ಪರಿಸ್ಥಿತಿಯ ಪ್ರಭು ರಾಹುಲ್ ರಿಂದ ಮಾಸ್ಟರ್ ಸ್ಟ್ರೋಕ್ : ಶತ್ರುಘ್ನ ಬಣ್ಣನೆ
ನವದೆಹಲಿ, ಮಾರ್ಚ್ 26 : ಲೋಕಸಭೆಗೆ ಟಿಕೆಟ್ ಸಿಗದೆ ಅವಗಣನೆಗೆ ಒಳಗಾಗಿರುವ ಬಿಜೆಪಿಯ ಆಂತರಿಕ ಟೀಕಾಕಾರ ಶತ್ರುಘ್ನ ಸಿನ್ಹಾ ಅವರು, ಬಡವರಿಗೆ ವರ್ಷಕ್ಕೆ 72 ಸಾವಿರ ರು. ಕೊಡುತ್ತೇನೆನ್ನುವ ರಾಹುಲ್ ಗಾಂಧಿ ಘೋಷಣೆಯನ್ನು 'ಮಾಸ್ಟರ್ ಸ್ಟ್ರೋಕ್' ಎಂದು ಬಣ್ಣಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಜನಸಂಖ್ಯೆಯ ಶೇ.20ರಷ್ಟಿರುವ ಬಡ ಜನತೆಗೆ ವರ್ಷಕ್ಕೆ 72 ಸಾವಿರ ರುಪಾಯಿ ಆದಾಯ ದೊರಕಿಸಿಕೊಡುವ ಯೋಜನೆಯನ್ನು ಹಾಡಿ ಹೊಗಳಿರುವ ಶತ್ರುಘ್ನ ಸಿನ್ಹಾ ಅವರು, ರಾಹುಲ್ ಅವರನ್ನು 'ಪರಿಸ್ಥಿತಿಯ ಪ್ರಭುವಿನ ಮಾಸ್ಟರ್ ಸ್ಟ್ರೋಕ್' ಎಂದು ಕರೆದಿದ್ದಾರೆ.
ರಾಹುಲ್ ಗಾಂಧಿ ಅವರ ಈ ನಡೆ ಯಾವ ರೀತಿ ಅಲ್ಲೋಲಕಲ್ಲೋ ಎಬ್ಬಿಸಿದೆಯೆಂದರೆ, ಕೆಲ ಪ್ರಮುಖ ನಾಯಕರು ಪತ್ರಿಕಾಗೋಷ್ಠಿ ಕರೆದು, ಇಡೀ ಘೋಷಣೆಯನ್ನು 'ಕಪಟ ನಡೆ' ಎಂದು ಜರಿಯುವಂತಾಗಿದೆ ಎಂದು ಪಟ್ನಾ ಸಾಹಿಬ್ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಶತ್ರುಘ್ನ ಸಿನ್ಹಾ ಅವರು ರಾಹುಲ್ ಅವರನ್ನು ಹಾಡಿ ಹೊಗಳಿದ್ದಾರೆ.
It's a masterstroke by the 'master of situation', @RahulGandhi - declaring #MinimumIncomeGuarantee scheme. It has rattled our people so much that some of our prominent people had to rush for a press conference, calling the whole declaration/ announcement "chhal kapat".
— Shatrughan Sinha (@ShatruganSinha) March 26, 2019
ನರೇಂದ್ರ ಮೋದಿಯವರ ಸರಕಾರವನ್ನು ಟೀಕಿಸಲು ಯಾವುದೇ ಅವಕಾಶವನ್ನು ಬಿಟ್ಟುಕೊಡದ ಮಾಜಿ ಬಾಲಿವುಡ್ ನಟ ಸಿನ್ಹಾ ಅವರು, ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ದೇಶದ 12 ಕೋಟಿ ರೈತರಿಗೆ ವರ್ಷಕ್ಕೆ 6 ಸಾವಿರ ರುಪಾಯಿ ನೀಡುವ ಯೋಜನೆಯನ್ನು ಶ್ಲಾಘಿಸಿರಲಿಲ್ಲ.

ನೀವು ದೇಶದ ಜನತೆಗೆ 15 ಲಕ್ಷ ಕೊಡುವುದಾಗಿ, ರೈತರ ಸಾಲ ಮನ್ನಾ ಮಾಡುವುದಾಗಿ, ಸಬ್ಸಿಡಿಯನ್ನು ನೀಡುವುದಾಗಿ, 2 ಕೋಟಿಗೂ ಹೆಚ್ಚು ನಿರುದ್ಯೋಗಿ ಯುವಜನತೆಗೆ ಉದ್ಯೋಗ ದೊರಕಿಸಿಕೊಡುವುದಾಗಿ ಘೋಷಿಸಿದ್ದು ಸರಿಯಾ ಎಂದು ಪ್ರಶ್ನಿಸಿದ್ದಾರೆ.
Would like to know from our learned friends / leadership - that when you announced various 'jumlaas'....15 Lacs to every individual, farmers' loan waivers & subsidies, more than 2 crore jobs for the youth every year, etc. etc..Was all this fair?
— Shatrughan Sinha (@ShatruganSinha) March 26, 2019
ನೀವು ಮಾಡಿದರೆ ಮಾತ್ರ ರಾಸಲೀಲಾ, ಬೇರೆಯವರು ಮಾಡಿದರೆ ಕ್ಯಾರೆಕ್ಟರ್ ಢೀಲಾ? ಪೀಟರ್ ನಿಗೆ ಯಾವುದು ಸರಿಯಾಗಿರುತ್ತದೋ ಅದು ಪೌಲ್ ಗೂ ಸರಿಯಾಗಿರಲೇಬೇಕು. ರಾಹುಲ್ ಅವರ ಘೋಷಣೆಯನ್ನು ದೇಶದ ಜನರು ಸ್ವಾಗತಿಸಿದ್ದಾರೆ ಮತ್ತು ಸಂಭ್ರಮಿಸುತ್ತಿದ್ದಾರೆ. ಮೂರು ರಾಜ್ಯಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿ ನುಡಿದಂತೆ ನಡೆದಿದ್ದಾರೆ ಎಂದು ಪರೋಕ್ಷವಾಗಿ ಭಾರತೀಯ ಜನತಾ ಪಕ್ಷಕ್ಕೆ ಶತ್ರುಘ್ನ ಸಿನ್ಹಾ ಅವರು ಟಾಂಗ್ ನೀಡಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications