'ದಲಿತರೊಂದಿಗೆ ಉಂಡು ಅವರನ್ನು ಶುದ್ಧಿಗೊಳಿಸಲು ನಾನು ರಾಮನಲ್ಲ!'
ಛತ್ತರ್ಪುರ, ಮೇ 04: 'ದಲಿತರೊಂದಿಗೆ ಊಟ ಮಾಡಿ ಅವರನ್ನು ಶುದ್ಧಗೊಳಿಸಲು ನಾನೇನು ಭಗವಂತ ರಾಮನಲ್ಲ' ಎನ್ನುವ ಮೂಲಕ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ ಕೇಮದ್ರ ಸಚಿವೆ ಉಮಾ ಭಾರತಿ.
ಉತ್ತರ ಪ್ರದೇಶದ ಛತ್ತರ್ಪುರದ ಹಳ್ಳಿಯೊಂದರಲ್ಲಿ ದಲಿತರೊಮದಿಗೆ ಊಟ ಮಾಡುವ ಕಾರ್ಯಕ್ರಮಕ್ಕೆ ಗೈರಾದ ಉಮಾ ಭಾರತಿ, ಈ ರೀತಿ ಹೇಳಿಕೆ ನೀಡಿದ್ದಾರೆ.
"ನಾನು ಊಟ ಸೇವಿಸುವುದಕ್ಕೆ ದಲಿತರ ಮನೆಗೆ ಹೋಗುವುದಿಲ್ಲ. ಆದರೆ ಅವರನ್ನೇ ಊಟಕ್ಕೆ ನಮ್ಮ ಮನೆಗೆ ಆಹ್ವಾನಿಸುತ್ತೇನೆ. ನಾನು ನಿಮಗೊಂದು ಗುಟ್ಟು ಹೇಳುತ್ತೇನೆ. ನನಗೆ ಸಮುದಾಯ ಭೋಜನದಲ್ಲಿ ನಂಬಿಕೆ ಇಲ್ಲ. ಶಸಬರಿಯ ಮನೆಗೆ ರಾಮ ಹೋದಂತೆ ನಾನು ರಾಮನಲ್ಲ, ಅವರನ್ನು ಶುದ್ಧೀಕರಿಸುವುದಕ್ಕೆ" ಎಂದು ಅವರು ಹೇಳಿದ್ದಾರೆ.

ಈ ಕುರಿತು ವಿರೋಧ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಯಾಚಿಸಿರುವ ಅವರು, ನನ್ನ ಮಾತಿನಲ್ಲಿ ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ ಎಂದಿದ್ದಾರೆ.












Click it and Unblock the Notifications