Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
ತಿರುಪತಿ ತಿರುಮಲ ಶ್ರೀವಾರಿ ದೇವಾಸ್ಥಾನದ 2023-24ರ ಆಸ್ತಿ ವಿವರವನ್ನು ಟಿಟಿಡಿ ಹಂಚಿಕೊಂಡಿದೆ. ಈ ವರ್ಷ ತಿಮ್ಮಪ್ಪನ ಆದಾಯ ದುಪ್ಪಟ್ಟಾಗಿದೆ. ಹಾಗಾದರೆ ತಿರುಮಲ ಶ್ರೀವಾರಿ ಆಸ್ತಿ ಎಷ್ಟಿದೆ? ಈ ಬಗ್ಗೆ ವಿವರ ಇಲ್ಲಿದೆ.
ತಿರುಮಲ ದೇವರ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇಶ ವಿದೇಶಗಳಿಂದ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ನಿತ್ಯವೂ ಸ್ವಾಮಿಗೆ ಸಾಕಷ್ಟು ಕಾಣಿಕೆಗಳನ್ನು ಅರ್ಪಿಸುತ್ತಾರೆ. ಲೆಕ್ಕವಿಲ್ಲದಷ್ಟು ಚಿನ್ನ ನಿತ್ಯ ಕಾಣಿಕೆ ರೂಪದಲ್ಲಿ ತಿಮ್ಮಪ್ಪನ ಖಜಾನೆಯನ್ನು ತಲುಪುತ್ತದೆ. ಅಲ್ಲದೆ ಸಾವಿರಾರು ಕೆಜಿ ಚಿನ್ನ, ಸಾವಿರಾರು ಕೋಟಿ ಠೇವಣಿ ಇಡಲಾಗಿದೆ. ಹೀಗಾಗಿ ತಿರುಪತಿ ತಿಮ್ಮಪ್ಪನನ್ನು ಶ್ರೀಮಂತ ದೇವರು ಎಂದು ಕರೆಯಲಾಗುತ್ತದೆ. ಹಾಗಾದರೆ ತಿರುಮಲ ಶ್ರೀವಾರಿ ಆಸ್ತಿ ಎಷ್ಟಿದೆ ಅನ್ನೋದನ್ನು ನೋಡೋಣ.

ಕಲಿಯುಗ ತಿರುಮಲದ ವೆಂಕಟೇಶ್ವರ ಸ್ವಾಮಿಯ ಆದಾಯ ಪ್ರತಿ ವರ್ಷ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. 2023-24ರಲ್ಲಿ ಟಿಟಿಡಿ ವಿವಿಧ ಬ್ಯಾಂಕ್ಗಳಲ್ಲಿ ಒಟ್ಟು 1,161 ಕೋಟಿಗಳ ಸ್ಥಿರ ಠೇವಣಿಗಳನ್ನು ಮಾಡಿದೆ. ಇದು ಟಿಟಿಡಿಯಿಂದ ಈವರೆಗೆ ಮಾಡಿದ ಅತಿ ಹೆಚ್ಚು ನಗದು ಠೇವಣಿ ಮೊತ್ತವಾಗಿದೆ.
ಅಲ್ಲದೆ 2023-24ರಲ್ಲಿ 1,031 ಕೆಜಿ ಚಿನ್ನದ ಠೇವಣಿ ಮತ್ತು ಒಟ್ಟು ಚಿನ್ನದ ನಿಕ್ಷೇಪಗಳು 11,329 ಕೆಜಿಯಷ್ಟು ಕಾಣಿಕೆಯಾಗಿ ಬಂದಿವೆ. ಅಲ್ಲದೆ ಇವುಗಳ ಮೇಲೆ ವಾರ್ಷಿಕವಾಗಿ 1,200 ಕೋಟಿ ರೂ.ಗಳ ಬಡ್ಡಿ ಆದಾಯವನ್ನು ಟಿಟಿಡಿ ಪಡೆಯುತ್ತಿದೆಯಂತೆ. ಕೊರೊನಾ ನಂತರ ಪ್ರತಿ ತಿಂಗಳು 100 ಕೋಟಿಗೂ ಹೆಚ್ಚು ಹುಂಡಿ ಕಾಣಿಕೆ ಬರುತ್ತಿದೆ.
ಹೀಗಾಗಿ ಕಳೆದ ವರ್ಷ ಅಂದರೆ ಕೊರೊನಾ ಬಳಿಕ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದ್ದು, ಈ ವರ್ಷವೂ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಾರಿ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ.
ಏ.20 ರಿಂದ 22 ರವರೆಗೆ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಬುಗ್ಗೋತ್ಸವ
ತಿರುಪತಿ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಬುಗ್ಗೋತ್ಸವ ಏಪ್ರಿಲ್ 20 ರಿಂದ 22ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಗೋವಿಂದರಾಜಸ್ವಾಮಿ ದೇವಸ್ತಾನದಲ್ಲಿ ಶ್ರೀದೇವಿ ಮತ್ತು ಭೂದೇವಿಗೆ ಪೂಜೆ ಸಲ್ಲಿಸಲಾಗುತ್ತದೆ.
ಮಧ್ಯಾಹ್ನ 2.30ರಿಂದ 4.30ರವರೆಗೆ ಸ್ವಾಮಿ, ಅಮ್ಮನವರ ಉತ್ಸವಮೂರ್ತಿಗಳಿಗೆ ಸ್ನಾನ ತಿರುಮಂಜನ, ಸಮರ್ಪಣ ನಡೆಯಲಿದೆ. ಸಂಜೆ 5.30ರಿಂದ 6ರವರೆಗೆ ಉಭಯನಂಚರುಗಳೊಂದಿಗೆ ಶ್ರೀವಾರಿ ಊಂಜಾಲಸೇವೆ ನಡೆಯಲಿದ್ದು, ಬಳಿಕ ಭಕ್ತರಿಗೆ ವಸಂತ ದರ್ಶನಭಾಗ್ಯ ನೀಡಲಾಗುವುದು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications