ಜೂನ್ 23 ವಿಶ್ವ ವಿಧವೆಯರ ದಿನ, ಬನ್ನಿ ಅವರಿಗೆ ಧೈರ್ಯ ತುಂಬೋಣ
ನವ ದೆಹಲಿ, ಜೂನ್ 23: ಪುರುಷರು ಮರು ಮದುವೆ ಆಗುವುದಾದರೆ ಮಹಿಳೆಯರು ಏಕೆ ಆಗುವಂತಿಲ್ಲ ಹೀಗೆಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಹೀಗೆ ಹೇಳುವುದಕ್ಕೆ ಕಾರಣ ಇಂದು ಅಂತರರಾಷ್ಟ್ರೀಯ ವಿಧವೆಯರ ದಿನ.
ಹೌದು ಜೂನ್ 23 ಅಂತರಾಷ್ಟ್ರೀಯ ವಿಧವೆಯರ ದಿನ. ಪತಿಯನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿರುವವರಿಗಾಗಿಯೇ ಈ ದಿನ ಮೀಸಲು.
ಪತಿಯನ್ನು ಕಳೆದು ಒಂಟಿಯಾದ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ಧೈರ್ಯ ತುಂಬಲೆಂದೇ ಅಂತರಾಷ್ಟ್ರೀಯ ವಿಧವೆಯರ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

ಜೂನ್ 23ರಂದೇ ಆಚರಣೆ ಏಕೆ
1954 ರಲ್ಲಿ ಮೊದಲ ಬಾರಿಗೆ ವಿಶ್ವ ವಿಧವೆಯರ ದಿನ ಆಚರಿಸಲಾಯಿತು. ಲೂಂಬಾ ಫೌಂಡೇಶನ್ ಮೊದಲ ಬಾರಿಗೆ ಇದನ್ನು ಚಾಲ್ತಿಗೆ ತಂದಿತು. ಇದೇ ದಿನದಂದು ಆಚರಿಸಲು ಕಾರಣ ಇದೇ ದಿನ ಲೂಂಬಾ ಫೌಂಡೇಶನ್ ಸಂಸ್ಥಾಪಕರ ತಾಯಿ ವಿಧವೆಯಾಗಿದ್ದರು ಹಾಗಾಗಿ ಜೂನ್ 23ರನ್ನೇ ವಿಶ್ವ ವಿಧವೆಯರ ದಿನ ಆಚರಿಸಲಾಗುತ್ತಿದೆ.

ಭಾರತೀಯರಿಂದ ಆಚರಣೆಗೆ ಬಂದ ದಿನ
ವಿಶ್ವ ವಿಧವೆಯರ ದಿನ ಆಚರಣೆಯ ಹಿಂದೆ ಇರುವುದು ಭಾರತೀಯರ ಇಚ್ಛಾಶಕ್ತಿ ಮತ್ತು ಕಳಕಳಿ. ಹೌದು ವಿಧವೆಯರ ದಿನ ಆಚರಣೆಗೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಲೂಂಬಾ ಫೌಂಡೇಶನ್ನ ಮುಖ್ಯಸ್ಥ ಲಾರ್ಡ್ ಲೂಂಬಾ ಪಂಜಾಬ್ನವರು. ಅವರ ತಾಯಿ ಪುಷ್ಪವತಿ ಲೂಂಬಾ ಅವರು ವಿಧವೆಯಾದ ದಿನವೇ ವಿಧವೆಯರ ದಿನ ಆಚರಿಸಲಾಗುತ್ತದೆ.

ಸೇನೆಯಲ್ಲಿ ತಪ್ಪದೆ ಆಚರಣೆ
ಭಾರತೀಯ ಸೇನೆಯಲ್ಲಿ ವಿಶ್ವ ವಿಧವೆಯರ ದಿನವನ್ನು ತಪ್ಪದೆ ಆಚರಿಸಲಾಗುತ್ತದೆ. ದೇಶಕ್ಕಾಗಿ ಪತಿಯನ್ನು ಕಳೆದುಕೊಂಡು ಒಂಟಿಯಾದ ಮಹಿಳೆಯರನ್ನು ಅಂದು ಸೇನೆ ನೆನೆಸಿಕೊಳ್ಳುತ್ತದೆ. ವಿಧವೆಯರನ್ನು ಕರೆಸಿ ಉಡುಗೊರೆಗಳನ್ನು ಕೊಡುವ ವಾಡಿಕೆ ಇದೆ.

ಬೃಂದಾವನದ ವಿಧವೆಯರು
ಮಥುರಾ ಪ್ರಮುಖವಾಗಿಸಿಕೊಂಡು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬೃಂದಾವನದ ವಿಧವೆಯರು ಎಂಬ ಆಚರಣೆಯನ್ನೇ ಮಾಡಿಕೊಂಡು ಬರಲಾಗಿದೆ. ಇದು ವಿಧವೆಯರ ದಿನದಂದು ಮಾಡದಿದ್ದರೂ ಸಹಿತ ಅವರನ್ನೂ ಸಂಸ್ಕೃತಿಯ ಭಾಗವಾಗಿಸಿಕೊಳ್ಳುವ ಪ್ರಯತ್ನದಿಂದ ಈ ಆಚರಣೆ ಚಾಲ್ತಿಯಲ್ಲಿದೆ.

ಸುಖಗಳಿಂದ ದೂರ ಇಟ್ಟಿದ್ದೇವೆ
ವಿಧವೆಯರನ್ನು ಎಲ್ಲಾ ರೀತಿಯ ಸುಖಗಳಿಂದ ದೂರವೇ ಇಟ್ಟಿದೆ ನಮ್ಮ ಸಂಸ್ಕೃತಿ. ಅಲಂಕಾರ, ಸಂಸರ ಸುಖ, ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳದಂತೆ ಮಾಡುವ ಸಂಪ್ರದಾಯಗಳು ನಮ್ಮಲ್ಲಿ ಈಗಲೂ ಚಾಲ್ತಿಯಲ್ಲಿವೆ. ನಮ್ಮೊಳಗೆ ನೀವು ಒಬ್ಬರು ಎಂದು ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದಲೇ ವಿಶ್ವ ವಿಧವೆಯರ ದಿನ ಅವಶ್ಯಕ.

ಇಂದು ನಡೆದಿದೆ ಕಾರ್ಯಕ್ರಮ
ಇಂದು (ಜೂನ್ 23) ನವ ದೆಹಲಿಯಲ್ಲಿ ಲೂಂಬಾ ಫೌಂಡೇಶನ್ ವತಿಯಿಂದ ನಡೆದ ವಿಧವೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭಾಗವಹಿಸಿದ್ದರು. ಸೇರಿದ್ದ ನೂರಾರು ವಿಧವೆಯರನ್ನುದ್ದೇಶಿಸಿ ಧೈರ್ಯದ ಮಾತುಗಳನ್ನಾಡಿದರು. ಪುರುಷರು ಮರುವಿವಾಹ ಆಗುವುದಾದರೆ ಮಹಿಳೆಯರೇಕೆ ಆಗುವಂತಿಲ್ಲ ಎಂದರು ಅವರು.
-
Allu Arjun: ವಿವಾಹ ವಾರ್ಷಿಕೋತ್ಸವ: ಪತ್ನಿಗೆ 1.81 ಕೋಟಿ ಬೆಲೆಯ ಮರ್ಸಿಡಿಸ್ ಕಾರು ಗಿಫ್ಟ್ ಕೊಟ್ಟ ಅಲ್ಲು ಅರ್ಜುನ್ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಅವಳ ಮಾತಿನ ಭಯದಲ್ಲಿ ಬದುಕುವ ಗಂಡಸರು: ಹೇಳದಿರುವ ನೋವಿನ ಕಥೆಗಳು -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್












Click it and Unblock the Notifications