10 ದಿನದೊಳಗೆ ಸ್ವಿಸ್ ನ ಎಚ್ ಎಸ್ ಬಿಸಿ ಖಾತೆ ಮಾಹಿತಿ ಭಾರತಕ್ಕೆ
ನವದೆಹಲಿ, ಆಗಸ್ಟ್ 8: ಇನ್ನು ಹತ್ತು ದಿನದೊಳಗೆ ಭಾರತವು ಎಚ್ ಎಸ್ ಬಿಸಿ ಖಾತೆಯ ಬಗ್ಗೆ ಸ್ವಿಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದೆ. ಸ್ವಿಟ್ಜರ್ ಲೆಂಡ್ ನ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ತನ್ನ ನಾಗರಿಕರ ಎಚ್ ಎಸ್ ಬಿಸಿ ಬ್ಯಾಂಕ್ ಖಾತೆಯ ದತ್ತಾಂಶಗಳನ್ನು ಭಾರತ ಸರಕಾರದ ಜತೆ ಹಂಚಿಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರ ನೀಡಿದ ಅವರು, ಕಪ್ಪು ಹಣದ ವಾಪಸಿಗೆ ಗಂಭೀರ ಪ್ರಯತ್ನಗಳು ಮಾಡುತ್ತಿದ್ದೇವೆ. ಎಷ್ಟು ಮೊತ್ತ ಎಂಬ ಬಗ್ಗೆ ಅಧಿಕೃತ ಅಂದಾಜಿಲ್ಲ. ಲೆಕ್ಕಕ್ಕೆ ನೀಡದೆ ಎಚ್ ಎಸ್ ಬಿಸಿ ಖಾತೆಯಲ್ಲಿ ಇಟ್ಟಿರುವ 8,448 ಕೋಟಿ ರುಪಾಯಿಗೆ 5,447 ಕೋಟಿ ತೆರಿಗೆಗೆ ಬೇಡಿಕೆ ಬಂದಿದೆ ಎಂದರು.
ಇನ್ನೊಂದು ವಾರ ಅಥವಾ ಹತ್ತು ದಿನದೊಳಗೆ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಸ್ವಿಟ್ಜರ್ ಲೆಂಡ್ ಸರಕಾರಕ್ಕೆ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಅದನ್ನು ಪಡೆಯುವ ಸಲುವಾಗಿ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಗೋಯಲ್ ಹೇಳಿದ್ದಾರೆ.

ಈ ಹಿಂದೆ ನಮ್ಮ ಕಂದಾಯ ಕಾರ್ಯದರ್ಶಿಗಳು ಆ ದೇಶಕ್ಕೆ ಹೋಗಿ, ಮಾತು-ಕತೆ ನಡೆಸಿ, ಪರಸ್ಪರ ಮಾಹಿತಿ ಹಂಚಿಕೊಳ್ಳುವ ಬಗ್ಗೆ ಘೋಷಣೆಯಾಗಿತ್ತು. ಆ ನಂತರ ಎಚ್ ಎಸ್ ಬಿಸಿ ಖಾತೆಗಳ ಬಗ್ಗೆ ಮಾಹಿತಿ ದೊರೆಯಲು ಆರಂಭಿಸಿದ್ದವು. ಇದೇ ಮಾದರಿಯಲ್ಲೇ ಇತರ ದೇಶಗಳ ಜತೆಗೆ ಕೂಡ ಮಾಹಿತಿ ಹಂಚಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದಿದ್ದಾರೆ.
ಎಚ್ ಎಸ್ ಬಿಸಿ ಪಟ್ಟಿಯಲ್ಲಿ ಬಹಿರಂಗ ಪಡಿಸದ 8,448 ಕೋಟಿ ರುಪಾಯಿ ಪತ್ತೆಯಾಗಿದೆ. ಅದಕ್ಕೆ ತೆರಿಗೆ 5,447 ಕೋಟಿ. ಮತ್ತು 164 ಪ್ರಕರಣಗಳಲ್ಲಿ 1290 ಕೋಟಿ ದಂಡ ಹಾಕಲಾಗಿದೆ. 84 ಪ್ರಕರಣಗಳಲ್ಲಿ 199 ವಿಚಾರಣೆ ದೂರುಗಳನ್ನು ದಾಖಲಿಸಲಾಗಿದೆ. ಇನ್ನು ಪನಾಮ ಪೇಪರ್ಸ್ ವಿಚಾರವಾಗಿ 426 ಮಂದಿ ಹೆಸರಿದ್ದು, ಎಲ್ಲ ಪ್ರಕರಣದಲ್ಲಿ ತನಿಖೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಪನಾಮ ಪೇಪರ್ಸ್ ಜತೆಗೆ ಪ್ಯಾರಡೈಸ್ ಪೇಪರ್ಸ್ ನ ಆರೋಪದ ಬಗ್ಗೆ ಕೂಡ ತನಿಖೆ ಆಗಬೇಕು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications