ಚಿನ್ನ ಕಳ್ಳ ಸಾಗಣೆಯ ಹೊಸ ಮಾರ್ಗಗಳು ಯಾವವು!
ಬೆಂಗಳೂರು, ಮೇ 27: ಚಿನ್ನ ಅಕ್ರಮ ಸಾಗಾಟ ಇಂದು ನಿನ್ನೆಯ ಕತೆಯಲ್ಲ. ಕಾಲಿಗೆ ಹಾಕುವ ಶೂನಲ್ಲಿ, ಬರೆಯುವ ಪೆನ್ ನಲ್ಲಿ ಅಷ್ಟೇ ಏಕೆ ಬಾಯಿಂದ ನುಂಗಿ ಹೊಟ್ಟೆಯೊಳಗೆ ಇಟ್ಟುಕೊಂಡು ಚಿನ್ನ ಸಾಗಾಟಕ್ಕೆ ಯತ್ನಿಸಿ ಬಂಧಿತರಾದವರ ಮತ್ತು ಆಗುತ್ತಿರುವವರ ಸುದ್ದಿ ಕೇಳಿದ್ದೇವೆ ಹಾಗೂ ನೋಡಿದ್ದೇವೆ.
ಪೊಲೀಸರು ಹಿಡಿಯುತ್ತಾರೆ ಎಂದು ಮನಗಂಡಿರುವ ಕಳ್ಳ ಸಾಗಣೆದಾರರು ಪ್ರತಿ ದಿನ ಹೊಸ ಹೊಸ ತಂತ್ರಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆ ಟಾರ್ಚ್ ನಲ್ಲಿ ಚಿನ್ನ ಸಾಗಾಟ.[ಮೈಸೂರು ಅರಮನೆ ಚಿನ್ನದ ಲೇಪನದಲ್ಲಿ ಅಕ್ರಮ]

ಬ್ಯಾಟರಿಯಲ್ಲಿ ಚಿನ್ನ ಸಾಗಾಟದ ಕತೆಯೇ ವಿಚಿತ್ರ ಮತ್ತು ಅಷ್ಟೇ ಕುತೂಹಲಕಾರಿ. ಭಾರತಕ್ಕೆ ಆಗಮಿಸಿದ ಕೋರಿಯರ್ ಒಂದನ್ನು ತೆರೆದು ನೋಡಿದಾಗ ವಿಚಕ್ಷಣಾ ಅಧಿಕಾರಿಗಳು ದಂಗು ಬಡಿದಿದ್ದರು. ಟಾರ್ಚ್ ಒಳಗೆ ಬಳಸಿದ್ದ ಎಲ್ಲ ಬ್ಯಾಟರಿಗಳು ಚಿನ್ನದಿಂದ ಮಾಡಿದ್ದವಾಗಿದ್ದವು.
ದೆಹಲಿಯ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಮಾಡಿದಾಗ ಇಂಥ ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಿತು. ನಂತರ ದೇಶದ ಅನೇಕ ಕಡೆ ಈ ಬಗೆಯ ಸಾಗಣೆ ಪ್ರಯತ್ನಗಳು ಪೊಲೀಸರ ತಲೆಕೆಡಿಸಿದ್ದವು. ಕಳೆದ ಒಂದು ವರ್ಷದ ಅವಧಿಯಲ್ಲಿ 3 ಸಾವಿರ ಕೆಜಿ ಚಿನ್ನವನ್ನು ಈ ಬಗೆಯಲ್ಲೇ ವಶಪಡಿಸಿಕೊಳ್ಳಲಾಗಿದೆ.[ಹಳದಿ ಲೋಹದ ಮೇಲಿನ ಮೋಹ ಶೇ 15ರಷ್ಟು ಏರಿಕೆ!]
ಕೋರಿಯರ್ ನಲ್ಲಿ ಚಿನ್ನ
ಮೊದಲಿನಂತೆ ಈಗ ಹಡಗಿನ ಮೂಲಕ ಅಕ್ರಮ ಚಿನ್ನ ದೇಶದ ಒಳಗೆ ಬರುವುದಿಲ್ಲ. ಕೋರಿಯರ್ ಮೂಲಕವೇ ಚಿನ್ನ ಸಾಗಿಸುವ ಕಾರ್ಯವನ್ನು ಕಳ್ಳ ಸಾಗಣೆದಾರರು ಬಹಳ ನಿಖರವಾಗಿ ಮಾಡುತ್ತಿದ್ದಾರೆ. ಚಿನ್ನದ ಸಿಡಿಗಳು, ಚಿನ್ನದ ರೆಡಿಯೋ, ಚಿನ್ನದ ಬ್ಲೇಡ್ ಸಹ ದುಬೈನಿಂದ ಚೆನ್ನೈಗೆ ಬಂದಿಳಿದಿತ್ತು.
ಒಂದೆ ಬಗೆಯ ಪ್ಯಾಕ್ ಗಳು ನಿರಂತರವಾಗಿ ಕೋರಿಯರ್ ಮೂಲಕ ಬರುತ್ತಿರುವುದನ್ನು ಮನಗಂಡ ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದಾಗ ಕಳ್ಳ ಸಾಗಣೆ ಸಂಗತಿ ಬಯಲಿಗೆ ಬಂದಿದೆ. [ವಿಮಾನದಲ್ಲೇ 9 ಕೆಜಿ ಚಿನ್ನ ಬಿಟ್ಟು ಹೋದ]
ಹೊಸ ಹೊಸ ಮಾರ್ಗ
ನೇಪಾಳದ ಮೂಲಕ ಹೆಚ್ಚಿನ ಪ್ರಮಾಣದ ಅಕ್ರಮ ಚಿನ್ನ ದೇಶದ ಒಳಕ್ಕೆ ಪ್ರವೇಶ ಮಾಡುತ್ತಿತ್ತು. ಆದರೆ ಭೂಕಂಪನದಿಂದ ನೇಪಾಳ ತತ್ತರಿಸಿದ ಮೇಲೆ ಕಳ್ಳ ಸಾಗಣೆದಾರರು ಹೊಸ ಮಾರ್ಗ ಕಂಡುಕೊಂಡರು.
ಯಾವಾಗ ಭಾರತ ಸರ್ಕಾರ ಚಿನ್ನ ಆಮದು ಮೇಲಿನ ಸುಂಕವನ್ನು ಹೆಚ್ಚು ಮಾಡಿತೋ ಇದೇ ನಮಗೆ ಹೆಚ್ಚು ಲಾಭ ಮಾಡಿಕೊಳ್ಳಲು ಅವಕಾಶ ಎಂದುಕೊಂಡ ಕಳ್ಳ ಸಾಗಣೆದಾರರು ಹೊಸ ಹೊಸ ಮಾರ್ಗ ಆವಿಷ್ಕಾರ ಮಾಡತೊಡಗಿದರು. ದುಬೈ, ಚೀನಾ ಮಾರುಕಟ್ಟೆಯ ಮೇಲೂ ಲಗ್ಗೆ ಇಟ್ಟರು.
ಶ್ರೀಲಂಕಾ ಮಾರ್ಗವಾಗಿ ತಮಿಳುನಾಡಿಗೆ, ಬಾಂಗ್ಲಾದೇಶದ ಮಾರ್ಗವಾಗಿ ಪಶ್ಚಿಮ ಬಂಗಾಳಕ್ಕೆ, ಗುಜರಾತಿನ ಕಾಂಡ್ಲಾ ಬಂದರಿಗೆ ಚಿನ್ನ ಅಕ್ರಮವಾಗಿ ತಲುಪಿಸುವ ಕಾರ್ಯ ಆರಂಭವಾಯಿತು.
ತೀವ್ರ ಬೆಳವಣಿಗೆ
ಚಿನ್ನ ಅಕ್ರಮ ಸಾಗಾಟ ತೀವ್ರ ಏರಿಕೆ ಕಂಡಿದೆ. ಒಟ್ಟು 1200 ಕೋಟಿ ರು. ಬೆಲೆಬಾಳುವ ಚಿನ್ನವನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಡಿಆರ್ ಐ ನ ಹಿರಿಯ ಅಧಿಕಾರಿಯೊಬ್ಬರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
2011-12 ರ ಅವಧಿಯಲ್ಲಿ ಕೇವಲ 70-80 ಕೋಟಿ ಮೌಲ್ಯದ ಚಿನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಯಾವಾಗ ಆಮದು ಸುಂಕ ಹೆಚ್ಚು ಮಾಡಲಾಯಿತೋ ಅಲ್ಲಿಂದಲೇ ಅಕ್ರಮ ಸಾಗಾಟ ತೀವ್ರ ಏರಿಕೆ ಕಂಡಿತು. (ಒನ್ಇಂಡಿಯಾ ನ್ಯೂಸ್)
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications