"ನೀರಾ ಮತ್ತೆ ಯಾರ ಫೋಟೋಕ್ಕೂ ಹಾರ ಹಾಕ್ಬೇಡಮ್ಮ"
ರಾಂಚಿ, ಜುಲೈ 28: ಜಾರ್ಖಂಡ್ ರಾಜ್ಯದ ಶಿಕ್ಷಣ ಸಚಿವೆ ನೀರಾ ಯಾದವ್ ಅವರು ಕಳೆದ ವಾರ ದೊಡ್ಡ ಪ್ರಮಾದ ಎಸಗಿದ್ದು ಎಲ್ಲರಿಗೂ ನೆನಪಿರಬಹುದು. ಕಾರ್ಯಕ್ರಮವೊಂದರಲ್ಲಿ ಡಾ. ಅಬ್ದುಲ್ ಕಲಾಂ ಅವರು ಬದುಕಿದ್ದಾಗಲೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ಈಗ ಕಲಾಂ ಅಗಲಿಕೆಯ ನಂತರವೂ ಆಕೆಯನ್ನು ಟ್ವಿಟ್ಟರ್ ಲೋಕದಲ್ಲಿ ಕಾಡಲಾಗುತ್ತಿದೆ.[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]
ಮೇಡಂ ನೀರಾ ಯಾದವ್ ಅವರೇ ದಯವಿಟ್ಟು ಯಾರ ಭಾವಚಿತ್ರಕ್ಕೂ ಇನ್ಮುಂದೆ ಮುಂಚಿತವಾಗಿ ಹಾರ ಹಾಕಬೇಡಿ. ನೀವು ಶಿಕ್ಷಣ ಸಚಿವೆಯೋ ಅಥವಾ ಜ್ಯೋತಿಷಿಯೋ ಗೊತ್ತಾಗುತ್ತಿಲ್ಲ. ಭವಿಷ್ಯದ ಬಗ್ಗೆ ನಿಮಗೆ ಮೊದಲು ತಿಳಿದಿರುವಂತಿದೆ ಎಂದು ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ. [ಸರಳ ವ್ಯಕ್ತಿತ್ವದ ಅಬ್ದುಲ್ ಕಲಾಂ ಸಂಕ್ಷಿಪ್ತ ಪರಿಚಯ]
ಜುಲೈ22 ರಂದು ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯ ಶಾಲಾ ಕಾರ್ಯಕ್ರಮವೊಂದರಲ್ಲಿ ಸಚಿವೆ ನೀರಾ ಅವರು ಕಲಾಂ ಅವರ ಚಿತ್ರಕ್ಕೆ ತಿಲಕ ಇಟ್ಟು, ಶ್ರದ್ಧಾಂಜಲಿ ಅರ್ಪಿಸಿದ್ದರು. ['ಕ್ಷಿಪಣಿ ಮಾನವ' ಎಪಿಜೆ ಅಬ್ದುಲ್ ಕಲಾಂ ವಿಧಿವಶ]
ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಸತ್ತವರ ಚಿತ್ರಕೆಕ್ ಮಾತ್ರ ತಿಲಕ ಇಟ್ಟು ಹಾರ ಹಾಕಿ ಶ್ರದ್ಧಾಂಜಲಿ ನೀಡಲಾಗುತ್ತದೆ. ಅದರೆ, ಈ ಘಟನೆ ನಡೆದಾಗ ಕಲಾಂ ಅವರು ಇನ್ನೂ ಆರೋಗ್ಯದಿಂದ ಇದ್ದರು. ಕಳೆದ ವಾರವೇ ನೀರಾ ಅವರ ವಿರುದ್ಧ ಟ್ವೀಟ್ ಲೋಕ ತಿರುಗಿ ಬಿದ್ದಿತ್ತು. ಈಗ ಮತ್ತೊಮ್ಮೆ ನೀರಾರನ್ನು ಹಿಗ್ಗಾ ಮುಗ್ಗಾ ಟ್ವೀಟ್ ನಿಂದ ಥಳಿಸಲಾಗುತ್ತಿದೆ.

ಕ್ಷಮೆಯಾಚಿಸಿದರೂ ಸಮರ್ಥನೆ ಕೊಟ್ಟಿದ್ದ ಮೀರಾ
ತಾವು ಮಾಡಿದ ಪ್ರಮಾದಕ್ಕೆ ಕ್ಷಮೆಯಾಚಿಸಿದರೂ, ಸಮರ್ಥನೆ ಕೊಟ್ಟಿದ್ದ ಮೀರಾ ಅವರು, ಹಿರಿಯರಿಗೆ ಈ ರೀತಿ ಗೌರವ ಕೊಡುವುದರಲ್ಲಿ ತಪ್ಪೇನಿಲ್ಲ ಎಂದಿದ್ದರು.
|
ಟ್ವಿಟ್ಟರ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ ಚಿತ್ರ
ಟ್ವಿಟ್ಟರ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ ಚಿತ್ರ ಸ್ಥಳೀಯ ಪತ್ರಿಕೆ ಪ್ರಭಾತ್ ಕಬರ್ ನಲ್ಲಿ ಪ್ರಕಟವಾಗಿದ್ದಾಗಿದೆ.
|
ಹಿಂದೂ, ಮುಸ್ಲಿಂ ಶ್ರದ್ಧಾಂಜಲಿ ವಿಧಾನ
ಹಿಂದೂ, ಮುಸ್ಲಿಂ ಶ್ರದ್ಧಾಂಜಲಿ ವಿಧಾನಗಳನ್ನು ವಿವರಿಸಿದ ಸಾರ್ವಜನಿಕರು.
|
ದೇಶದ ಶಿಕ್ಷಣ ವ್ಯವಸ್ಥೆ ಹೇಗಿದೆ
ದೇಶದ ಶಿಕ್ಷಣ ವ್ಯವಸ್ಥೆ ಹೇಗಿದೆ ನೋಡಿ, ಶಿಕ್ಷಣ ಸಚಿವೆ ಮಾಡಿದ ಕೃತ್ಯಕ್ಕೆ ಜೈ ಹೋ
|
ಮೋದಿ ಸಂಪುಟದಲ್ಲಿ ಆಕೆಗೆ ಸ್ಥಾನ ಕಲ್ಪಿಸಿ
ಮೋದಿ ಸಂಪುಟದಲ್ಲಿ ಆಕೆಗೆ ಸ್ಥಾನ ಕಲ್ಪಿಸಿ, ಜ್ಯೋತಿಷ್ಯ ಖಾತೆ ಕೊಟ್ಟುಬಿಡಿ.
|
ಯಾರದು ಕಲಾಂಗೆ ಹಾರ ಹಾಕಿ ನಮಿಸಿದ್ದು
ಯಾರದು ಕಲಾಂಗೆ ಹಾರ ಹಾಕಿ ನಮಿಸಿದ್ದು, ಆಕೆಗೆ ಹೇಳಿ ಯಾರಿಗೂ ಬದುಕಿದ್ದಾಗ ಹಾರ ಹಾಕ್ಬೇಡ ಎಂದು.
|
ಛೇ ಎಂಥಾ ಪ್ರಮಾದ ಮಾಡಿಬಿಟ್ಟರು
ಛೇ ಎಂಥಾ ಪ್ರಮಾದ ಮಾಡಿಬಿಟ್ಟರು, ಆರು ದಿನಗಳಲ್ಲೇ ಕಲಾಂ ಅವರು ಇಹಲೋಕ ತ್ಯಜಿಸಿದರು.
|
ಯಾರಾದ್ರು ನೀರಾ ಅವರ ಸಂದರ್ಶನ ಮಾಡುತ್ತೀರಾ?
ಯಾರಾದ್ರು ನೀರಾ ಅವರ ಸಂದರ್ಶನ ಮಾಡುತ್ತೀರಾ? ಆಕೆ ಈಗ ಏನು ಹೇಳುತ್ತಾರೆ ಕೇಳಬೇಕು.
-
CTET ಫೆಬ್ರವರಿ 2026ರ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲೇ ಪ್ರಕಟ: ಸ್ಕೋರ್ಕಾರ್ಡ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸರ್ಕಾರಿ PU ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 9,383 ರೂ. ಲಕ್ಷ ಅನುದಾನ ಮಂಜೂರು -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ











Click it and Unblock the Notifications