ಕೇಂದ್ರದ ಕೊವಿಡ್ ನಿರ್ವಹಣೆ ಭಾರತದ ಜಿಡಿಪಿಯನ್ನು ಪ್ರಪಾತಕ್ಕೆ ತಳ್ಳಿದೆ :ರಾಹುಲ್
ನವದೆಹಲಿ, ಸೆಪ್ಟೆಂಬರ್ 12: ಕೇಂದ್ರ ಸರ್ಕಾರದ ಕೊವಿಡ್ ನಿರ್ವಹಣೆಯ ವಿರುದ್ಧದ ಹೋರಾಟವು ಭಾರತದ ಜಿಡಿಪಿಯನ್ನ ಪ್ರಪಾತಕ್ಕೆ ನೂಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕೊರೊನಾ ವೈರಸ್ ನಮಗೆ ದೊಡ್ಡ ಸವಾಲಾಗಿದೆ. ಆದರೆ, ಅದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಯೋಜಿತ ಹೋರಾಟ ನಡೆಯುತ್ತಿದೆ ಮತ್ತು ನಮ್ಮ ಪ್ರಯತ್ನಗಳನ್ನು ಇಡೀ ಜಗತ್ತು ಗುರುತಿಸುತ್ತಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
Modi Govt’s ‘well-planned fight’ against Covid has put India in an abyss of:
— Rahul Gandhi (@RahulGandhi) September 12, 2020
1. Historic GDP reduction of 24%
2. 12 crore jobs lost
3. 15.5 lac crores additional stressed loans
4. Globally highest daily Covid cases & deaths.
But for GOI & media ‘sab changa si’.
ಕೊವಿಡ್ ವಿರುದ್ಧ ಮೋದಿ ಸರ್ಕಾರದ 'ಯೋಜಿತ ಹೋರಾಟ'ವು ಭಾರತವನ್ನು ಪ್ರಪಾತಕ್ಕೆ ತಳ್ಳಿದೆ ಎಂದಿದ್ದಾರೆ.
1. ಶೇ.24ರಷ್ಟು ಐತಿಹಾಸಿಕ ಜಿಡಿಪಿ ಕುಸಿತ
2. 12 ಕೋಟಿ ಉದ್ಯೋಗಗಳ ನಷ್ಟ
3. 15.5 ಲಕ್ಷ ಕೋಟಿ ರೂ. ಹೆಚ್ಚುವರಿ ಒತ್ತಡದ ಸಾಲ
4. ಜಾಗತಿಕವಾಗಿ ಅತಿ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳು ಮತ್ತು ಸಾವುಗಳು
ಆದರೆ, ಭಾರತ ಸರ್ಕಾರ ಮತ್ತು ಮಾಧ್ಯಮಗಳಿಗೆ ಮಾತ್ರ ಎಲ್ಲವೂ ಚೆನ್ನಾಗಿದೆ' ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ. ಶೇ.24 ರಷ್ಟು ಜಿಡಿಪಿ ಕಡಿಮೆಯಾಗಿದೆ. 12 ಕೋಟಿ ಮಂದಿಯ ಉದ್ಯೋಗ ಹೋಗಿದೆ. 15.5 ಲಕ್ಷ ಹೆಚ್ಚುವರಿ ಒತ್ತಡದ ಸಾಲ ಹೊಂದಿದ್ದಾರೆ.

ಭಾರತದಲ್ಲಿ ಹೊಸದಾಗಿ 97,570 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನ 1201 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟು 46,59,985 ಕೊರೊನಾ ಸೋಂಕಿತರಿದ್ದಾರೆ.
Recommended Video
9,58,316 ಸಕ್ರಿಯ ಪ್ರಕರಣಗಳಿವೆ.36,24,197 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 77,472 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications