'ಇನ್ನೆಷ್ಟು ಸ್ವಾತಂತ್ರ್ಯ ಬೇಕು?' ನಾಸಿರುದ್ದೀನ್ ಗೆ ಅನುಪಮ್ ಪ್ರಶ್ನೆ
ನವದೆಹಲಿ, ಡಿಸೆಂಬರ್ 23: ನರೇಂದ್ರ ಮೋದಿ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದೆಗೆಟ್ಟಿದೆ, ಸ್ವಾತಂತ್ರ್ಯ ಇಲ್ಲದ್ದಂತಾಗಿದೆ ಎಂದು ಟೀಕಿಸಿದ ನಟ ನಾಸೀರುದ್ದೀನ್ ಶಾ ಅವರಿಗೆ ನಟ ಅನುಪಮ್ ಖೇರ್ ಪ್ರತ್ಯುತ್ತರ ನೀಡಿದ್ದಾರೆ.
ದೇಶದ ಸೇನಾಪಡೆಯನ್ನು ನಿಂದಿಸುವಷ್ಟು ಸ್ವಾತಂತ್ರ್ಯವನ್ನು ಕೆಲವರು ಪಡೆದುಕೊಂಡಿದ್ದಾರೆ. ನಿಮಗೆ ಇನ್ನೆಷ್ಟು ಸ್ವಾತಂತ್ರ್ಯ ಬೇಕು ಎಂದು ನಾಸೀರುದ್ದೀನ್ ರನ್ನು ಪ್ರಶ್ನಿಸಿದ್ದಾರೆ.
ಏರ್ ಚೀಫ್ ವಿರುದ್ಧ ದನಿಯೆತ್ತಬಹುದು, ಯೋಧರಿಗೆ ಕಲ್ಲು ಹೊಡೆಯಬಹುದು, ಇನ್ನೆಷ್ಟು ಸ್ವಾತಂತ್ರ್ಯ ಸಿಗಬೇಕಿದೆ?ಎಂದು ಅನುಪಮ್ ಪ್ರಶ್ನಿಸಿದ್ದಾರೆ. ರಫೆಲ್ ಡೀಲ್ ಬಗ್ಗೆ ಏರ್ ಫೋರ್ಸ್ ಚೀಫ್ ನೀಡಿದ ಹೇಳಿಕೆಯನ್ನು ಖಂಡಿಸಿ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು, ವಾಯುಸೇನೆ ಮುಖ್ಯಸ್ಥರನ್ನು ಸುಳ್ಳುಗಾರ ಎಂದಿದ್ದನ್ನು ಇಲ್ಲಿ ಸ್ಮರಿಸಿದ್ದಾರೆ.

'ಹಸುವಿನ ಸಾವಿಗೆ ಮರುಗುವ ಮಹತ್ವ ನೀಡುವವರು ಒಬ್ಬ ಪೊಲೀಸ್ ಅಧಿಕಾರಿ ಸಾವಿಗೆ ಬೆಲೆ ನೀಡುತ್ತಿಲ್ಲ' ಎಂದು ನಾಸೀರುದ್ದೀನ್ ಶಾ ಇತ್ತೀಚೆಗೆ ಹೇಳಿದ್ದರು. ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ರೊಚ್ಚಿಗೆದ್ದ ಜನರು ಪೊಲೀಸ್ ಅಧಿಕಾರಿಯನ್ನು ಕೊಂದಿದ್ದನ್ನು ಉಲ್ಲೇಖಿಸಿದ್ದರು.
2016ರಲ್ಲೂ ನಾಸೀರುದ್ದೀನ್ ಹಾಗೂ ಅನುಪಮ್ ನಡುವೆ ವಾಕ್ಸಮರ ನಡೆದಿತ್ತು. ಕಾಶ್ಮೀರಿ ಪಂಡಿತರ ವಿಷಯವಾಗಿ ಮಾತಿನ ಚಕಮಕಿ ನಡೆಸಿದ್ದರು. ನಂತರ ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ಚೇರ್ಮನ್ ನೇಮಕ ವಿಷಯದಲ್ಲೂ ಇಬ್ಬರಿಗೂ ಮನಸ್ತಾಪವಾಗಿತ್ತು.
Anupam Kher on Naseeruddin Shah's statement: There’s so much freedom in the country that you can abuse the army, badmouth the air chief and pelt stones at the soldiers. How much more freedom do you need in a country? He said what he felt like, it doesn’t mean it’s the truth. pic.twitter.com/43nAMfK59h
— ANI (@ANI) December 22, 2018
ಬುಲಂದ್ ಶಹರ್ ಘಟನೆ ಬಗ್ಗೆ ನಾಸೀರುದ್ದೀನ್ ಶಾ ನೀಡಿದ ಹೇಳಿಕೆಯನ್ನು ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ನಾಸೀರುದ್ದೀನ್ ಅವರು ಸರ್ಫರೋಶ್ ಚಿತ್ರದ ಪಾಕಿಸ್ತಾನಿ ಏಜೆಂಟ್ ಪಾತ್ರದಿಂದ ಇನ್ನು ಹೊರ ಬಂದಿಲ್ಲ ಎಂದು ಬಿಜೆಪಿ ಮುಖಂಡ ಮಹೇಂದ್ರನಾಥ್ ಪಾಂಡೆ ಹೇಳಿದ್ದಾರೆ.
ನವನಿರ್ಮಾಣ್ ಸೇನಾದ ಮುಖ್ಯಸ್ಥ ಅಮಿತ್ ಜಾನಿ ಅವರು ನಾಸೀರುದ್ದೀನ್ ಅವರಿಗೆ ಕರಾಚಿಗೆ ತೆರಳುವಂತೆ ಒನ್ ವೇ ಟಿಕೆಟ್ ಬುಕ್ ಮಾಡಿದ್ದಾರೆ. ನಾಸೀರುದ್ದೀನ್ ಶಾ ಅವರು ದೇಶದಲ್ಲಿ ಅಸಹಿಷ್ಣುತೆ ಬಗ್ಗೆ ಚಿಂತಿಸಬೇಕಿಲ್ಲ, ಅವರ ಕುಟುಂಬ ಸೇರಿ ಎಲ್ಲರೂ ಸುರಕ್ಷಿತರು ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications