ಆಧಾರ್ ಇಲ್ಲದೆ ಅಸುನೀಗಿದ ಕಾರ್ಗಿಲ್ ಹುತಾತ್ಮನ ಪತ್ನಿ
ರೋಹ್ಟಕ್, ಡಿಸೆಂಬರ್ 30 : ಆಧಾರ್ ಕಾರ್ಡ್ ನೀಡಲಿಲ್ಲ ಎಂಬ ಕಾರಣಕ್ಕೆ, ಆಸ್ಪತ್ರೆಗೆ ದಾಖಲಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಕಾರ್ಗಿಲ್ ಯೋಧನ ಪತ್ನಿಯೊಬ್ಬರು ಅಸುನೀಗಿದ ಹೃದಯವಿದ್ರಾವಕ ಘಟನೆ ಶುಕ್ರವಾರ ನಡೆದಿದೆ.
ಈ ಘಟನೆ, ಎಲ್ಲ ಸೇವೆಗಳಿಗೂ ಆಧಾರ್ ಅಗತ್ಯವೆ ಎಂಬ ಚರ್ಚೆಗೆ ಮತ್ತೆ ನಾಂದಿ ಹಾಡಿದೆ. ತುರ್ತಾಗಿ ಆಸ್ಪತ್ರೆಗೆ ದಾಖಲಿಸಬೇಕಾದಂಥ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕೇಳುವ ಅಗತ್ಯವಿತ್ತೆ ಎಂಬ ಜಿಜ್ಞಾಸೆಗೂ ಈ ಘಟನೆ ಕಾರಣವಾಗಿದೆ.

ಹರ್ಯಾಣ ರಾಜ್ಯದ ಸೋನಿಪತ್ ನ ಖಾಸಗಿ ಟ್ಯುಲಿಪ್ ಆಸ್ಪತ್ರೆ 55 ವರ್ಷದ ಶಕುಂತಲಾ ದೇವಿಯವರು ಅಸುನೀಗಿರುವ ದುರ್ದೈವಿ. ಅವರು ಗಂಟಲು ಕ್ಯಾನ್ಸರ್ ಮತ್ತು ಹೃದಯಬೇನೆಯಿಂದ ಬಳಲುತ್ತಿದ್ದರು.
ಪಾಕಿಸ್ತಾನದ ವಿರುದ್ಧ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿ, 8ನೇ ಜಾಟ್ ರೆಜಿಮೆಂಟ್ ನಲ್ಲಿದ್ದ ಹವಾಲ್ದಾರ್ ಲಕ್ಷ್ಮಣ್ ದಾಸ್ ಅವರು ಗುಂಡು ತಗುಲಿ 1999ರ ಜೂನ್ 9ರಂದು ಹುತಾತ್ಮರಾಗಿದ್ದರು. ಅವರ ಪತ್ನಿಯೇ ಶಕುಂತಲಾ ದೇವಿಯವರು.
ಅವರ ಆರೋಗ್ಯ ವಿಷಮಿಸಿದ್ದರಿಂದ ಮೊದಲಿಗೆ ಅವರನ್ನು ಮಾಜಿ ಯೋಧರಿಗಾಗಿ ಇರುವ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ಅವರನ್ನು ಟ್ಯುಲಿಪ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ಶಿಫಾರಸು ಮಾಡಲಾಗಿದೆ. ಟ್ಯುಲಿಪ್ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವ ಮೊದಲು ಆಧಾರ್ ಮೂಲಪ್ರತಿ ಕೇಳಿದ್ದಾರೆ.
ಶಕುಂತಲಾ ದೇವಿ ಅವರ ಬಳಿ ಆಧಾರ್ ನ ಪ್ರತಿ ಇದ್ದರೂ ಅದನ್ನು ಆಸ್ಪತ್ರೆಯವರು ಸ್ವೀಕರಿಸಿಲ್ಲ ಎಂದು ಶಕುಂತಲಾ ದೇವಿಯವರ ಮಗ ಪವನ್ ಕುಮಾರ್ ಬಾಲ್ಯಾನ್ ಅವರು ದೂರಿದ್ದಾರೆ. ಮೂಲ ಆಧಾರ್ ಕಾರ್ಡ್ ತನ್ನಿ ಅಥವಾ ಇಲ್ಲಿಂದ ತೊಗಲಿ ಎಂದು ಆಸ್ಪತ್ರೆಯ ಅಧಿಕಾರಿ ಹೇಳಿದ್ದಾರೆ ಎಂದು ದೂರಲಾಗಿದೆ.
90 ನಿಮಿಷಗಳ ವಾಗ್ವಾದದ ನಂತರ ತೀವ್ರ ಹೃದಯಬೇನೆಯಿಂದ ನರಳುತ್ತಿದ್ದ, ಅಳುತ್ತಿದ್ದ ಶಕುಂತಲಾ ಅವರನ್ನು ಮತ್ತೆ ಮಾಜಿ ಯೋಧರಿಗಾಗಿ ಇರುವ ಸೇನಾ ಆಸ್ಪತ್ರೆಗೆ ಕರೆತರಲಾಗಿದೆ. ಅಷ್ಟರಲ್ಲಿ ಶಕುಂತಲಾ ದೇವಿಯವರ ಪ್ರಾಣಪಕ್ಷಿ ಹಾರಿಹೋಗಿದೆ.
ಆಸ್ಪತ್ರೆಯವರು ಈ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ. ಶಕುಂತಲಾ ದೇವಿಯವರನ್ನು ಅಡ್ಮಿಟ್ ಮಾಡಿಕೊಳ್ಳಲು ಎಲ್ಲ ಸಿದ್ಧತೆ ನಡೆದಿತ್ತು. ಆಧಾರ್ ಮೂಲ ಪ್ರತಿಯನ್ನು ತರಲು ಅವರಿಗೆ ಹೇಳಿತ್ತಾದರೂ, ಅನಗತ್ಯವಾಗಿ ಜಗಳವಾಡಿ ಅವರು ರೋಗಿಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ನಮ್ಮ ಬಳಿ ಸಿಸಿಟಿವಿ ಫುಟೇಜ್ ಕೂಡ ಇದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅಭಿಮನ್ಯು ಕುಮಾರ್ ಸಮಜಾಯಿಷಿ ನೀಡಿದ್ದಾರೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications