ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಕೋಚ್ ಆಗಿದ್ರಂತೆ ರಾಮ್ ರಹೀಂ ಬಾಬಾ!
ರಾಮ್ ರಹೀಂ ಸಿಂಗ್ ಅವರು ಕೊಹ್ಲಿ ಅವರಿಗೆ ಕೋಚ್ ಆಗಿದ್ದರಂತೆ. ಬಾಕ್ಸರ್ ವಿಜೇಂದರ್ ಸಿಂಗ್ ಗೂ ಕೋಚ್ ಆಗಿದ್ದಾಗಿ ಅವರೇ ಹೇಳಿಕೊಂಡಿದ್ದ ವಿಡಿಯೋವೊಂದು ಈಗ ವೈರಲ್ ಆಗಿದೆ.
ನವದೆಹಲಿ, ಆಗಸ್ಟ್ 26: ಅತ್ಯಾಚಾರದ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿರುವ ಡೇರಾ ಸಚಾ ಸೌದ ಪಂಗಡದ ಧರ್ಮಗುರು ಬಾಬಾ ರಾಮ್ ರಹೀಮ್ ಸಿಂಗ್, ಈ ಹಿಂದೆ ಭಾರತದ ಕ್ರೀಡಾ ತಾರೆಗಳಾದ ಕ್ರಿಕೆಟಗ ವಿರಾಟ್ ಕೊಹ್ಲಿ, ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೂ ಕೋಚ್ ಆಗಿದ್ದರಂತೆ!
ಹೀಗೆಂದು, ಸಿಬಿಐ ಹೇಳಿಲ್ಲ.. ಇದನ್ನು ಖುದ್ದು ಬಾಬಾ ರಾಮ್ ರಹೀಮ್ ಅವರೇ ಹೇಳಿಕೊಂಡಿದ್ದಾರೆ. ಈ ಹಿಂದೆ, ಅವರು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ತಮ್ಮನ್ನು ತಾವು ಕ್ರೀಡಾ ಕೋಚ್ ಎಂದು ಹೇಳಿಕೊಂಡಿದ್ದು, ಕೊಹ್ಲಿ ಹಾಗೂ ವಿಜೇಂದರ್ ಸಿಂಗ್ ಅವರಿಗೆ ಕೋಚ್ ಆಗಿದ್ದ ಪುಟ್ಟ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ಈ ಸಂದರ್ಶನದಲ್ಲಿ ಅವರು, ''ಇಂದು ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಗೌರವ ತರುತ್ತಿದ್ದಾರೆ. ಅದೆಲ್ಲಾ ಯಾರಿಂದ ಬರುತ್ತಿದೆ ಎಂದ ತಿಳಿದುಕೊಂಡಿರಿ. ನನ್ನಿಂದ. ನಾನು ಹಿಂದೆ ಅವರನ್ನು ಕೋಚ್ ಮಾಡಿದ್ದರ ಫಲವಾಗಿಯೇ ಅವರು ದೇಶಕ್ಕೆ ಗೌರವ ತರುತ್ತಿದ್ದಾರೆ'' ಎಂದು ಅವರು ತಿಳಿಸಿದ್ದಾರೆ.
''ಧರ್ಮ ಗುರುವಾಗಿದ್ದವನು ಕ್ರೀಡಾ ಕೋಚ್ ಆಗಲು ಹೇಗೆ ಸಾಧ್ಯ ಎಂದೆಲ್ಲಾ ನೀವು ಆಲೋಚಿಸಬಹುದು. ನಾನು ಸರ್ವ ಕಾರ್ಯಗಳನ್ನೂ ಮಾಡಬಲ್ಲೆ. ಇದು ನಿಮಗೆ ಈಗಾಗಲೇ ಗೊತ್ತಾಗಿರಬಹುದು'' ಎಂದು ಸಂದರ್ಶಕರನ್ನು ಉದ್ದೇಶಿಸಿ ಅವರು ಹೇಳಿದ್ದರು.
ಇಷ್ಟೇ ಅಲ್ಲ, ಅವರು ಈ ಹಿಂದೆ 32 ಕ್ರೀಡಾ ವಿಭಾಗಗಳಲ್ಲಿ ಉತ್ತಮ ಕ್ರೀಡಾಪಟು ಎನಿಸಿಕೊಂಡಿದ್ದರಂತೆ. ಹಲವಾರು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಿ ವಿವಿಧ ಬಹುಮಾನ, ಪದಕ ಪಡೆದಿದ್ದಾರಂತೆ. ಆಡಿದ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜೋಕ್ ಗಳಂತೆ ಉಪಯೋಗಿಸಲಾಗುತ್ತಿದೆ.
ಅವರ ಟ್ವಿಟ್ಟರ್ ಖಾತೆಯಲ್ಲಿ ಅವರ ಬಣ್ಣನೆಯ ಸಾಲುಗಳಂತೂ ಉದ್ದುದ್ದ ಇವೆ! ಅದರಲ್ಲಿ, ''ಧರ್ಮಗುರು, ಮಾನವ ಪ್ರೇಮಿ, ಮಹಾನ್ ಗಾಯಕ, ಆಲ್ರೌಂಡರ್ ಕ್ರೀಡಾಳು, ಸಿನಿಮಾ ನಿರ್ದೇಶಕ, ನಟ, ಕಲಾ ನಿರ್ದೇಶಕ, ಸಂಗೀತ ನಿರ್ದೇಶಕ, ಲೇಖಕ, ಚಿತ್ರ ಸಾಹಿತಿ, ಆತ್ಮ ಚರಿತ್ರಾಕಾರ, ಡಿಒಪಿ'' ಎಂದೆಲ್ಲಾ ಬಣ್ಣಿಸಲಾಗಿದೆ.
Received via @WhatsApp Passing without comment 🤐🙌 pic.twitter.com/809ELRpLGb
— Aakash Chopra (@cricketaakash) August 26, 2017
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications