ಜಯಾ ಭವಿಷ್ಯ ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ನವದೆಹಲಿ, ಜೂನ್ 07: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಮಂಗಳವಾರ ಮುಕ್ತಾಯವಾಗಿದ್ದು ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಜಯಾ ವಿರುದ್ಧ ಕರ್ನಾಟಕ ಸರ್ಕಾರ ಹಾಗೂ ಡಿಎಂಕೆ ಸಲ್ಲಿಸಿದ್ದ ಮೇಲ್ಮನವಿಗಳ ಅರ್ಜಿ ವಿಚಾರಣೆ ಮುಕ್ತಾಯವಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಪರ ವಕೀಲ ಬಿ.ವಿ ಆಚಾರ್ಯ ಆರ್ಗ್ಯೂಮೆಂಟ್ ಮಾಡಿ ಮುಗಿಸಿದ್ದಾರೆ. ಎರಡು ಕಡೆಯವರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಪಿಸಿ ಘೋಷ್ ಹಾಗೂ ಅಮಿತ್ವ ರಾಯ್ ಅವರನ್ನೊಳಗೊಂಡ ಪೀಠ ತೀರ್ಪನ್ನು ಕಾಯ್ದಿರಿಸಿದೆ.[ಅಮ್ಮ ರಿಟರ್ನ್ಸ್, ತಮಿಳುನಾಡಲ್ಲಿ ಜಯಲಲಿತಾ ಜಯಭೇರಿ]
ಅನೇಕ ವರ್ಷಗಳ ಕಾಲ ನಡೆದ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರಿಗೆ ಕರ್ನಾಟಕ ಹೈಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಹಾಗೂ ಡಿಎಂಕೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.[ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]
ಮುಂದೇನಾಗಬಹುದು?
ಸುಪ್ರೀಂ
ಕೋರ್ಟ್
ತೀರ್ಪು
ಜಯಾ
ಪರ
ಬಂದರೆ
ಯಾವುದೇ
ಸಮಸ್ಯೆ
ಉಂಟಾಗುವುದಿಲ್ಲ.
ಒಂದು
ವೇಳೆ
ಜಯಲಲಿತಾ
ದೋಷಿ
ಎಂದು
ಬಂದರೆ
ಜಯಾ
ತಮಿಳುನಾಡು
ಸಿಎಂ
ಗಾದಿ
ಬಿಟ್ಟು
ಕೆಳಕ್ಕೆ
ಇಳಿಯಬೇಕಾಗುತ್ತದೆ.
ಒಂದು
ಲೆಕ್ಕದಲ್ಲಿ
ಕರ್ನಾಟಕಕ್ಕೆ
ಸಿಗುವ
ಜಯ
ಇದಾಗಲಿದೆ.