್ದಾರೆ. ಸದ್ಯ ಆರ್‌ಎಸ್‌ಎಸ್ ಅನ್ನು ಜಮಾತ್-ಎ-ಇಸ್ಲಾಮಿಗೆ ಹೋಲಿಸಿರುವ ಪಿಣರಾಯಿ ವಿಜಯನ್‌ ಹೇಳಿಕೆಯು ಸಂಚಲನ ಮೂಡಿಸಿದೆ. ಇದನ್ನು ಹಲವು ಬಿಜೆಪಿ ನಾಯಕರು ಕೂಡ ಖಂಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+