ಕ್ಷಿಪಣಿ ಕ್ಲಬ್ಗೆ ಭಾರತ ಸೇರ್ಪಡೆ, ಏನು ಪ್ರಯೋಜನ?
ನವದೆಹಲಿ, ಜೂನ್ 27: ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (ಎಂಟಿಸಿಆರ್) ಕ್ಷಿಪಣಿ ಕ್ಲಬಿಗೆ ಭಾರತವು ಅಧಿಕೃತವಾಗಿ ಸೇರ್ಪಡೆಗೊಂಡಿದೆ ಎಂದು ಸೋಮವಾರ ಘೋಷಿಸಲಾಗಿದೆ.
ಕ್ಷಿಪಣಿ ಕ್ಲಬ್ಗೆ ಸೋಮವಾರ ಪೂರ್ಣಾವಧಿ ಸದಸ್ಯನಾಗಿ ಭಾರತ ಸೇರ್ಪಡೆಗೊಂಡಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ಪತ್ರಕ್ಕೆ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಸಹಿ ಹಾಕಿದರು.
ಎಂಟಿಸಿಆರ್ಗೆ ಭಾರತ ಸೇರ್ಪಡೆಯಿಂದ ಜಾಗತಿಕ ಅಣ್ವಸ್ತ್ರ ಪ್ರಸರಣ ತಡೆ ನಿಯಮಾವಳಿಗಳ ವಿಸ್ತರಣೆ ನಿಟ್ಟಿನಲ್ಲಿ ಪರಸ್ಪರರಿಗೆ ಅನುಕೂಲವಾಗಲಿದೆ.
ಫ್ರಾನ್ಸಿನ ನಿಯೋಜಿತ ರಾಯಭಾರಿ ಅಲೆಗ್ಸಾಂಡ್ರೆ ಝೀಗ್ಲೆರ್, ನೆದರ್ ಲ್ಯಾಂಡ್ಸ್ ರಾಯಭಾರಿ ಅಲ್ಪೋನ್ಸಸ ಸ್ಟೊಯೆಲಿಂಗ ಮತ್ತು ಲಕ್ಸೆಂಬರ್ಗ್ನ ಚಾರ್ಜ್ ಡ'ಅಫೇರ್ಸ್ ಲೌರೆ ಹಬರ್ಟಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
'ಭಾರತವು ಈ ದಿನ ಎಂಟಿಸಿಆರ್ಗೆ 35ನೇ ಸದಸ್ಯನಾಗಿ ಭಾರತದ ಸೇರ್ಪಡೆಯಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಅಣ್ವಸ್ತ್ರ ಪ್ರಸರಣ ತಡೆ ನಿಯಮಾವಳಿ ಗುರಿಗಳನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಈ ನಿಟ್ಟಿನಲ್ಲಿ ಪರಸ್ಪರರಿಗೆ ಅನುಕೂಲಕರವಾಗಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಿಸಿದೆ. ಇದರ ಜೊತೆಗೆ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಬೆಂಬಲ ನೀಡಿದ ಎಲ್ಲಾ 34 ಸದಸ್ಯ ರಾಷ್ಟ್ರಗಳಿಗೂ ಭಾರತ ವಂದನೆ ಸಲ್ಲಿಸಿದೆ.

* ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಹೆಚ್ಚಿನ ಒತ್ತು ನೀಡಲು ಸಮಾನ ಮನಸ್ಕ ರಾಷ್ಟ್ರಗಳು ಮಾಡಿಕೊಂಡಿರುವ ಗುಂಪು ಇದಾಗಿದೆ. ಇದರಲ್ಲಿ ಅರ್ಜೆಂಟೀನಾ, ಅಸ್ಟ್ರೇಲಿಯಾ, ಅಸ್ಟ್ರೀಯಾ, ಬೆಲ್ಜಿಯಂ, ಬ್ರೆಜಿಲ್, ಬಲ್ಗೇರಿಯಾ, ಕೆನಡಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್ ಲ್ಯಾಂಡ್, ಐರ್ಲೆಂಡ್, ಇಟಲಿ, ಜಪಾನ್, ಲಕ್ಸೆಂಬರ್ಗ್, ನೆದರ್ಲೆಂಡ್ಸ್, ನ್ಯೂಜಿಲೆಂಡ್, ನಾರ್ವೆ, ಪೊಲೆಂಡ್, ಪೋರ್ಚುಗಲ್, ರಿಪಬ್ಲಿಕ್ ಆಫ್ ಕೊರಿಯಾ, ರಷ್ಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಟರ್ಕಿ, ಉಕ್ರೇನ್, ಯುನೈಟೆಡ್ ಕಿಂಗ್ಡಮ್, ಯುಎಸ್ಎ ಸದಸ್ಯರಾಷ್ಟ್ರಗಳಾಗಿವೆ.
* ಅಣ್ವಸ್ತ್ರ, ಜೈವಿಕ ಹಾಗೂ ರಾಸಾಯನಿಕ ಶಸ್ತ್ರಾಸ್ತ್ರಗಳ ಮೂಲಕ ಸಾಮೂಹಿಕ ನಾಶಕ್ಕೆ ಯತ್ನಿಸುವುದು ಹಾಗೂ ಇಂಥ ಶಸ್ತ್ರಾಸ್ತ್ರಗಳ ಪ್ರಸರಣ ನಿಷೇಧಿಸುವುದು,
* 300 ಕಿ.ಮೀ ವ್ಯಾಪ್ತಿಯ 500 ಕೆಜಿ ತೂಗುವ ವಿಧ್ವಂಸಕ ಸಾಮಾಗ್ರಿಯನ್ನು ಹೊತ್ತೊಯ್ಯಬಲ್ಲ ರಾಕೆಟ್, ಮಾನವರಹಿತ ವೈಮಾನಿಕ ವಾಹನಗಳ ನಿಯಂತ್ರಣ ಎಂಟಿಸಿಆರ್ ನ ಉದ್ದೇಶ. ಇದಕ್ಕೆ ಸಂಬಂಧಪಟ್ಟ ತಂತ್ರಜ್ಞಾನ, ತಂತ್ರಾಂಶ ಹಾಗೂ ವ್ಯವಸ್ಥೆ ಮೇಲೆ ನಿಯಂತ್ರಣ.
* 1987ರಲ್ಲಿ ಜಿ 7 ಸದಸ್ಯರಾಷ್ಟ್ರಗಳಿಂದ ಆರಂಭವಾದ ಎಂಟಿಸಿಆರ್ ನಲ್ಲಿ ಸದಸ್ಯರಾಷ್ಟ್ರಗಳ ನಡುವೆ ಮುಕ್ತ ಚರ್ಚೆ ಸಾಧ್ಯವಿದೆ. ಆದರೆ, ಹೊಸ ಸದಸ್ಯರಾಷ್ಟ್ರ ಸೇರ್ಪಡೆಗೆ ಉಳಿದ ರಾಷ್ಟ್ರಗಳ ಇಪ್ಪಿಗೆ ಅಗತ್ಯ. ಹೆಚ್ಚಿನ ಮಾಹಿತಿಯನ್ನು ಎಂಟಿಸಿಆರ್ ವೆಬ್ ಸೈಟ್ ನಿಂದ ಪಡೆದುಕೊಳ್ಳಬಹುದು
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications