ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಭಾರತದಲ್ಲಿ ಮಳೆ ಭೀಕರತೆಗೆ ಮೂರೇ ದಿನದಲ್ಲಿ 26 ಬಲಿ

By Manjunatha
|
Google Oneindia Kannada News

Recommended Video

ಈಶಾನ್ಯ ಮತ್ತು ಉತ್ತರ ಭಾರತದಲ್ಲಿ ಭಾರಿ ಮಳೆ | Oneindia Kannada

ನವದೆಹಲಿ, ಸೆಪ್ಟೆಂಬರ್ 04: ಕೇರಳದ ನಂತರ ಮಳೆರಾಯ ತನ್ನ ವಕ್ರದೃಷ್ಠಿಯನ್ನು ಉತ್ತರ ಭಾರತದತ್ತ ನೆಟ್ಟಿದ್ದಾನೆ. ಮಳೆಯ ರೌದ್ರಾವತಾರಕ್ಕೆ ಅಲ್ಲಿ ಮೂರೇ ದಿನಕ್ಕೆ 26 ಜನ ಜೀವ ಕಳೆದುಕೊಂಡಿದ್ದಾರೆ.

ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲಪ್ರದೇಶ, ನಾಗಾಲ್ಯಾಂಡ್‌ಗಳಲ್ಲಿಯೂ ಮಳೆಯ ಆರ್ಭಟಕ್ಕೆ ಹಲವು ಜನ ಸೂರು ಕಳೆದುಕೊಂಡಿದ್ದಾರೆ. ಜೊತೆಗೆ ಜೀವ ಹಾನಿಯೂ ಆಗಿದೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ನವದೆಹಲಿ, ಮಹಾರಾಷ್ಟ್ರದ ಕೆಲವು ನಗರಗಳು, ಉತ್ತರ ಪ್ರದೇಶದ ಕೆಲವು ನಗರಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಮಧ್ಯಪ್ರದೇಶದಲ್ಲಿ ಹುಟ್ಟಿ ಉತ್ತರ ಪ್ರದೇಶದ ಕಡೆ ಹರಿಯುವ ಬಿತ್ವಾ ನದಿ ಪ್ರವಾಹಗೊಂಡಿದ್ದು ನೆರೆ ಪರಿಸ್ಥಿತಿಗೆ ನೂರಾರು ಮನೆಗಳು ಹಾನಿಯಾಗಿವೆ.

Heavy rain in Northeast and north India states

ಕೊಡಗು ಚಿತ್ರಗಳು : 1795 ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ವಾಸ ಕೊಡಗು ಚಿತ್ರಗಳು : 1795 ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ವಾಸ

ಚೀನಾದ ದೇಶದಿಂದ ಬ್ರಹ್ಮಪುತ್ರ ನದಿಗೆ ಹೆಚ್ಚುವರಿ ನೀರು ಬಿಡುತ್ತಿರುವ ಕಾರಣ ಅಸ್ಸಾಂನಲ್ಲಿ ಪ್ರವಾಹ ಎದುರಾಗಿದೆ. ಚೀನಾದಲ್ಲೂ ಪ್ರವಾಹ ಪರಿಸ್ಥಿತಿ ಇದ್ದು ಈಗಾಗಲೇ ಅಲ್ಲೂ ಕೂಡ ಮಳೆ ಭಾರಿ ಹಾನಿಯನ್ನು ಮಾಡಿದೆ.

ಪ್ರವಾಹದ ನಂತರ ಕೇರಳಕ್ಕೆ ಅಪ್ಪಳಿಸಿದ ಇಲಿಜ್ವರ: ಏನಿದು, ಲಕ್ಷಣವೇನು?ಪ್ರವಾಹದ ನಂತರ ಕೇರಳಕ್ಕೆ ಅಪ್ಪಳಿಸಿದ ಇಲಿಜ್ವರ: ಏನಿದು, ಲಕ್ಷಣವೇನು?

ನಾಗಾಲ್ಯಾಂಡ್‌ನಲ್ಲಿ ಈಗಾಗಲೇ 4000 ಜನರು ನಿರಾಶ್ರಿತರ ಶಿಬಿರಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಕೇಂದ್ರದ ಗೃಹ ಮಂತ್ರಿಗಳು ಪ್ರಕೃತಿ ವಿಕೋಪ ರಕ್ಷಣೆ ಪಡೆಯನ್ನು ನಾಗಾಲ್ಯಾಂಡ್‌ಗೆ ಕಳುಹಿಸಿದ್ದಾರೆ.

English summary
Heavy rain created flood situation in north east India states and in some North India states. 26 people have lost life in just three days due to heavy rain and flood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X