ಗುಜರಾತ್ನಲ್ಲಿ ಹೆಚ್ಚಾಗುತ್ತಿದೆ ಬಡತನ: ಬಿಪಿಎಲ್ ಕಾರ್ಡ್ ಕುಟುಂಬಗಳ ಸಂಖ್ಯೆ ಹೆಚ್ಚಳ : ವರದಿ
ಗುಜರಾತ್ನ ಜನಸಂಖ್ಯೆಯ ಮೂರನೇ ಒಂದು ಭಾಗ ಅಥವಾ 31 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬಡತನ ರೇಖೆಯ (ಬಿಪಿಎಲ್) ಕೆಳಗೆ ವಾಸಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ತಿಂಗಳಿಗೆ 816 ರೂಪಾಯಿಗಳಿಗಿಂತ ಕಡಿಮೆ ಮತ್ತು ನಗರ ಪ್ರದೇಶಗಳಲ್ಲಿ 1000 ರೂಪಾಯಿಗಳಿಗಿಂತ ಕಡಿಮೆ ಅಥವಾ ದಿನಕ್ಕೆ ಗ್ರಾಮೀಣ ಪ್ರದೇಶದಲ್ಲಿ 26 ರೂಪಾಯಿ, ನಗರ ಪ್ರದೇಶದಲ್ಲಿ 32 ರೂಪಾಯಿಗಿಂತ ಕಡಿಮೆ ಆದಾರ ಹೊಂದಿದ್ದರೆ ಅವರನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ಎಂದು ನಿರ್ಧರಿಸಲಾಗುತ್ತದೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಸೆಪ್ಟೆಂಬರ್ 14 ರಂದು, ಕಾಂಗ್ರೆಸ್ ಶಾಸಕ ತುಷಾರ್ ಚೌಧರಿ ಅವರ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಬಚುಭಾಯಿ ಮಗನ್ಭಾಯ್ ಖಬಾದ್ ಗುಜರಾತ್ನಲ್ಲಿ 31,61,310 ಬಿಪಿಎಲ್ ಕುಟುಂಬಗಳನ್ನು ಹೊಂದಿವೆ ಎಂದು ಮಾಹಿತಿ ನೀಡಿದರು. ಇವುಗಳಲ್ಲಿ 16,28,744 ಕುಟುಂಬಗಳು ಅತ್ಯಂತ ಬಡವರ ವರ್ಗಕ್ಕೆ ಸೇರಿದ್ದರೆ, 15,32,566 ಬಡ ಕುಟುಂಬಕ್ಕೆ ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೆ, 2020-21 ರಲ್ಲಿ, 1,047 ಕುಟುಂಬಗಳು ಬಿಪಿಎಲ್ ವರ್ಗಕ್ಕೆ ಸೇರ್ಪಡೆಯಾಗಿವೆ ಕೇವಲ 14 ಕುಟುಂಬಗಳು ಮಾತ್ರ ಬಿಪಿಎಲ್ ವರ್ಗದಿಂದ ಹೊರಬಂದಿವೆ. 2021-22ರಲ್ಲಿ ಹೊಸ ಬಿಪಿಎಲ್ ಕುಟುಂಬಗಳ ಸಂಖ್ಯೆ 1,751 ಆಗಿದ್ದು, ಎರಡು ಕುಟುಂಬಗಳು ಮಾತ್ರ ಈ ವರ್ಗದಿಂದ ದೂರ ಸರಿದಿದೆ. 2022-23 ರಲ್ಲಿ ಹೊಸದಾಗಿ ಬಿಪಿಎಲ್ ವರ್ಗಕ್ಕೆ 303 ಕುಟುಂಬಗಳಲ್ಲಿ ಸೇರ್ಪಡೆಯಾಗಿವೆ. ಒಂದು ಕುಟುಂಬ ಮಾತ್ರ ಬಿಪಿಎಲ್ ವರ್ಗದಿಂದ ಹೊರಬಂದಿದೆ ಎಂದು ವಿವರ ನೀಡಿದ್ದಾರೆ.
ಜನಸಂಖ್ಯೆಯ ಮೂರನೇ ಒಂದು ಭಾಗ ಬಡತನ ರೇಖೆಗಿಂತ ಕೆಳಗೆ
ಅಹಮದಾಬಾದ್ ಮೂಲದ ಅರ್ಥಶಾಸ್ತ್ರಜ್ಞ ಹೇಮಂತ್ ಕುಮಾರ್ ಷಾ ಅವರ ಹೇಳಿಕೆ ಪ್ರಕಾರ, ಒಂದು ಕುಟುಂಬಕ್ಕೆ ಸರಾಸರಿ ಆರು ಸದಸ್ಯರನ್ನು ಹೊಂದಿರುವ 31.64 ಲಕ್ಷ ಬಡ ಕುಟುಂಬಗಳನ್ನು ನಾವು ಪರಿಗಣಿಸಿದರೆ, ಬಿಪಿಎಲ್ ಕಾರ್ಡ್ ಹೊಂದಿರುವ ಜನಸಂಖ್ಯೆ 1 ಕೋಟಿ 89 ಲಕ್ಷಗಳು, ಅಂದರೆ ಗುಜರಾತ್ನ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದ ಜನ ಬಡತನ ರೇಖೆಗಿಂತ ಕೆಳಗಡೆ ಇದ್ದಾರೆ ಎಂದು ವಿವರಿಸಿದ್ದಾರೆ.
ಜನಸಂಖ್ಯೆಯ 38.09 ಪ್ರತಿಶತ ಮಂದಿಗೆ ಅಪೌಷ್ಠಿಕತೆ
2023ರ ಜುಲೈನಲ್ಲಿ ನೀತಿ ಆಯೋಗವು ಬಿಡುಗಡೆ ಮಾಡಿದ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕ (ಎಂಪಿಐ) ವರದಿಯ ಪ್ರಕಾರ, ರಾಜ್ಯದಲ್ಲಿನ ಜನಸಂಖ್ಯೆಯ 38.09 ಪ್ರತಿಶತದಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದ ಗುಜರಾತ್ ಪೌಷ್ಟಿಕಾಂಶದ ವಿಚಾರದಲ್ಲಿ ಇನ್ನೂ ಸುಧಾರಿಸಬೇಕಿದೆ ಎಂದು ಹೇಳಿತ್ತು. ಗ್ರಾಮೀಣ ಗುಜರಾತ್ ಜನಸಂಖ್ಯೆಯ ಅರ್ಧದಷ್ಟು ಜನರು ಪೌಷ್ಟಿಕಾಂಶದಿಂದ ವಂಚಿತರಾಗಿದ್ದಾರೆ (ಶೇ. 44.45), ಆದರೆ ನಗರ ಪ್ರದೇಶಗಳ ಅಂಕಿಅಂಶವು ಶೇಕಡಾ 28.97 ರಷ್ಟಿದೆ ಎಂದು ವರದಿಯಲ್ಲಿ ಹೇಳಿತ್ತು.
-
Hebbal tunnel project: ಹೆಬ್ಬಾಳ ಬಳಿ 1,086 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ರಸ್ತೆ; ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಪ್ರಯೋಗ -
Holi Date: ಕರ್ನಾಟಕದಲ್ಲಿ ಹೋಳಿ ಹಬ್ಬ ಯಾವಾಗ? ದಿನಾಂಕ, ಸಮಯ- ಪೌರಾಣಿಕ ಮಹತ್ವ -
War Update: ಯುದ್ಧದ ಇಂದಿನ 10 ಪ್ರಮುಖಾಂಶಗಳು: ಅಲಿ ಖಮೇನಿ ಸಾವಿನ ಸೇಡಿಗಾಗಿ ಇರಾನ್ ಭೀಕರ ಪ್ರತಿದಾಳಿ -
Toxic: ಮತ್ತೆ ಬೋಲ್ಡ್ ಅವತಾರದಲ್ಲಿ ಯಶ್: ಮಾರ್ಚ್ 2ಕ್ಕೆ "ಟಾಕ್ಸಿಕ್" ಚಿತ್ರತಂಡದಿಂದ ಬಿಗ್ ಸರ್ಪ್ರೈಸ್ -
Weekly Horoscope March 2 to 8: ಮಾರ್ಚ್ ವಾರಭವಿಷ್ಯ: ಮೇಷದಿಂದ ಮೀನವರೆಗೆ ಯಾರಿಗೆ ಯಶಸ್ಸು, ಯಾರಿಗೆ ಸವಾಲು -
Lunar Eclipse: ಮಾರ್ಚ್ 3 ಹುಣ್ಣಿಮೆ: ವರ್ಷದ ಮೊದಲ ಮಹಾ ಚಂದ್ರ ಗ್ರಹಣ – ನಾಲ್ಕು ರಾಶಿಗಳಿಗೆ ಅಶುಭ ಸೂಚನೆ -
Gruhalakshmi scheme: ರಾಜ್ಯದ ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್: 26, 27ನೇ ಕಂತಿನ ಹಣ ಜಮಾದ ಬಗ್ಗೆ ಮಹತ್ವದ ಅಪ್ಡೇಟ್ -
Horoscope 28 February: ಫೆಬ್ರವರಿ 28ರ ದ್ವಾದಶ ರಾಶಿ ಫಲ: ಯಾವ ರಾಶಿಗೆ ಯಶಸ್ಸು, ಯಾರಿಗೆ ಸವಾಲು ಇಲ್ಲಿದೆ ಸಂಪೂರ್ಣ ಮಾಹಿತಿ -
LPG Price: ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ: ಇಲ್ಲಿದೆ ಮಾರ್ಚ್ 1ರ ದರಪಟ್ಟಿ -
ರಣಜಿ ಟೂರ್ನಿಯಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಸೋತರೂ ಗೆದ್ದ ಕನ್ನಡಿಗ: ಮೋಡಿಯಂತೂ ಅಲ್ಲ, ಇಲ್ಲಿದೆ ಮಾಹಿತಿ -
Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು -
ಮಾರ್ಚ್ 3, 2026 – ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಕೇತುಗ್ರಸ್ತ ಮಹಾ ಚಂದ್ರಗ್ರಹಣ: ದ್ವಾದಶ ರಾಶಿಗಳ ಫಲಿತಾಂಶ












Click it and Unblock the Notifications