ಬೆಳಗಾವಿ ಸೇರಿ 8 ಕಡೆ ಹೊಸ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿ
ನವದೆಹಲಿ, ಜೂನ್ 3: ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಉದಾರೀಕೃತ ವೈಮಾನಿಕ ತರಬೇತಿ ಸಂಸ್ಥೆಯ (ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಸೇಶನ್ - ಎಫ್ ಟಿಒ) ನೀತಿಯಡಿ ಭಾರತ 8 ಹೊಸ ವೈಮಾನಿಕ ತರಬೇತಿ ಅಕಾಡೆಮಿಗಳನ್ನು ಪಡೆಯಲಿದೆ. ಈ ಅಕಾಡೆಮಿಗಳನ್ನು ಬೆಳಗಾವಿ, ಜಲಗಾಂವ್, ಕಲಬುರಗಿ, ಖಜುರಾಹೊ ಮತ್ತು ಲೀಲಬರಿಯಲ್ಲಿ ಸ್ಥಾಪಿಸಲಾಗುತ್ತದೆ.
ಈ 8 ಅಕಾಡೆಮಿಗಳ ಸ್ಥಾಪನೆಯು ಭಾರತವನ್ನು ಜಾಗತಿಕ ವೈಮಾನಿಕ ತರಬೇತಿ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ ಮತ್ತು ವಿದೇಶಿ ವೈಮಾನಿಕ ತರಬೇತಿ ಅಕಾಡೆಮಿಗಳಿಗೆ ಭಾರತೀಯ ವಿದ್ಯಾರ್ಥಿಗಳು ಹೋಗುವುದನ್ನು ತಡೆಯುತ್ತದೆ. ಜೊತೆಗೆ, ಭಾರತದ ನೆರೆಯ ರಾಷ್ಟ್ರಗಳಲ್ಲಿನ ವಿದ್ಯಾರ್ಥಿಗಳ ವೈಮಾನಿಕ ತರಬೇತಿಯ ಅವಶ್ಯಕತೆಗಳನ್ನು ಪೂರೈಸಲು ಈ ಸಂಸ್ಥೆಗಳನ್ನು ರೂಪಿಸಲಾಗುವುದು.
ಕೋವಿಡ್ -19 ರ ಎರಡನೇ ಅಲೆಯಿಂದಾಗಿ ಉಂಟಾದ ಸಂಕಷ್ಟದ ಸಮಯದ ನಡುವೆಯೂ ಬಿಡ್ಡಿಂಗ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಯಶಸ್ವಿಯಾಯಿತು ಎನ್ನುವುದು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಂಡದ ಪರಿಶ್ರಮ ಮತ್ತು ದೃಢ ನಿಶ್ಚಯವನ್ನು ದೃಢೀಕರಿಸುವುದು. ಈ ಐದು ವಿಮಾನ ನಿಲ್ದಾಣಗಳನ್ನು ಹವಾಮಾನ ಸಮಸ್ಯೆಗಳು ಮತ್ತು ನಾಗರಿಕ ಮತ್ತು ಮಿಲಿಟರಿ ವಾಯು ಸಂಚಾರದ ಕನಿಷ್ಠ ಅಡ್ಡಿಯಿರುವ ಕಾರಣ ಅವುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ. ಈ ಉಪಕ್ರಮವು ಆತ್ಮ ನಿರ್ಭರ ಭಾರತದ ಉಪಕ್ರಮದಡಿಯಲ್ಲಿ ಭಾರತೀಯ ಹಾರಾಟದ ತರಬೇತಿ ಕ್ಷೇತ್ರಕ್ಕೆ ಹೆಚ್ಚು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ.

ವಿಮಾನ ನಿಲ್ದಾಣ ಪ್ರಾಧಿಕಾರವು 2020 ರ ನವೆಂಬರ್ನಲ್ಲಿ ಬಿಡ್ಗಳನ್ನು ಆಹ್ವಾನಿಸಿತ್ತು. ಈ ವಿಜೇತ ಬಿಡ್ಡುದಾರರಿಗೆ ಆದೇಶ ಪತ್ರಗಳನ್ನು 20 ಮೇ 2021 ರಂದು ನೀಡಲಾಯಿತು: ಏಷ್ಯಾ-ಪೆಸಿಫಿಕ್, ಜೆಟ್ ಸರ್ವ್, ರೆಡ್ ಬರ್ಡ್, ಸಂವರ್ದನೆ ಮತ್ತು ಸ್ಕೈ ನೆಕ್ಸ್. ನಿರೀಕ್ಷಿತ ಬಿಡ್ಡುದಾರರಿಗೆ ನಿಗದಿಪಡಿಸಿದ ನಿಯತಾಂಕಗಳಲ್ಲಿ ವಾಯುಯಾನ ಸುರಕ್ಷತಾ ಅಂಶಗಳು, ನಿಯಂತ್ರಕ ಕಾರ್ಯವಿಧಾನಗಳು, ಮಾನವ ಚಾಲಿತ ವಿಮಾನದಲ್ಲಿ ತರಬೇತಿ ಪೈಲಟ್ಗಳ ಕ್ಷೇತ್ರದಲ್ಲಿ ಅನುಭವ, ಸಲಕರಣೆಗಳ ಲಭ್ಯತೆ, ತರಬೇತುದಾರರು ಇತ್ಯಾದಿ ಆಂಶಗಳು ಸೇರಿದ್ದವು. ಎಫ್ಡಿಒಗಳನ್ನು ಬಿಡ್ಡುದಾರರಿಗೆ ಆಕರ್ಷಕವಾಗಿಸಲು, ಎಎಐ ಕನಿಷ್ಠ ವಾರ್ಷಿಕ ಬಾಡಿಗೆಯನ್ನು ಗಮನಾರ್ಹವಾಗಿ 15 ಲಕ್ಷ ರೂಪಾಯಿಗಳಿಗೆ ಕಡಿಮೆ ಮಾಡಿತು ಇದಲ್ಲದೆ, ಈ ಉದ್ಯಮಗಳನ್ನು ವ್ಯಾಪಾರ ಸ್ನೇಹಿಯನ್ನಾಗಿ ಮಾಡಲು ವಿಮಾನ ನಿಲ್ದಾಣದ ರಾಯಧನದ ಪರಿಕಲ್ಪನೆಯನ್ನು ರದ್ದುಗೊಳಿಸಲಾಯಿತು.(ಇಲಾಖೆ ಪ್ರಕಟಣೆ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications