Get Updates
Get notified of breaking news, exclusive insights, and must-see stories!

ಐಎಸ್‌ಐಎಸ್‌ ಸೇರೋದ್ರಲ್ಲಿ ಕರ್ನಾಟಕದವರೇ ಫಸ್ಟ್!

ಬೆಂಗಳೂರು, ನವೆಂಬರ್, 24: ಕರ್ನಾಟಕದಿಂದಲೇ ಅತಿ ಹೆಚ್ಚು ಯುವಕರು ಐಎಸ್ ಐಸ್ ಉಗ್ರ ಸಂಘಟನೆ ಸೇರುತ್ತಿದ್ದಾರೆಯೇ? ಇಂಥದ್ದೊಂದು ಗಂಭೀರ ಪ್ರಶ್ನೆ ಹುಟ್ಟಿಕೊಳ್ಳಲು ಸಿಕ್ಕಿರುವ ಮಾಹಿತಿಗಳು ಪುಷ್ಠಿ ನೀಡುತ್ತವೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳದ ನಿವಾಸಿ ಅರ್ಮಾರ್ ಎಂಬಾತ ಸಂಘಟನೆಗೆ ಯುವಕರನ್ನು ಸೆಳೆಯುವುದರಲ್ಲಿ ಸದಾ ಕಾರ್ಯನಿರತನಾಗಿದ್ದ. 'ಅನ್ಶರ್ ಉಲ್ ತಹೀದ್' ಎಂಬ ಸಂಸ್ಥೆ ಹೆಸರಿನಲ್ಲಿ ಯುವಕರಿಗೆ ಗಾಳ ಹಾಕುತ್ತಿದ್ದ ಎಂಬ ಸಂಗತಿ ಬಯಲಾಗಿದೆ.[ಐಎಸ್ ಐಎಸ್ ಸೇರುವ ಯುವಕರಿಗೆ ಹಣ, ಕೆಲಸದ ಆಮಿಷ]

Karnataka tops list of ISIS recruits

ಕೆಲ ತಿಂಗಳ ಹಿಂದೆಯೇ ಅರ್ಮಾರ್ ಸಾವಿಗೀಡಾಗಿದ್ದ ಎಂಬ ಸುದ್ದಿ ಬಂದಿತ್ತು. ಆದರೆ ಭಾರತದ ಗುಪ್ತಚರದಳ ಈ ಮಾಹಿತಿಯನ್ನು ದೃಢಪಡಿಸಿರಲಿಲ್ಲ. ಆದರೆ ಇದೀಗ ಐಎಸ್ ಐಎಸ್ ಪರವಾಗಿ ಕೆಲಸ ಮಾಡುತ್ತಿದ್ದ 6 ಜನ ಭಾರತೀಯ ಮೂಲದವರು ಇರಾಕ್ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದ್ದು ಅದರಲ್ಲಿ ಅರ್ಮಾರ್ ಸಹ ಸೇರಿದ್ದಾನೆ ಎಂದು ತಿಳಿಸಿದೆ.

ಸಾವನ್ನಪ್ಪಿದ್ದ ಆರು ಜನ ಯಾರು?
ಒಟ್ಟು ಆರು ಜನ ಭಾರತೀಯರು ಸಾವನ್ನಪ್ಪಿದ್ದಾರೆ. ತೆಲಂಗಾಣದ ಅತೀಫ್ ವಾಸೀಮ್, ಬೆಂಗಳೂರು ಶಿವಾಜಿನಗರದ ಮೊಹಮದ್ ಉಮರ್, ಭಟ್ಕಳದ ಮೌಲಾನಾ ಅಬ್ದುಲ್ ಕಬೀರ್ ಸುಲ್ತಾನ್ ಅರ್ಮಾರ್, ಥಾಣೆಯ ಸಹೀಮ್ ಫಾರೂಕ್ ಥಂಕಿ, ಬೆಂಗಳೂರಿನ ಫಯಾಜ್ ಮಸೂದ್ , ಅಜಂಗಢದ ಮೊಹಮದ್ ಸಜೀದ್ ಸಾವಿಗೀಡಾದ ಆರು ಜನರು.[ಭಾರತಕ್ಕೆ ಬಂದ ಉಗ್ರ ನವೀದ್ ಎಲ್ಲಿದ್ದಾನೆ?]

ಈಗ ಭಾರತದ 23 ಜನ ಐಸ್ ಐಸ್ ಜತೆ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 5 ಜನ ಕರ್ನಾಟಕದವರು, 3 ಜನ ತಮಿಳುನಾಡಿನವರು ಮತ್ತು ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳದ ತಲಾ ನಾಲ್ಕು ಜನ ಸೇರಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿಯಲ್ಲಿ ತಿಳಿಸಿದೆ.

ಭಟ್ಕಳದ ಅರ್ಮಾರ್ ಸಾವಿನ ನಂತರ ಆತನ ಸಹೋದರ ಶಫಿ ಅರ್ಮಾರ್ ಚಲನವಲನಗಳ ಮೇಲೆ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ಯುಎಇಯಿಂದ ಶಫಿ ಕೆಲ ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದಾನೆ ಎಂಬ ಮಾಹಿತಿಯಿದೆ. ಈತ ಅಲ್ಲಿಂದ ಸಿರಿಯಾಕ್ಕೆ ಹಾರಲು ಯತ್ನ ನಡೆಸಿದ್ದಾನೆ ಎಂದು ಇಲಾಖೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+