ತಮಿಳು ಸ್ಟಾರ್ ಕಮಲ ಹಾಸನ್ ಗೆ ಯಾಕೆ ಬಿರಿಯಾನಿ ಮೇಲೆ ಕಣ್ಣು?
ಜಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಖಾಸಗಿ ವಾಹನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ತಮಿಳು ಚಿತ್ರನಟ
ನವದೆಹಲಿ, ಜನವರಿ 24: ತಮಿಳು ಸ್ಟಾರ್ ಕಮಲ ಹಾಸನ್ ಅವರು, ಬಿರಿಯಾನಿ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಅವರು, ಮಾಂಸಾಹಾರದ ಬಗ್ಗೆ ಮಾತನಾಡಿದ್ದಾರೆ.
ಅಷ್ಟಕ್ಕೂ ಅಪ್ಪಟ ಸಸ್ಯಾಹಾರಿಯಾದ ಕಮಲ ಹಾಸನ್ ಗೇಕೆ ಬಿರಿಯಾನಿ ಮೇಲೆ ಕಣ್ಣು ಅಂತೀರಾ ? ವಿಚಾರ ಅದಲ್ಲ, ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿದ್ದು.

ಈ ಹಿಂದೆ, ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿದ್ದಕ್ಕೆ ಕಮಲ ಹಾಸನ್ ಆಕ್ಷೇಪಿಸಿ, ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸುವುದಾದರೆ ಬಿರಿಯಾನಿಯನ್ನೂ ನಿಷೇಧಿಸಲಿ ಎಂದು ಸವಾಲು ಹಾಕಿದ್ದಾರೆ.

ಅಂದರೆ, ಅವರ ಪ್ರಕಾರ, ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವುದು ಹಿಂಸೆ ಎನ್ನುವುದಾದರೆ, ಅಂಥ ಕ್ರೀಡೆಗಳಿಗೆ ನಿಷೇಧ ಹೇರುವುದಾದರೆ, ಅವುಗಳನ್ನು ಕೊಂದು ತಿನ್ನುವ ಪದ್ಧತಿಗೂ ನಿಷೇಧ ಹೇರಬೇಕು ಎನ್ನುವುದು ಅವರ ವಾದ.
ಒನ್ ಇಂಡಿಯಾ ಕಾಳಜಿ
ಜಲ್ಲಿಕ್ರೀಡೆಯ ಬಗ್ಗೆ ನಟ ಕಮಲ ಹಾಸನ್ ಹೇಳಿರುವ ಮಾತು ನಿಮಗೆ ರುಚಿಸಿತಾ? ರುಚಿಸಿದರೂ ಸರಿ, ರುಚಿಸದಿದ್ದರೂ ಸರಿ ನಿಮ್ಮ ಅಭಿಪ್ರಾಯವೇನು ಎಂದು ಕೆಳಗಿನ ಕಮೆಂಟ್ ಸ್ಥಳದಲ್ಲಿ ಪುಟ್ಟದಾಗಿ ತಿಳಿಸಿ.












Click it and Unblock the Notifications