ಜಿಎಸ್ಟಿ ಪರಿಣಾಮ: ಮಧ್ಯಮ ವರ್ಗಕ್ಕೆ ಎಲ್ಇಡಿ ಸಿಕ್ಕಿತು ಕೈಗೆಟಕುವ ದರದಲ್ಲಿ
ನವದೆಹಲಿ, ಅಕ್ಟೋಬರ್ 19: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನದಿಂದ ಇಂಧನ ಉತ್ಪನ್ನಗಳ ಮೇಲಿನ ಪರೋಕ್ಷ ತೆರಿಗೆಯ ಪ್ರಮಾಣ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ನಿಶ್ಚಿತವಾಗಿಯೂ ಕೊನೆಯ ಗ್ರಾಹಕನಿಗೆ ಅದರಲ್ಲಿಯೂ ಮುಖ್ಯವಾಗಿ ಭಾರತದ ಮಧ್ಯಮ ವರ್ಗದ ಜನರಿಗೆ ಬಹುದೊಡ್ಡ ಕಾಣಿಕೆ.
ವಿದ್ಯುಚ್ಛಕ್ತಿ ಆಧಾರಿತ ಸಾಧನಗಳ ದರವು ಸರ್ಕಾರದ ಉನ್ನತ್ ಜೀವನ್ ಅಡಿಯಲ್ಲಿ ಎಲ್ಲರಿಗೂ ಕಡಿಮೆ ದರದಲ್ಲಿ ಎಲ್ಇಡಿ ಮತ್ತು ಇತರೆ ಸಾಧನಗಳನ್ನು ತಲುಪಿಸುವ ಯೋಜನೆಯನ್ನು (ಉಜಾಲ) ಸರಕು ಮತ್ತು ಸೇವೆಗಳ ತೆರಿಗೆ ಆಧಾರದಲ್ಲಿ ಪರಿಷ್ಕರಿಸಲಾಗಿದೆ.
ಜಿಎಸ್ಟಿಗೂ ಮುನ್ನ 310 ರೂ ದರವಿದ್ದ 9 ವ್ಯಾಟ್ ಬಲ್ಬ್ಗಳ ಬೆಲೆ ಈಗ 70 ರೂ. 20 ವ್ಯಾಟ್ನ ಎಲ್ಇಡಿ ಟ್ಯೂಬ್ಲೈಟ್ ಬೆಲೆ 220 ರೂ ಬೆಲೆ ಮಾತ್ರ. ಮತ್ತು 5-ಸ್ಟಾರ್ ಗುಣಮಟ್ಟದ ಫ್ಯಾನ್ಗಳು ಕೇವಲ 1,200 ರೂ.ಗೆ ಲಭ್ಯವಾಗುತ್ತಿವೆ.

ದರಗಳ ಪರಿಷ್ಕರಣೆ ಬಳಿಕ ಉಜಾಲಾ ಸಾಧನಗಳಿಗೆ ಇಇಎಸ್ಎಲ್ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಗ್ರಾಹಕರು ತೆರಬೇಕಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಉಜಾಲಾ ಯೋಜನೆಯಡಿ ಒಟ್ಟು 7.5 ಕೋಟಿ ಗೃಹೋಪಯೋಗಿ ವಸ್ತುಗಳು ಒಳಗೊಳ್ಳುತ್ತಿವೆ. 2018ರ ಅಕ್ಟೋಬರ್ 18ರ ವೇಳೆಗೆ 31,03,69,218 ಎಲ್ಇಡಿಗಳನ್ನು ವಿತರಿಸಲಾಗಿದೆ.
2015ರ ಜನವರಿ 5ರಂದು ನರೇಂದ್ರ ಮೋದಿ ಅವರ ಸರ್ಕಾರ 77 ಕೋಟಿ ಅದಕ್ಷ ಬಲ್ಬ್ಗಳನ್ನು ಇಂಧನ ದಕ್ಷತಯ ಎಲ್ಇಡಿ ಬಲ್ಬ್ಗಳ ಮೂಲಕ ಬದಲಿಸುವ ಗುರಿಯೊಂದಿಗೆ ಉಜಾಲಾ ಯೋಜನೆಯನ್ನು ಆರಂಭಿಸಿತು.

ಎಲ್ಇಡಿ ವಿತರಣೆಯು ವಾರ್ಷಿಕ 3,244 ಕೋಟಿಗೂ ಅಧಿಕ ಕಿಲೋ ವ್ಯಾಟ್ ಇಂಧನವನ್ನು ಉಳಿಸಿದೆ ಮತ್ತು 6,525 ಮೆಗಾ ವ್ಯಾಟ್ ಬೇಡಿಕೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಮುಖ್ಯವಾಗಿ ಗ್ರಾಹಕರ ವಿದ್ಯುತ್ ಶುಲ್ಕ ಪಾವತಿಯಲ್ಲಿ ವೆಚ್ಚದ ಇಳಿಕೆ ಭಾರಿ ಬದಲಾವಣೆ ತಂದಿದೆ. ಪ್ರತಿ ವರ್ಷ ಅಂದಾಜು 12,963 ಕೋಟಿ ರೂಪಾಯಿ ಹಣ ಉಳಿತಾಯದ ಜತೆಗೆ ವಾರ್ಷಿಕ 2.61 ಕೋಟಿ ಟನ್ ಸಿಓ2 ಉತ್ಪಾದನೆಯನ್ನು ತಗ್ಗಿಸುವಲ್ಲಿ ನೆರವಾಗಿದೆ.
ಸರಕು ಮತ್ತು ಸೇವೆಗಳ ಪೂರೈಕೆಯ ವೆಚ್ಚವನ್ನು ಜಿಎಸ್ಟಿ ಪರೋಕ್ಷವಾಗಿ ಕಡಿಮೆಗೊಳಿಸಿದೆ. ಉತ್ಪಾದನಾ ಪ್ರಕ್ರಿಯೆಯ ಪ್ರತಿ ಹಂತಗಳನ್ನೂ ಜಿಎಸ್ಟಿ ಸುಗಮಗೊಳಿಸಿದೆ. ಉತ್ಪಾದನೆಯ ವಿವಿಧ ಹಂತಗಳನ್ನು ದಾಟಿದ ಬಳಿಕ ಅಂಇಮ ಗ್ರಾಹಕನಿಗೂ ಸುಲಭವಾಗಿ ಕೈಗೆ ದಕ್ಕುತ್ತದೆ.
ಸರಕು ಮತ್ತು ಸೇವೆಗಳನ್ನು ಐದು ತೆರಿಗೆ ಹಂತಗಳನ್ನಾಗಿ ವಿಂಗಡಿಸಲಾಗಿದೆ - 0%, 5%, 12%, 18% ಮತ್ತು 28%. ಆದರೆ, ಪೆಟ್ರೋಲಿಯಂ ಉತ್ಪನ್ನಗಳು, ಆಲ್ಕೋಹಾಲ್ ಮದ್ಯಗಳು, ವಿದ್ಯುತ್ ಜಿಎಸ್ಟಿ ಅಡಿಯಲ್ಲಿ ಬಂದಿಲ್ಲ. ಅದರ ಬದಲು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತಮ್ಮ ತೆರಿಗೆ ನೀತಿಗೆ ಅನುಗುಣವಾಗಿ ತೆರಿಗೆ ವಿಧಿಸುತ್ತಿವೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications