'ಬಿಕಿನಿ' ಬೇಡವೆಂದ ಸಚಿವನಿಗೆ 'ಮಿನಿ ಸ್ಕರ್ಟ್' ಗಿಫ್ಟ್
ಪಣಜಿ, ಜು.2:ಹುಡುಗಿಯರು ತುಂಡುಡುಗೆ ಧರಿಸಿ ಪಬ್ಗಳಿಗೆ ಹೋಗುವುದನ್ನು ಖಂಡಿಸಿ ಗೋವಾದಲ್ಲಿ 'ಬಿಕಿನಿ ಸಂಸ್ಕೃತಿ' ಮಟ್ಟ ಹಾಕುವ ಬಗ್ಗೆ ಮಾತನಾಡಿದ್ದ ಸಚಿವ ಸುಧಿನ್ ಧಾವಳೀಕರ್ ಅವರಿಗೆ ಕಾಂಗ್ರೆಸ್ಸಿಗರು ಮಿನಿ ಸ್ಕರ್ಟ್ ಗಿಫ್ಟ್ ಆಗಿ ಕಳಿಸಿದ್ದಾರೆ.
ಗೋವಾದ ಬಿಜೆಪಿ ಸರ್ಕಾರದ ಲೋಕೋಪಯೋಗಿ ಸಚಿವ ಸುದಿನ್ ಧಾವಳೀಕರ್ ದಿನದಿಂದ ದಿನಕ್ಕೆ ನೀಡುತ್ತಿರುವ ಹೇಳಿಕೆಗಳು ವಿವಾದ ಸೃಷ್ಟಿಸುತ್ತಲೇ ಇವೆ. ಗೋವಾ ಸಮುದ್ರ ತೀರದಲ್ಲಿ ಬಿಕಿನಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದರು. ನಂತರ ಹುಡುಗಿಯರು ತುಂಡುಡುಗೆ ತೊಟ್ಟು ಪಬ್ಗ ಹೋಗುವುದು ಗೋವಾ ಸಂಸ್ಕೃತಿಗೆ ವಿರುದ್ಧ. ಅದೇ ರೀತಿ ಬಿಕಿನಿ ತೊಟ್ಟು ಬೀಚ್ಗೆ ಹೋಗುವುದೂ ತಪ್ಪು. ಸ್ವಯಂರಕ್ಷಣೆ ದೃಷ್ಟಿಯಿಂದ ಬಿಕಿನಿ ತೊಡುವುದನ್ನು ನಿರ್ಬಂಧಿಸಬೇಕು ಎಂದು ಧಾವಳೀಕರ್ ಹೇಳಿದ್ದರು.
ಧಾವಳೀಕರ್ ಅವರಿಗೆ ಗೋವಾ ಕಾಂಗ್ರೆಸ್ಸಿಗರು ಪಿಂಕ್ ಮಿನಿ ಸ್ಕರ್ಟ್ ಕಳಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಪಿಂಕ್ ಚಡ್ಡಿ ಚಳವಳಿಗೆ ಬದಲಾಗಿ ಈಗ ಮುತಾಲಿಕ್ ಬೆಂಬಲಿತ ಧಾವಳೀಕರ್ ಅವರಿಗೆ ಪಿಂಕ್ ಮಿನಿಸ್ಕರ್ಟ್ ಉಡುಗೊರೆ ಸಿಕ್ಕಿದೆ.

ನಾವು ಗೋವಾದಲ್ಲಿ ನೈತಿಕ ಪೊಲೀಸರಿಗೆ ಅವಕಾಶ ಕೊಡುವುದಿಲ್ಲ. 18 ವರ್ಷ ದಾಟಿದವರು ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂದು ನಿರ್ಧರಿಸುವ ವಿವೇಚನೆ ಹೊಂದಿರುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ದುರ್ಗಾದಾಸ್ ಕಾಮತ್ ಹೇಳಿದ್ದಾರೆ.
'ಮುತಾಲಿಕ್ಗೆ ಪಿಂಕ್ ಚಡ್ಡಿ ಕಳಿಸಿದಂತೆ ಧಾವಳೀಕರ್ಗೆ ಗುಲಾಬಿ ಬಣ್ಣದ ಸ್ಕೇಟರ್ ಜರ್ಸಿ ಸ್ಕರ್ಟ್ ಉಡುಗೊರೆ ಕಳುಹಿಸಿದ್ದೇವೆ. ಕೊರಿಯರ್ನಲ್ಲಿ ಅವರ ಪೊರ್ವೊರಿಮ್ ಕಚೇರಿಗೆ ಈ ಸ್ಕರ್ಟ್ ತಲುಪುತ್ತದೆ' ಎಂದು ದುರ್ಗಾದಾಸ್ ಕಾಮತ್ ಹೇಳಿದರು.
ಮುತಾಲಿಕ್ ಗೆ ಬೆಂಬಲ : ಗೋವಾದಲ್ಲಿ ಇತ್ತೀಚೆಗೆ ಪಬ್ ಸಂಸ್ಕೃತಿ ವಿರುದ್ಧ ಸಮರ ಸಾರಿರುವ ಕರ್ನಾಟಕದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನಿಲುವನ್ನು ಧಾವಳೀಕರ್ ಸ್ವಾಗತಿಸಿದ್ದಾರೆ. ಗೋವಾದಲ್ಲಿ ಶ್ರೀರಾಮಸೇನೆ ತನ್ನ ಕಚೇರಿ ತೆರಯಲು ಅವಕಾಶ ನೀಡಲಾಗುತ್ತಿಲ್ಲ ಎಂಬ ಸುದ್ದಿ ಸುಳ್ಳು. ಇತರೆ ಎನ್ ಜಿಒ ಗಳಂತೆ ಶ್ರೀರಾಮಸೇನೆ ತನ್ನ ಕಚೇರಿ ಇಲ್ಲಿ ಆರಂಭಿಸಬಹುದಾಗಿದೆ ಎಂದು ಧಾವಳೀಕರ್ ಹೇಳಿದ್ದಾರೆ.
ಇದಕ್ಕೂ ಮುನ್ನ ಪಿಟಿಐ ಜತೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, 'ಧಾವಳೀಕರ್ ಹೇಳಿಕೆಯನ್ನು ನಾನು ಸ್ವಾಗತಿಸುವೆ. ಅವರ ಹೇಳಿಕೆಯು ಪಬ್ ಸಂಸ್ಕೃತಿ ವಿರೋಧಿಸುವ ನನ್ನ ನಿಲುವನ್ನು ಸಮರ್ಥಿಸುತ್ತದೆ. ಗೋವಾಕ್ಕೆ ಮುಂದಿನ ಸಲ ಹೋದಾಗ ಸಿಎಂ ಮನೋಹರ ಪರ್ರಿಕರ್ ಮತ್ತು ಧಾವಳೀಕರ್ರನ್ನು ಭೇಟಿಯಾಗುವೆ' ಎಂದಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications