ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇಶಾದ್ಯಂತ ಹಂದಿಜ್ವರಕ್ಕೆ 800 ಮಂದಿ ಬಲಿ
ನವದೆಹಲಿ, , ಫೆ. 22 : ದೇಶದಾದ್ಯಂತ ಮಾರಕ ಹಂದಿಜ್ವರಕ್ಕೆ ಬಲಿಯಾದವರ ಸಂಖ್ಯೆ 800ಕ್ಕೆ ಏರಿದೆ. ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದ್ದು 13,000 ದಾಟಿದೆ.
ಎಚ್1ಎನ್1 ಮಹಾಮಾರಿಗೆ ಜನರು ಭಯಪಡಬೇಕಾಗಿಲ್ಲ. ಎಲ್ಲ ಆಸ್ಪತ್ರೆಗಳೂ ಅಗತ್ಯ ಔಷಧ ಮತ್ತು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. [ಬೆಂಗಳೂರು: ಹಂದಿ ಜ್ವರ ಔಷಧ ಲಭ್ಯವಿರುವ ಆಸ್ಪತ್ರೆ ಪಟ್ಟಿ]
ಎಚ್1ಎನ್1 ಉತ್ತರ ಪ್ರದೇಶ, ನಾಗಾಲ್ಯಾಂಡ್ ನಲ್ಲೂ ವ್ಯಾಪಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಇದುವರೆಗೆ 190 ಪ್ರಕರಣಗಳು ಪತ್ತೆಯಾಗಿವೆ. ದೇಶದ ಯಾವ ಯಾವ ಭಾಗಗಳಲ್ಲಿ ಕಾಯಿಲೆ ವ್ಯಾಪಕವಾಗಿ ಹಬ್ಬಿದೆ ಅದಕ್ಕೆ ಕಾರಣವೇನು ಎಂಬ ಬಗ್ಗೆ ಸಂಶೋಧನೆ ನಡೆಸಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್)ನ ತಜ್ಞರ ತಂಡವೊಂದದನ್ನು ರಚಿಸಿದೆ.
ರಾಜ್ಯದಲ್ಲಿಯೂ
ಸಕಲ
ಮುಂಜಾಗೃತಾ
ಕ್ರಮ
ಹಂದಿಜ್ವರದ
ಬಗ್ಗೆ
ಈಗಾಗಲೇ
ಜನಜಾಗೃತಿ
ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿದೆ.
ಎಲ್ಲಾ
ಜಿಲ್ಲಾ
ಕೇಂದ್ರಗಳ
ಆಸ್ಪತ್ರೆಗಳಿಗೂ
ಅಗತ್ಯ
ಔಷಧ
ಪೂರೈಕೆ
ಮಾಡಲಾಗಿದೆ.
ಅಲ್ಲದೇ
ಆಶಾ
ಕಾರ್ಯಕರ್ತೆಯರಿಗೂ
ಈ
ಬಗ್ಗೆ
ಮಾಹಿತಿ
ನೀಡಲಾಗಿದೆ
ಎಂದು
ಆರೋಗ್ಯ
ಸಚಿವ
ಯು.ಟಿ.ಖಾದರ್
ತಿಳಿಸಿದ್ದಾರೆ.
Comments
h1n1 bengaluru karnataka viruses swine flu ut khader medicine hospital district news ಎಚ್1ಎನ್1 ಬೆಂಗಳೂರು ವೈರಸ್ ಆಸ್ಪತ್ರೆ ರೋಗಿಗಳು
English summary
Swine flu deaths in the country continued unabated with 40 more people succumbing to the disease as the toll reached 800 and the number of H1N1 cases inched towards the 13,000 mark even as the government on Friday ordered additional testing kits and Oseltamivir drugs to tackle the virus
Story first published: Sunday, February 22, 2015, 13:51 [IST]