Get Updates
Get notified of breaking news, exclusive insights, and must-see stories!

ಉತ್ತರ ಭಾರತದಲ್ಲಿ ಮಳೆ ಭೀಕರತೆಗೆ ಮೂರೇ ದಿನದಲ್ಲಿ 26 ಬಲಿ

Recommended Video

      ಈಶಾನ್ಯ ಮತ್ತು ಉತ್ತರ ಭಾರತದಲ್ಲಿ ಭಾರಿ ಮಳೆ | Oneindia Kannada

      ನವದೆಹಲಿ, ಸೆಪ್ಟೆಂಬರ್ 04: ಕೇರಳದ ನಂತರ ಮಳೆರಾಯ ತನ್ನ ವಕ್ರದೃಷ್ಠಿಯನ್ನು ಉತ್ತರ ಭಾರತದತ್ತ ನೆಟ್ಟಿದ್ದಾನೆ. ಮಳೆಯ ರೌದ್ರಾವತಾರಕ್ಕೆ ಅಲ್ಲಿ ಮೂರೇ ದಿನಕ್ಕೆ 26 ಜನ ಜೀವ ಕಳೆದುಕೊಂಡಿದ್ದಾರೆ.

      ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲಪ್ರದೇಶ, ನಾಗಾಲ್ಯಾಂಡ್‌ಗಳಲ್ಲಿಯೂ ಮಳೆಯ ಆರ್ಭಟಕ್ಕೆ ಹಲವು ಜನ ಸೂರು ಕಳೆದುಕೊಂಡಿದ್ದಾರೆ. ಜೊತೆಗೆ ಜೀವ ಹಾನಿಯೂ ಆಗಿದೆ.

      ನವದೆಹಲಿ, ಮಹಾರಾಷ್ಟ್ರದ ಕೆಲವು ನಗರಗಳು, ಉತ್ತರ ಪ್ರದೇಶದ ಕೆಲವು ನಗರಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಮಧ್ಯಪ್ರದೇಶದಲ್ಲಿ ಹುಟ್ಟಿ ಉತ್ತರ ಪ್ರದೇಶದ ಕಡೆ ಹರಿಯುವ ಬಿತ್ವಾ ನದಿ ಪ್ರವಾಹಗೊಂಡಿದ್ದು ನೆರೆ ಪರಿಸ್ಥಿತಿಗೆ ನೂರಾರು ಮನೆಗಳು ಹಾನಿಯಾಗಿವೆ.

      Heavy rain in Northeast and north India states

      ಚೀನಾದ ದೇಶದಿಂದ ಬ್ರಹ್ಮಪುತ್ರ ನದಿಗೆ ಹೆಚ್ಚುವರಿ ನೀರು ಬಿಡುತ್ತಿರುವ ಕಾರಣ ಅಸ್ಸಾಂನಲ್ಲಿ ಪ್ರವಾಹ ಎದುರಾಗಿದೆ. ಚೀನಾದಲ್ಲೂ ಪ್ರವಾಹ ಪರಿಸ್ಥಿತಿ ಇದ್ದು ಈಗಾಗಲೇ ಅಲ್ಲೂ ಕೂಡ ಮಳೆ ಭಾರಿ ಹಾನಿಯನ್ನು ಮಾಡಿದೆ.

      ನಾಗಾಲ್ಯಾಂಡ್‌ನಲ್ಲಿ ಈಗಾಗಲೇ 4000 ಜನರು ನಿರಾಶ್ರಿತರ ಶಿಬಿರಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಕೇಂದ್ರದ ಗೃಹ ಮಂತ್ರಿಗಳು ಪ್ರಕೃತಿ ವಿಕೋಪ ರಕ್ಷಣೆ ಪಡೆಯನ್ನು ನಾಗಾಲ್ಯಾಂಡ್‌ಗೆ ಕಳುಹಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+