KID Capsule Satellite: ಇಸ್ರೋ PSLV-C62 ಕಾರ್ಯಾಚರಣೆಯಲ್ಲಿ ಅಚ್ಚರಿ ಬೆಳವಣಿಗೆ: ಬದುಕುಳಿದ ಉಪಗ್ರಹ
ಬೆಂಗಳೂರು: ಈ ವರ್ಷ 2026ರಲ್ಲಿ ಇಸ್ರೋ ಸಂಸ್ಥೆ ಉಡಾವಣೆ ಮಾಡಿದ ಭೂ ಸರ್ವೇಕ್ಷಣ ಉಪಗ್ರಹ ಒಳಗೊಂಡಂತೆ 14 ಉಪಗ್ರಹ ಹೊತ್ತ ಮೊದಲ 'ಪಿಎಸ್ಎಲ್ವಿ-ಸಿ62' ಮಿಷನ್ ಕಕ್ಷೆಗೆ ಸೇರುತ್ತಿದ್ದಂತೆ ವಿಫಲಗೊಂಡಿತು. ಇದಾಗಿ ಮರುದಿನವೇ ಮಹತ್ವದ ಬೆಳವಣಿಗೆ ನಡೆದಿದ್ದು, ಅದರಲ್ಲಿನ ಉಪಗ್ರಹವೊಂದು ಬದುಕುಳಿದಿದ್ದು ಇಸ್ರೋ ಗೆ ಮಾಹಿತಿ ರವಾನಿಸಿದೆ ಎಂದು ಆಬಿಟೈಲ್ ಪ್ಯಾರಾಡೈಮ್ ತಿಳಿಸಿದೆ.
ರಾಕೇಟ್ ಉಡಾವಣೆ ವೈಫಲ್ಯವಾದಾಗ ಅದರಲ್ಲಿನ ಉಪಗ್ರಹಗಳು ನಾಶವಾಗುತ್ತವೆ. ಉತ್ತಮ ಸ್ಥಿತಿ ಅಲ್ಲದ ಹಂತಕ್ಕೆ ತಲುಪುತ್ತವೆ. ಭೂಮಿಯೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತವೆ. ಆದರೆ ಈ ಉಡಾವಣೆಯು ವೈಫಲ್ಯವಾದರೂ ಸಹಿತ ಆಶ್ಚರ್ಯಕರ ರೀತಿಯಲ್ಲಿ 'ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್ಸ್ಟ್ರೇಟರ್' (KID) ಉಪಗ್ರಹ ಉಳಿದಿದೆ. ಸ್ಯಾಟಲೈಟ್ ಬೇರ್ಪಟ್ಟು ಬದುಕಿದ್ದರ ಬಗ್ಗೆ ಡೇಟಾವನ್ನು ಭೂಮಿಗೆ ರವಾನಿಸಿದೆ ಎಂದು ಆಬಿಟೈಲ್ ಪ್ಯಾರಾಡೈಮ್ ಎಕ್ಸ್ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

25 ಕೆಜಿ ತೂಕದ ಫುಟ್ಬಾಲ್ ಗಾತ್ರದ ಈ ಪ್ರೊಟೊಟೈಪ್ ಅನ್ನು ಜನವರಿ 12 ರಂದು ಆಂಧ್ರಪ್ರದೇಶದ ಶ್ರೀಹರಿ ಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಎರಡು ಕಕ್ಷೆಯನ್ನು ಸುಸೂತ್ರವಾಗಿ ದಾಟಿದ್ದ ರಾಕೇಟ್ ನಂತರ ಮೂರನೇ ಹಂತದಲ್ಲಿ ವೈಫಲ್ಯಗೊಂಡಿತು. ಸಂಪರ್ಕ ಕಡೆದುಕೊಂಡಿತು. ಕಾರ್ಯಾಚರಣೆಯಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಅದಾಗಿ ಒಂದು ದಿನದಲ್ಲಿ ಕಿಡ್ ಕ್ಯಾಪ್ಸುಲ್ ಪಿಎಸ್ಎಲ್ವಿ-ಸಿ62 ನಿಂದ ಬೇರ್ಪಟ್ಟು ಬದುಕುಳಿದಿದೆ. 3ಕ್ಕೂ ಅಧಿಕ ನಿಮಿಷಗಳ ಮಾಹಿತಿಯನ್ನು ರವಾನಿಸಿದೆ.
ಶೀಘ್ರವೇ ಇನ್ನಷ್ಟು ಮಾಹಿತಿ ಸಿಗುವ ವಿಶ್ವಾಸ
ಈ ಮಾಹಿತಿ ಆಧಾರದಲ್ಲಿ ನಾವು ಅದರ ಪಥವನ್ನು ಮರು ನಿರ್ಮಾಣ ಮಾಡಬಹುದಾಗಿದೆ. ಉಚ್ಚ ತಾಪಮಾನ ಮತ್ತು ಉಚ್ಚ G-ಲೋಡ್ ಆಧಾರದಲ್ಲಿ ಆಂತರಿಕ ತಾಪಮಾನದ ಮಾಹಿತಿ ಪಡೆದಿದ್ದೇವೆ. ಶೀಘ್ರವೇ ಪೂರ್ಣ ಡೇಟಾ ಸಿಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್ಡೌನ್ ಮಾಡುವ ಉದ್ದೇಶದಿಂದ ಮರು ಪ್ರವೇಶ ಪರೀಕ್ಷೆಗಾಗಿ ವಿನ್ಯಾಸಗೊಳಿಸಲಾದ ಈ ಕ್ಯಾಪ್ಸುಲ್ ಪ್ರಾಯೋಗಿಕ ಯಂತ್ರಾಂಶ ಹಾಗೂ ನಿಧಾನಗತಿಯ ಶಕ್ತಿಯ ಒತ್ತಡ ಸಹಿಸಿಕೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Our KID capsule, against all odds, separated from PSLV C62, switched on, and transmitted data. We're reconstructing trajectory. Full report will come. [Edited from previous version]
— Orbital Paradigm (@OrbitalParadigm) January 13, 2026
ಇಸ್ರೋದ ಪಿಎಸ್ಎಲ್ವಿ-ಸಿ62 ಇದು ಡಿಆರ್ಡಿಓ ಕಾರ್ಯತಂತ್ರದ ಇಮೇಜಿಂಗ್ ಉಪಗ್ರಹವಾದ EOS-N1 (ಅನ್ವೇಶ) ಜೊತೆಗೆ ಆನ್-ಆರ್ಬಿಟ್ ಇಂಧನ ತುಂಬಲು AayulSAT ಮತ್ತು ಮಾರಿಷಸ್, ನೇಪಾಳ ಮತ್ತು ಇತರ ದೇಶಗಳ ಅಂತಾರಾಷ್ಟ್ರೀಯ ಪೇಲೋಡ್ಗಳು ಸೇರಿದಂತೆ 16 ಉಪಗ್ರಹಗಳ ಸಹಿತ ನಭಕ್ಕೆ ಹೊತ್ತೊಯ್ದಿತ್ತು. ಮೂರನೇ ಹಂತದಲ್ಲಿ ತಾಂತ್ರಿಕ ದೋಷದಿಂದ ಕಾರ್ಯಾಚರಣೆ ವೈಫಲ್ಯವಾಯಿತು. ಇದರಿಂದಾಗಿ ಕಕ್ಷೆ ತಲುಪಬೇಕಿದ್ದ ಎಲ್ಲ 16 ಉಪಗ್ರಹಗಳು ನಾಶವಾಗುವಂತೆ ಮಾಡಿತು ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರೇ ಇದನ್ನು ದೃಢಪಡಿಸಿದ್ದರು. ಅದರ ಬೆನ್ನಲ್ಲೆ ಬುದುಕುಳಿದ ಕಿಡ್ ಕ್ಯಾಪ್ಸುಲ್ ಜೊತೆಗೆ ಇಸ್ರೋ ವಿಜ್ಞಾನಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ವೈಫಲ್ಯದ ತನಿಖೆ ಜೊತೆಗೆ ಉಪಗ್ರಹದ ನಿರ್ವಹಣೆ, ಮಾಹಿತಿ ಸಂಗ್ರಹಿಸುವಿಕೆ ಸಹ ಮಾಡಲಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications