ಪಿಎಸ್ ಎಲ್ ವಿ-ಸಿ 38 ಉಡಾವಣೆ: ಇಸ್ರೋಕ್ಕೆ ಅಭಿನಂದನೆಯ ಮಹಾಪೂರ
ಶ್ರೀಹರಿಕೋಟ (ಆಂಧ್ರಪ್ರದೇಶ), ಜೂನ್ 23: ಆಂಧ್ರಪ್ರದೇಶ ಶ್ರೀಹರಿಕೋಟದ, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು (ಜೂನ್ 23) ಬೆಳಗ್ಗೆ ಪಿಎಸ್ ಎಲ್ ವಿ -ಸಿ38(ಪೊಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಮೂಲಕ 31 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು.
ಈ 31 ಉಪಗ್ರಹಗಳಲ್ಲಿ ಕ್ಯಾರ್ಟೋಸ್ಯಾಟ್ -2 ಸರಣಿಯ ಭೂ ವೀಕ್ಷಣಾ ಉಪಗ್ರಹವೂ ಸೇರಿದ್ದು, ಈ ಉಪಗ್ರಹಗಳ ಒಟ್ಟೂ ತೂಕ 955 ಕೆ.ಜಿ. ಆಗಿದೆ. ಇಂದು ಬೆಳಗ್ಗೆ ಬೆಳಗ್ಗೆ 9.29 ಕ್ಕೆ ಉಡಾವಣೆಗೊಂಡ ಉಪಗ್ರಹಗಳು ಕೇವಲ ಹದಿನಾರು ನಿಮಿಷಗಳಲ್ಲಿ ಕಕ್ಷೆಗೆ ಸೇರಿವೆ.
30 ಉಪಗ್ರಹಗಳ ಒಟ್ಟು ತೂಕ 243 ಕೆ.ಜಿ. ಆಗಿದ್ದರೆ, ಕ್ಯಾರ್ಟೋಸ್ಯಾಟ್ ಬರೋಬ್ಬರಿ 712 ಕೆ.ಜಿ.ತೂಗುತ್ತದೆ. ಇಸ್ರೋದ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
|
ಇಸ್ರೋ, ನಾವು ಹೆಮ್ಮೆ ಪಡುವಂತೆ ಮಾಡಿದೆ
15 ದೇಶಗಳ 31 ಉಪಗ್ರಹಗಳನ್ನು ಹೊತ್ತಿದ್ದ, ಪಿಎಸ್ ಎಲ್ ವಿ -ಸಿ38 ನ ಯಶಸ್ವಿ ಉಡಾವಣೆಗೆ ಇಸ್ರೋಗೆ ನಮ್ಮ ಅಭಿನಂದನೆಗಳು. ಇಸ್ರೋ ನಮ್ಮನ್ನು ಹೆಮ್ಮೆಪಡುವಂತೆ ಮಾಡಿದೆ ಈಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ, ಇಸ್ರೋ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
|
ಇಸ್ರೋ ರತ್ನಕ್ಕೆ ಅಭಿನಂದನೆ
ಕ್ಯಾರ್ಟೋಸ್ಯಾಟ್- 2 ಸರಣಿಯನ್ನು ಮತ್ತು 30 ಇತರ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ರತ್ನಕ್ಕೆ ಅಭಿನಂದನೆಗಳು ಎಂದು ಬಿಜೆಪಿ ಸಂಸದ ವಿಜಯ ಗೋಯೆಲ್ ಟ್ವೀಟ್ ಮಾಡಿದ್ದಾರೆ.
|
ಕನಿಷ್ಠ ಸಂಪನ್ಮೂಲ ಗರಿಷ್ಠ ಸಾಧನೆ
ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡು ಗರಿಷ್ಠ ಸಾಧನೆ ಮಾಡಿ, 100 % ಯಶಸ್ಸು ಗಳಿಸಿದ ಇಸ್ರೋಕ್ಕೆ ಅಭಿನಂದನೆಗಳು ಎಂದು ಮಹಾರಾಷ್ಟ್ರ ಶಾಸಕಾಂಗದ ಉಪಾಧ್ಯಕ್ಷ ಮಾಣಿಕ್ ರಾವ್ ಠಾಕ್ರೆ ಟ್ವೀಟ್ ಮಾಡಿದ್ದಾರೆ.
|
ಮಾನವ ಸೇವೆಗಾಗಿ ವಿಜ್ಞಾನ
ಕ್ಯಾರ್ಟೋಸ್ಯಾಟ್ 2 ಸರಣಿಯ ಉಪಗ್ರಹವನ್ನು ಉಡಾವಣೆ ಮಾಡಿದ ಇಸ್ರೋಕ್ಕೆ ಅಭಿನಂದನೆಗಳು. ವಿಜ್ಞಾನವನ್ನು ಮಾನವ ಸೇವೆಗಾಗಿ ಬಳಸಿಕೊಳ್ಳುವ ಇಸ್ರೋದ ನಡೆ, ನಾವೆಲ್ಲ ಹೆಮ್ಮೆ ಪಡುವಂತೆ ಮಾಡಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಶಿವರಾಜ್ ಸಿಂಗ್ ಚೌಹಾಣ್
ಪಿಎಸ್ ಎಲ್ ವಿ- ಸಿ38 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋಕ್ಕೆ ಅಭಿನಂದನೆಗಳು. ಇಸ್ರೋದ ಈ ಸಾಧನೆ, ನಮ್ಮ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ವಿಜ್ಞಾನಿಗಳ ಬಲವೇನು ಎಂಬುದನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications