'ಬಿಕಿನಿ' ಬೇಡವೆಂದ ಸಚಿವನಿಗೆ 'ಮಿನಿ ಸ್ಕರ್ಟ್' ಗಿಫ್ಟ್
ಪಣಜಿ, ಜು.2:ಹುಡುಗಿಯರು ತುಂಡುಡುಗೆ ಧರಿಸಿ ಪಬ್ಗಳಿಗೆ ಹೋಗುವುದನ್ನು ಖಂಡಿಸಿ ಗೋವಾದಲ್ಲಿ 'ಬಿಕಿನಿ ಸಂಸ್ಕೃತಿ' ಮಟ್ಟ ಹಾಕುವ ಬಗ್ಗೆ ಮಾತನಾಡಿದ್ದ ಸಚಿವ ಸುಧಿನ್ ಧಾವಳೀಕರ್ ಅವರಿಗೆ ಕಾಂಗ್ರೆಸ್ಸಿಗರು ಮಿನಿ ಸ್ಕರ್ಟ್ ಗಿಫ್ಟ್ ಆಗಿ ಕಳಿಸಿದ್ದಾರೆ.
ಗೋವಾದ ಬಿಜೆಪಿ ಸರ್ಕಾರದ ಲೋಕೋಪಯೋಗಿ ಸಚಿವ ಸುದಿನ್ ಧಾವಳೀಕರ್ ದಿನದಿಂದ ದಿನಕ್ಕೆ ನೀಡುತ್ತಿರುವ ಹೇಳಿಕೆಗಳು ವಿವಾದ ಸೃಷ್ಟಿಸುತ್ತಲೇ ಇವೆ. ಗೋವಾ ಸಮುದ್ರ ತೀರದಲ್ಲಿ ಬಿಕಿನಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದರು. ನಂತರ ಹುಡುಗಿಯರು ತುಂಡುಡುಗೆ ತೊಟ್ಟು ಪಬ್ಗ ಹೋಗುವುದು ಗೋವಾ ಸಂಸ್ಕೃತಿಗೆ ವಿರುದ್ಧ. ಅದೇ ರೀತಿ ಬಿಕಿನಿ ತೊಟ್ಟು ಬೀಚ್ಗೆ ಹೋಗುವುದೂ ತಪ್ಪು. ಸ್ವಯಂರಕ್ಷಣೆ ದೃಷ್ಟಿಯಿಂದ ಬಿಕಿನಿ ತೊಡುವುದನ್ನು ನಿರ್ಬಂಧಿಸಬೇಕು ಎಂದು ಧಾವಳೀಕರ್ ಹೇಳಿದ್ದರು.
ಧಾವಳೀಕರ್ ಅವರಿಗೆ ಗೋವಾ ಕಾಂಗ್ರೆಸ್ಸಿಗರು ಪಿಂಕ್ ಮಿನಿ ಸ್ಕರ್ಟ್ ಕಳಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಪಿಂಕ್ ಚಡ್ಡಿ ಚಳವಳಿಗೆ ಬದಲಾಗಿ ಈಗ ಮುತಾಲಿಕ್ ಬೆಂಬಲಿತ ಧಾವಳೀಕರ್ ಅವರಿಗೆ ಪಿಂಕ್ ಮಿನಿಸ್ಕರ್ಟ್ ಉಡುಗೊರೆ ಸಿಕ್ಕಿದೆ.

ನಾವು ಗೋವಾದಲ್ಲಿ ನೈತಿಕ ಪೊಲೀಸರಿಗೆ ಅವಕಾಶ ಕೊಡುವುದಿಲ್ಲ. 18 ವರ್ಷ ದಾಟಿದವರು ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂದು ನಿರ್ಧರಿಸುವ ವಿವೇಚನೆ ಹೊಂದಿರುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ದುರ್ಗಾದಾಸ್ ಕಾಮತ್ ಹೇಳಿದ್ದಾರೆ.
'ಮುತಾಲಿಕ್ಗೆ ಪಿಂಕ್ ಚಡ್ಡಿ ಕಳಿಸಿದಂತೆ ಧಾವಳೀಕರ್ಗೆ ಗುಲಾಬಿ ಬಣ್ಣದ ಸ್ಕೇಟರ್ ಜರ್ಸಿ ಸ್ಕರ್ಟ್ ಉಡುಗೊರೆ ಕಳುಹಿಸಿದ್ದೇವೆ. ಕೊರಿಯರ್ನಲ್ಲಿ ಅವರ ಪೊರ್ವೊರಿಮ್ ಕಚೇರಿಗೆ ಈ ಸ್ಕರ್ಟ್ ತಲುಪುತ್ತದೆ' ಎಂದು ದುರ್ಗಾದಾಸ್ ಕಾಮತ್ ಹೇಳಿದರು.
ಮುತಾಲಿಕ್ ಗೆ ಬೆಂಬಲ : ಗೋವಾದಲ್ಲಿ ಇತ್ತೀಚೆಗೆ ಪಬ್ ಸಂಸ್ಕೃತಿ ವಿರುದ್ಧ ಸಮರ ಸಾರಿರುವ ಕರ್ನಾಟಕದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನಿಲುವನ್ನು ಧಾವಳೀಕರ್ ಸ್ವಾಗತಿಸಿದ್ದಾರೆ. ಗೋವಾದಲ್ಲಿ ಶ್ರೀರಾಮಸೇನೆ ತನ್ನ ಕಚೇರಿ ತೆರಯಲು ಅವಕಾಶ ನೀಡಲಾಗುತ್ತಿಲ್ಲ ಎಂಬ ಸುದ್ದಿ ಸುಳ್ಳು. ಇತರೆ ಎನ್ ಜಿಒ ಗಳಂತೆ ಶ್ರೀರಾಮಸೇನೆ ತನ್ನ ಕಚೇರಿ ಇಲ್ಲಿ ಆರಂಭಿಸಬಹುದಾಗಿದೆ ಎಂದು ಧಾವಳೀಕರ್ ಹೇಳಿದ್ದಾರೆ.
ಇದಕ್ಕೂ ಮುನ್ನ ಪಿಟಿಐ ಜತೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, 'ಧಾವಳೀಕರ್ ಹೇಳಿಕೆಯನ್ನು ನಾನು ಸ್ವಾಗತಿಸುವೆ. ಅವರ ಹೇಳಿಕೆಯು ಪಬ್ ಸಂಸ್ಕೃತಿ ವಿರೋಧಿಸುವ ನನ್ನ ನಿಲುವನ್ನು ಸಮರ್ಥಿಸುತ್ತದೆ. ಗೋವಾಕ್ಕೆ ಮುಂದಿನ ಸಲ ಹೋದಾಗ ಸಿಎಂ ಮನೋಹರ ಪರ್ರಿಕರ್ ಮತ್ತು ಧಾವಳೀಕರ್ರನ್ನು ಭೇಟಿಯಾಗುವೆ' ಎಂದಿದ್ದಾರೆ.
-
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Iran-US-Israel War: ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ಇಲ್ಲ: ಡೊನಾಲ್ಡ್ ಟ್ರಂಪ್ -
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ -
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ -
US-Iran ceasefire: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ. 20ರಷ್ಟು ದಾಖಲೆಯ ಕುಸಿತ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Iran Ceasefire: 2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಇರಾನ್; ಶಾಶ್ವತ ಕದನ ವಿರಾಮದ ಬಗ್ಗೆ ಹೇಳಿದ್ದೇನು












Click it and Unblock the Notifications