ಐಎಸ್ಐಎಸ್ ಗೆ ಭಾರತೀಯರೆಂದರೆ ಲೈಂಗಿಕ ಗುಲಾಮರಂತೆ!
ನವದೆಹಲಿ, ಮೇ 21: ಭಾರತೀಯರನ್ನು ಜೀಹಾದಿಗಳು ಯಾವ ರೀತಿ ನೋಡುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಇಸಿಸ್ ಉಗ್ರ ಸಂಘಟನೆ ಸೇರಿ ಸಂಕಷ್ಟಕ್ಕೆ ಸಿಲುಕಿ ಹಿಂದಿರುಗಿದ ಮಜೀದ್ ಪೊಲೀಸರ ಬಳಿ ಹೇಳಿರುವ ಸಂಗತಿಗಳು ನಿಜಕ್ಕೂ ಆತಂಕಕಾರಿಯಾಗಿದೆ.
ಉಗ್ರರು ಹೆಣ್ಣನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಾರೆ. ಅದರಲ್ಲೂ ಭಾರತೀಯ ಸ್ತ್ರೀಯರೆಂದರೆಲೈಂಗಿಕ ಗುಲಾಮರು ಎಂದೇ ಭಾವನೆ ಹೊಂದಿದ್ದಾರೆ ಎಂದು ಮಜೀದ್ ಹೇಳಿದ್ದಾನೆ.[ಯುಎಇಯಿಂದ ಭಾರತಕ್ಕೆ 'ಅಮಿತಾಬ್ ಬಚ್ಚನ್' ಹಸ್ತಾಂತರ]

ಗುಪ್ತಚರದಳದ ವಶದಲ್ಲಿರುವ ಮಜೀದ್ ನ ಮೇಲೆ ಸುಮಾರು 8 ಸಾವಿರ ಪುಟಗಳ ಗಾತ್ರದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಅದರಲ್ಲಿ ಆತ ಹಲವಾರು ವಿಚಾರಗಳನ್ನು ತಿಳಿಸಿದ್ದಾನೆ.
ಭಾರತೀಯರಿಗೆ 2ನೇ ದರ್ಜೆ
ಸಂಘಟನೆಗಳಲ್ಲಿ ಭಾರತೀಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗಿತ್ತದೆ. ಭಾರತೀಯರು ಎಂದು ಗೊತ್ತಾದರೆ ಮಾನಸಿಕ ಹಿಂಸೆಯನ್ನು ನೀಡಲಾಗುತ್ತದೆ ಎಂದು ಮಜೀದ್ ತಿಳಿಸಿದ್ದಾನೆ.
ಯಾವುದೇ ಗುಂಪಿನ ಮುಂದಾಳತ್ವವನ್ನು ನಮಗೆ ನೀಡುವುದಿಲ್ಲ. ಅವರ ಲೆಕ್ಕದಲ್ಲಿ ಭಾರತೀಯ ಪುರುಷ ಮತ್ತು ಮಹಿಳೆ ಇಬ್ಬರು ಲೈಂಗಿಕ ಗುಮಾಮರೇ. ತೊಂದರೆ ಕೊಡುವ ಹಿನ್ನೆಲೆ ಇಟ್ಟುಕೊಂಡೆ ಬೇಡದ ಕೆಲಸ ವಹಿಸಲಾಗುತ್ತದೆ ಎಂದು ಮಜೀದ್ ನ ಹೇಳಿಕೆ ಸ್ಪಷ್ಟವಾಗಿ ಹೇಳಿದೆ.[ಐಎಸ್ಐಎಸ್ ಸೇರಲು ಮುಂದಾಗಿದ್ದ 21 ಯುವಕರಿಗೆ ತಡೆ]
ಮಜೀದ್ ಇಸೀಸ್ ಸೇರಿದ್ದು ಹೇಗೆ?
ಅದಿಲ್ ದೊಲಾರಿಸ್ ಎಂಬ ವ್ಯಕ್ತಿ ಮಜೀದ್ ನನ್ನು ಉಗ್ರ ಸಂಘಟನೆ ಸಂಪರ್ಕಕ್ಕೆ ತೆಗೆದುಕೊಂಡು ಬಂದ. ಅಪಘಾನಿಸ್ತಾನದ ರೆಹಮಾನ್ ಎಂಬುವನ ಮೂಲಕ ಮಜೀದ್ ಸಂಘಟನೆ ಸೇರಿದ. ಮಜೀದ್ ಹೇಳುವಂತೆ ರತೀಬ್ ಹುಸೇನ್ ಎಂಬ ಉಗ್ರನ ಕಾಣಿಸಿಕೊಂಡಿದ್ದ.
ನನ್ನ ಕೆಲಸವನ್ನು ನಿಲ್ಲಿಸಲಾಯಿತು
ಮೊದಲು ನನ್ನನ್ನು ತಿರಸ್ಕಾರ ಮಾಡುತ್ತಿದ್ದಾರೆ ಎಂದು ಅಂದಿಕೊಂಡಿದ್ದೆ. ನಡೆದ ಘಟನಾವಳಿಗಳು ಅದಕ್ಕೆ ಪೂರಕವಾಗಿದ್ದವು. ವಿರೋಧಿಗಳ ಕ್ಯಾಂಪ್ ನೊಳಕ್ಕೆ ಸ್ಫೋಟಕ ತುಂಬಿದ ವಾಹನವನ್ನು ಚಲಾಯಿಸಬೇಕು ಎಂಬ ಕೆಲಸ ನೀಡಲಾಯಿತು. ನನಗೆ ತಕ್ಕುದಾದ ಕೆಲಸ ಕೊಟ್ಟರು ಎಂಬ ಸಂತಸವೂ ಒಂದೆಡೆ ಆಗಿತ್ತು.
ಆದರೆ ಇದ್ದಕ್ಕಿದ್ದಂತೆ ಈ ಕೆಲಸವನ್ನು ನನಗೆ ಮಾಡದಂತೆ ಸೂಚಿಸಲಾಯಿತು. ಕೆಲ ದಿನದ ನಂತರ ಘಟನೆಯೊಂದರಲ್ಲಿ ನನಗೆ ತೀವ್ರ ಪೆಟ್ಟಾಯಿತು. ಆದರೆ ವೈದ್ಯಕೀಯ ಸೇವೆ ಮಾತ್ರ ಸಿಗದೆ ಪರಿತಪಿಸಬೇಕಾಯಿತು ಎಂಬುದು ಮಜೀದ್ ಹೇಳಿಕೆಯಲ್ಲಿರುವ ಪ್ರಮುಖ ಅಂಶ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications