ಗುಜರಾತ್ ಚುನಾವಣೆ; ಅ.19ರಿಂದ ಮೋದಿಯಿಂದ ಎರಡು ದಿನಗಳ ಪ್ರವಾಸ

ನವದೆಹಲಿ, ಅ.18: ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಗುಜರಾತ್‌ಗೆ ರಾಜಕೀಯ ನಾಯಕರ ದಂಡು ಹರಿಯುತ್ತೆ ಇದೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುಜರಾತ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೊಮ್ಮೆ ತಮ್ಮ ತವರಿಗೆ ತೆರಳಲಿದ್ದಾರೆ.

ಬುಧವಾರ ತಮ್ಮ ತವರು ರಾಜ್ಯ ಗುಜರಾತ್‌ಗೆ ಪ್ರಧಾನಿ ಮತ್ತೊಂದು ಭೇಟಿ ನೀಡಲಿದ್ದಾರೆ. ಅಲ್ಲಿ ಸುಮಾರು 15,670 ಕೋಟಿ ರೂಪಾಯಿ ವೆಚ್ಚದ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಎರಡು ದಿನಗಳ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಗಾಂಧಿನಗರ, ಜುನಾಗಢ್, ರಾಜ್‌ಕೋಟ್, ಕೆವಾಡಿಯಾ ಮತ್ತು ವ್ಯಾರಾದಲ್ಲಿ ಸಂಚರಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ಮಂಗಳವಾರ ತಿಳಿಸಿದೆ.

ಬುಧವಾರ ಬೆಳಗ್ಗೆ 9:45ರ ಸುಮಾರಿಗೆ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ-22ನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

'ಹೆಮ್ಮೆಯ ಹಾದಿ' ಎಂಬ ವಿಷಯದ ಅಡಿಯಲ್ಲಿ ನಡೆಯುತ್ತಿರುವ ಎಕ್ಸ್‌ಪೋ, ಇಲ್ಲಿಯವರೆಗೆ ನಡೆದ ಭಾರತೀಯ ರಕ್ಷಣಾ ಪಡೆಯ ಎಕ್ಸ್‌ಪೋದಲ್ಲಿ ಅತಿ ದೊಡ್ಡ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಗುಜರಾತ್‌ನಲ್ಲಿ ದೀಸಾ ಏರ್‌ಫೀಲ್ಡ್‌ಗೆ ಶಂಕುಸ್ಥಾಪನೆ

ಗುಜರಾತ್‌ನಲ್ಲಿ ದೀಸಾ ಏರ್‌ಫೀಲ್ಡ್‌ಗೆ ಶಂಕುಸ್ಥಾಪನೆ

ಡಿಫೆನ್ಸ್ ಎಕ್ಸ್‌ಪೋ-22 ಭಾರತೀಯ ರಕ್ಷಣಾ ಪಡೆಯ ಉತ್ಪಾದನಾ ಸಾಮರ್ಥ್ಯದ ವಿಸ್ತಾರವಾದ ವ್ಯಾಪ್ತಿ ಮತ್ತು ಪ್ರಮಾಣವನ್ನು ಪ್ರದರ್ಶಿಸುತ್ತದೆ. ಎಕ್ಸ್‌ಪೋ ಇಂಡಿಯಾ ಪೆವಿಲಿಯನ್ ಮತ್ತು ಹತ್ತು ರಾಜ್ಯ ಪೆವಿಲಿಯನ್‌ಗಳನ್ನು ಹೊಂದಿರುತ್ತದೆ. ಇಂಡಿಯಾ ಪೆವಿಲಿಯನ್‌ನಲ್ಲಿ, ಪ್ರಧಾನಮಂತ್ರಿಯವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸಗೊಳಿಸಿದ ಸ್ವದೇಶಿ ವಿಮಾನವಾದ HTT-40 ಅನ್ನು ಅನಾವರಣಗೊಳಿಸಲಿದ್ದಾರೆ.

ಇನ್ನು, ಪ್ರಧಾನಿ ಮೋದಿ ಗುಜರಾತ್‌ನಲ್ಲಿ ದೀಸಾ ಏರ್‌ಫೀಲ್ಡ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಎಕ್ಸ್‌ಪೋವು 2ನೇ ಭಾರತ - ಆಫ್ರಿಕಾ ರಕ್ಷಣಾ ಸಂವಾದಕ್ಕೆ ಸಾಕ್ಷಿಯಾಗಲಿದೆ.

10,000 ಕೋಟಿ ವೆಚ್ಚದಲ್ಲಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್‌

10,000 ಕೋಟಿ ವೆಚ್ಚದಲ್ಲಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್‌

ಎಕ್ಸ್‌ಪೋ ಸಂದರ್ಭದಲ್ಲಿ, ರಕ್ಷಣೆಗಾಗಿ ಮೊಟ್ಟಮೊದಲ ಹೂಡಿಕೆದಾರರ ಸಭೆಯೂ ನಡೆಯಲಿದೆ. ನೂರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ತಮ್ಮ ಆವಿಷ್ಕಾರಗಳನ್ನು ಮಂಥನ್ 2022 ರಲ್ಲಿ ಪ್ರದರ್ಶಿಸಲು ಅವಕಾಶವನ್ನು ಪಡೆದುಕೊಳ್ಳಲು ಈ ಎಕ್ಸ್‌ಪೋ ಸಾಕ್ಷಿಯಾಗಲಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಅದಾಲಾಜ್‌ನಲ್ಲಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್‌ಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಒಟ್ಟು 10,000 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಮಿಷನ್ ಗುಜರಾತ್‌ನಲ್ಲಿ ಹೊಸ ತರಗತಿ ಕೊಠಡಿಗಳು, ಸ್ಮಾರ್ಟ್ ತರಗತಿಗಳು, ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ರಾಜ್ಯದ ಶಾಲೆಗಳ ಮೂಲಸೌಕರ್ಯಗಳ ಒಟ್ಟಾರೆ ಅಭಿವೃದ್ಧಿಗೆ ಇದು ಕೊಡುಗೆ ನೀಡಲಿದೆ.

ತ್ರಿಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಸುಮಾರು 4,260 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಜುನಾಗಢಕ್ಕೆ ತೆರಳಲಿದ್ದಾರೆ.

3580 ಕೋಟಿ ರೂ.ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ

3580 ಕೋಟಿ ರೂ.ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ

ಮಧ್ಯಾಹ್ನ ಸುಮಾರಿಗೆ ಜುನಾಗಢದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅದರ ನಂತರ, ಸುಮಾರು 6 ಗಂಟೆಗೆ, ಇಂಡಿಯಾ ಅರ್ಬನ್ ಹೌಸಿಂಗ್ ಕಾನ್‌ಕ್ಲೇವ್ 2022 ಅನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ರಾಜ್‌ಕೋಟ್‌ನಲ್ಲಿ ಅನೇಕ ಪ್ರಮುಖ ಯೋಜನೆಗಳಿಗೆ ಅಡಿಪಾಯ ಹಾಕುತ್ತಾರೆ. ಒಟ್ಟು ಜುನಾಗಢದಲ್ಲಿ ಪ್ರಧಾನಿ ಸುಮಾರು 3580 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕರಾವಳಿಯ ಹೆದ್ದಾರಿಗಳ ಸುಧಾರಣೆಯ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಯೋಜನೆಯ ಮೊದಲ ಹಂತದಲ್ಲಿ, 13 ಜಿಲ್ಲೆಗಳಲ್ಲಿ ಒಟ್ಟು 270 ಕಿಮೀ ಉದ್ದದ ಹೆದ್ದಾರಿಯನ್ನು ಒಳಗೊಳ್ಳಲಿದೆ. ಗಿರ್ ಸೋಮನಾಥದಲ್ಲಿ ಮಧವಾಡದಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಸೇರಿದಂತೆ ಎರಡು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ ನಂತರ, ರಾಜ್‌ಕೋಟ್‌ನಲ್ಲಿ ಸುಮಾರು 5,860 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಎರಡು ದಿನ ಮೋದಿಯಿಂದ ಭರ್ಜರಿ ಶಂಕು ಸ್ಥಾಪನೆ ಕಾಯಕ್ರಮಗಳು

ಎರಡು ದಿನ ಮೋದಿಯಿಂದ ಭರ್ಜರಿ ಶಂಕು ಸ್ಥಾಪನೆ ಕಾಯಕ್ರಮಗಳು

ಸಾರ್ವಜನಿಕ ಸಮಾರಂಭದಲ್ಲಿ, ಲೈಟ್ ಹೌಸ್ ಯೋಜನೆಯಡಿ ನಿರ್ಮಿಸಲಾದ 1,100 ಕ್ಕೂ ಹೆಚ್ಚು ಮನೆಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಮನೆಗಳ ಕೀಗಳನ್ನು ಸಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು.

ಗುಜರಾತ್‌ನ ಎನ್‌ಎಚ್ 27 ರ ರಾಜ್‌ಕೋಟ್-ಗೊಂಡಾಲ್-ಜೆಟ್‌ಪುರ ವಿಭಾಗದ ಅಸ್ತಿತ್ವದಲ್ಲಿರುವ ನಾಲ್ಕು ಪಥದ ರಸ್ತೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ. ಮೋರ್ಬಿ, ರಾಜ್‌ಕೋಟ್, ಬೊಟಾಡ್, ಜಾಮ್‌ನಗರ ಮತ್ತು ಕಚ್‌ನ ವಿವಿಧ ಸ್ಥಳಗಳಲ್ಲಿ ಸುಮಾರು 2,950 ಕೋಟಿ ಮೌಲ್ಯದ ಜಿಐಡಿಸಿ ಕೈಗಾರಿಕಾ ವಸಾಹತುಗಳ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.

ಗಢ್ಕಾದಲ್ಲಿ ಅಮುಲ್-ಫೆಡ್ ಡೈರಿ ಪ್ಲಾಂಟ್, ರಾಜ್‌ಕೋಟ್‌ನಲ್ಲಿ ಒಳಾಂಗಣ ಕ್ರೀಡಾ ಸಂಕೀರ್ಣದ ನಿರ್ಮಾಣ, ಎರಡು ನೀರು ಸರಬರಾಜು ಯೋಜನೆಗಳು ಮತ್ತು ರಸ್ತೆಗಳು ಮತ್ತು ರೈಲ್ವೆ ವಲಯದ ಇತರ ಯೋಜನೆಗಳಿಗೂ ಅಡಿಪಾಯ ಹಾಕಲಾಗುತ್ತದೆ.

ಗುರುವಾರ ಬೆಳಿಗ್ಗೆ 9:45 ರ ಸುಮಾರಿಗೆ, ಯುಎನ್ ಸೆಕ್ರೆಟರಿ ಜನರಲ್ ಅವರ ಉಪಸ್ಥಿತಿಯಲ್ಲಿ ಕೆವಾಡಿಯಾದಲ್ಲಿ ಮಿಷನ್ ಲೈಫ್‌ಗೆ ಪ್ರಧಾನ ಮಂತ್ರಿ ಚಾಲನೆ ನೀಡಲಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆವಾಡಿಯಾದಲ್ಲಿ 10ನೇ ಮುಖ್ಯಸ್ಥರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನವು ಪ್ರಪಂಚದಾದ್ಯಂತದ 118 ಭಾರತೀಯ ಮಿಷನ್‌ಗಳ ಮುಖ್ಯಸ್ಥರನ್ನು (ರಾಯಭಾರಿಗಳು ಮತ್ತು ಹೈಕಮಿಷನರ್‌ಗಳು) ಒಟ್ಟುಗೂಡಿಸುತ್ತದೆ.

ಸಂಜೆ ನಂತರ, ಪ್ರಧಾನಮಂತ್ರಿಯವರು ತಾಪಿಯ ವ್ಯಾರಾದಲ್ಲಿ 1,970 ಕೋಟಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತಾಪಿ ಮತ್ತು ನರ್ಮದಾ ಜಿಲ್ಲೆಗಳಲ್ಲಿ 300 ಕೋಟಿಗೂ ಅಧಿಕ ಮೊತ್ತದ ನೀರು ಸರಬರಾಜು ಯೋಜನೆಗಳು ಅಡಿಗಲ್ಲು ಹಾಕುವ ಕಾರ್ಯಕ್ರಮವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+