'ಹಿಂದಿ-ಚೀನೀ ಭಾಯಿ ಭಾಯಿ': ಭಾರತ, ಚೀನಾಕ್ಕೆ ದಲೈಲಾಮ ಕಿವಿಮಾತು
ಭಾರತ-ಚೀನಾ ದೇಶಗಳು ಪರಸ್ಪರ ಹಿಂದಿ-ಚೀನಿ ಭಾಯಿ ಭಾಯಿ ಎಂಬ ರೀತಿಯಲ್ಲಿ ಇರಬೇಕು. ಎರಡೂ ದೇಶಗಳಿಗೆ ಕಿವಿಮಾತು ಹೇಳಿದ ಟಿಬೆಟ್ ನ ಧರ್ಮಗುರು ದಲೈಲಾಮ.
ನವದೆಹಲಿ, ಆಗಸ್ಟ್ 9: ಭಾರತ ಹಾಗೂ ಚೀನಾ ನಡುವೆ ಎದ್ದಿರುವ ಗಡಿ ವಿವಾದದ ಹಿನ್ನೆಲೆಯಲ್ಲಿ ಎರಡೂ ದೇಶಗಳಿಗೆ ಟಿಬೆಟ್ ನ ಬೌದ್ಧಗುರು ಹಾಗೂ ಭಾರತ ಸರ್ಕಾರದ ಬೆಂಬಲ ಹೊಂದಿರುವ ದಲೈಲಾಮಾ ಅವರು ಕಿವಿಮಾತು ಹೇಳಿದ್ದಾರೆ.
ಎರಡೂ ದೇಶಗಳು ಭಾತೃತ್ವದಿಂದ ಇರಬೇಕೆಂದು ಸಲಹೆ ನೀಡಿರುವ ಅವರು, 'ಹಿಂದಿ- ಚೀನಿ ಭಾಯಿ ಭಾಯಿ' ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮ ನಡುವಿನ ಸಮಸ್ಯೆಗಳಿಗೆ ಪರಿಹಾಕ ಕಂಡುಕೊಳ್ಳಲು ಇದೊಂದೇ ದಾರಿ ಎಂದೂ ಅದು ಹೇಳಿದೆ.

ಭಾರತ ಹಾಗೂ ಚೀನಾ ರಾಷ್ಟ್ರಗಳು ಅಕ್ಕಪಕ್ಕದ ದೇಶಗಳಾಗಿರುವುದರಿಂದ ಎರಡೂ ರಾಷ್ಟ್ರಗಳು ಸಹಬಾಳ್ವೆಗೆ ಒತ್ತು ಕೊಡಬೇಕಿದೆ. ಹಾಗಾಗಿ, 'ಹಿಂದಿ-ಚೀನೀ ಭಾಯಿ ಭಾಯಿ' ಎಂಬ ವಾಕ್ಯವನ್ನು ಇಬ್ಬರೂ ಪಾಲಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಇದೇ ವೇಳೆ, ಚೀನಾದಲ್ಲಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ''ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಕೂಲಕರ ವಾತಾವರಣವಿದೆ. ಹಾಗಾಗಿ, ನಾನು ಅಲ್ಲಿ (ಭಾರತ) ಹೆಚ್ಚು ನನ್ನ ಭಾವನೆಗಳನ್ನು ವ್ಯಕ್ತಪಡಿಸಬಲ್ಲೆ. ಇಂಥ ಸ್ವಾತಂತ್ರ್ಯ ಇಲ್ಲದ ದೇಶಗಳನ್ನು ನಾನು ಇಷ್ಟಪಡುವುದಿಲ್ಲ'' ಎಂದಿದ್ದಾರೆ.
ಆದರೆ, ದಲೈಲಾಮಾ ಅವರ ಈ ಕಿವಿಮಾತನ್ನು ಚೀನಾ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕುವುದು ನಿರೀಕ್ಷಿತ ಎಂದೆನಿಸಿದೆ. ಇದೇ ವರ್ಷದ ಆರಂಭದಲ್ಲಿ ದಲೈಲಾಮಾ ಅವರು ಅರುಣಾಚಲಕ್ಕೆ ಭೇಟಿ ನೀಡಿದ್ದರು. ಆದರೆ, ಅವರ ಆ ಭೇಟಿಯನ್ನು ತಡೆಯಬೇಕೆಂದು ಚೀನಾ ಸರ್ಕಾರ, ಭಾರತ ಸರ್ಕಾರವನ್ನು ಆಗ್ರಹಿಸಿತ್ತು.
ಆದರೆ, ಚೀನಾದ ಆಗ್ರಹಕ್ಕೆ ಭಾರತ ಸೊಪ್ಪು ಹಾಕಿರಲಿಲ್ಲ. ಇದು ಚೀನಾವು ಭಾರತದ ಮೇಲೆ ಮುನಿಸಿಕೊಳ್ಳಲು ಮತ್ತೊಂದು ಕಾರಣ. ಹಾಗಾಗಿ, ಚೀನಾದ ಶತ್ರವಾದ ದಲೈಲಾಮಾ ಅವರ ಹಿತನುಡಿಗಳು ಚೀನಾಕ್ಕೆ ಬಿರುನುಡಿಗಳಂತೆ ಕೇಳಿಸಿದರೆ ಅಚ್ಚರಿಯೇನಿಲ್ಲ.
-
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ












Click it and Unblock the Notifications