ಬೆಳಗಾವಿ ಸೇರಿ 8 ಕಡೆ ಹೊಸ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿ
ನವದೆಹಲಿ, ಜೂನ್ 3: ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಉದಾರೀಕೃತ ವೈಮಾನಿಕ ತರಬೇತಿ ಸಂಸ್ಥೆಯ (ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಸೇಶನ್ - ಎಫ್ ಟಿಒ) ನೀತಿಯಡಿ ಭಾರತ 8 ಹೊಸ ವೈಮಾನಿಕ ತರಬೇತಿ ಅಕಾಡೆಮಿಗಳನ್ನು ಪಡೆಯಲಿದೆ. ಈ ಅಕಾಡೆಮಿಗಳನ್ನು ಬೆಳಗಾವಿ, ಜಲಗಾಂವ್, ಕಲಬುರಗಿ, ಖಜುರಾಹೊ ಮತ್ತು ಲೀಲಬರಿಯಲ್ಲಿ ಸ್ಥಾಪಿಸಲಾಗುತ್ತದೆ.
ಈ 8 ಅಕಾಡೆಮಿಗಳ ಸ್ಥಾಪನೆಯು ಭಾರತವನ್ನು ಜಾಗತಿಕ ವೈಮಾನಿಕ ತರಬೇತಿ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ ಮತ್ತು ವಿದೇಶಿ ವೈಮಾನಿಕ ತರಬೇತಿ ಅಕಾಡೆಮಿಗಳಿಗೆ ಭಾರತೀಯ ವಿದ್ಯಾರ್ಥಿಗಳು ಹೋಗುವುದನ್ನು ತಡೆಯುತ್ತದೆ. ಜೊತೆಗೆ, ಭಾರತದ ನೆರೆಯ ರಾಷ್ಟ್ರಗಳಲ್ಲಿನ ವಿದ್ಯಾರ್ಥಿಗಳ ವೈಮಾನಿಕ ತರಬೇತಿಯ ಅವಶ್ಯಕತೆಗಳನ್ನು ಪೂರೈಸಲು ಈ ಸಂಸ್ಥೆಗಳನ್ನು ರೂಪಿಸಲಾಗುವುದು.
ಕೋವಿಡ್ -19 ರ ಎರಡನೇ ಅಲೆಯಿಂದಾಗಿ ಉಂಟಾದ ಸಂಕಷ್ಟದ ಸಮಯದ ನಡುವೆಯೂ ಬಿಡ್ಡಿಂಗ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಯಶಸ್ವಿಯಾಯಿತು ಎನ್ನುವುದು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಂಡದ ಪರಿಶ್ರಮ ಮತ್ತು ದೃಢ ನಿಶ್ಚಯವನ್ನು ದೃಢೀಕರಿಸುವುದು. ಈ ಐದು ವಿಮಾನ ನಿಲ್ದಾಣಗಳನ್ನು ಹವಾಮಾನ ಸಮಸ್ಯೆಗಳು ಮತ್ತು ನಾಗರಿಕ ಮತ್ತು ಮಿಲಿಟರಿ ವಾಯು ಸಂಚಾರದ ಕನಿಷ್ಠ ಅಡ್ಡಿಯಿರುವ ಕಾರಣ ಅವುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ. ಈ ಉಪಕ್ರಮವು ಆತ್ಮ ನಿರ್ಭರ ಭಾರತದ ಉಪಕ್ರಮದಡಿಯಲ್ಲಿ ಭಾರತೀಯ ಹಾರಾಟದ ತರಬೇತಿ ಕ್ಷೇತ್ರಕ್ಕೆ ಹೆಚ್ಚು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ.

ವಿಮಾನ ನಿಲ್ದಾಣ ಪ್ರಾಧಿಕಾರವು 2020 ರ ನವೆಂಬರ್ನಲ್ಲಿ ಬಿಡ್ಗಳನ್ನು ಆಹ್ವಾನಿಸಿತ್ತು. ಈ ವಿಜೇತ ಬಿಡ್ಡುದಾರರಿಗೆ ಆದೇಶ ಪತ್ರಗಳನ್ನು 20 ಮೇ 2021 ರಂದು ನೀಡಲಾಯಿತು: ಏಷ್ಯಾ-ಪೆಸಿಫಿಕ್, ಜೆಟ್ ಸರ್ವ್, ರೆಡ್ ಬರ್ಡ್, ಸಂವರ್ದನೆ ಮತ್ತು ಸ್ಕೈ ನೆಕ್ಸ್. ನಿರೀಕ್ಷಿತ ಬಿಡ್ಡುದಾರರಿಗೆ ನಿಗದಿಪಡಿಸಿದ ನಿಯತಾಂಕಗಳಲ್ಲಿ ವಾಯುಯಾನ ಸುರಕ್ಷತಾ ಅಂಶಗಳು, ನಿಯಂತ್ರಕ ಕಾರ್ಯವಿಧಾನಗಳು, ಮಾನವ ಚಾಲಿತ ವಿಮಾನದಲ್ಲಿ ತರಬೇತಿ ಪೈಲಟ್ಗಳ ಕ್ಷೇತ್ರದಲ್ಲಿ ಅನುಭವ, ಸಲಕರಣೆಗಳ ಲಭ್ಯತೆ, ತರಬೇತುದಾರರು ಇತ್ಯಾದಿ ಆಂಶಗಳು ಸೇರಿದ್ದವು. ಎಫ್ಡಿಒಗಳನ್ನು ಬಿಡ್ಡುದಾರರಿಗೆ ಆಕರ್ಷಕವಾಗಿಸಲು, ಎಎಐ ಕನಿಷ್ಠ ವಾರ್ಷಿಕ ಬಾಡಿಗೆಯನ್ನು ಗಮನಾರ್ಹವಾಗಿ 15 ಲಕ್ಷ ರೂಪಾಯಿಗಳಿಗೆ ಕಡಿಮೆ ಮಾಡಿತು ಇದಲ್ಲದೆ, ಈ ಉದ್ಯಮಗಳನ್ನು ವ್ಯಾಪಾರ ಸ್ನೇಹಿಯನ್ನಾಗಿ ಮಾಡಲು ವಿಮಾನ ನಿಲ್ದಾಣದ ರಾಯಧನದ ಪರಿಕಲ್ಪನೆಯನ್ನು ರದ್ದುಗೊಳಿಸಲಾಯಿತು.(ಇಲಾಖೆ ಪ್ರಕಟಣೆ)
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications