ಅಜಿತ್ ಪವಾರ್ ವಿಮಾನ ಅಪಘಾತಕ್ಕೆ ಸ್ಫೋಟಕ ಕಾರಣ ಪತ್ತೆ, ಇದೇನಾ ಅದು? Ajit Pawar
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ವಿಮಾನ ಅಪಘಾತವಾಗಿ, ದುರಂತ ಸಾವು ಕಂಡ ನೋವು ಈಗಲೂ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳನ್ನು ಕಾಡುತ್ತಿದೆ. ಅಜಿತ್ ಪವಾರ್ ಅವರು ಸೇರಿ ಇತರ ನಾಲ್ವರು ವಿಮಾನದಲ್ಲಿ ಪ್ರಯಾಣ ಮಾಡುವಾಗ ಈ ದುರಂತ ಸಂಭವಿಸಿತ್ತು. ಆದರೆ ಅದೊಂದು ಕ್ರಮ ಕೈಗೊಂಡಿದ್ದರೆ ಭಾರಿ ದೊಡ್ಡ ಗಂಡಾಂತರ ತಪ್ಪಿಸಬಹುದಿತ್ತು ಎಂದು ಇದೀಗ ಚರ್ಚೆ ಶುರುವಾಗಿದೆ. ಹಾಗಾದರೆ ಅಜಿತ್ ಪವಾರ್ ವಿಮಾನ ಅಪಘಾತಕ್ಕೆ ಸ್ಫೋಟಕ ಇದೇ ವಿಚಾರ ಕಾರಣವಾಗಿತ್ತಾ? ಬನ್ನಿ ತಿಳಿಯೋಣ.
ಮಹಾರಾಷ್ಟ್ರ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಪ್ರಚಾರ ಮಾಡಲು ಎನ್ಸಿಪಿ ನಾಯಕ & ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ರು. ಅಜಿತ್ ಪವಾರ್ ಮಂಗಳವಾರ ಮುಂಬೈನಲ್ಲಿ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಿ ಬಳಿಕ ಪುಣೆ ಕಡೆಗೆ ಪ್ರಯಾಣ ಬೆಳೆಸಿದ್ದರು. ಆದರೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಅಜಿತ್ ಪವಾರ್ ಅವರು ಇದ್ದ ವಿಮಾನ ರನ್ವೇ ಹಾದಿಯಲ್ಲೇ ಸ್ಫೋಟಗೊಂಡಿತ್ತು. ಈ ದುರಂತದ ನಂತರ ತನಿಖೆ ಕೂಡ ಚುರುಕುಗೊಂಡಿದೆ, ಆದರೆ ಅದೊಂದೇ ಒಂದು ಎಡವಟ್ಟು ಈ ದುರಂತ ನಡೆಯಲು ಕಾರಣ ಎಂಬ ಆರೋಪ ಮಾಡಲಾಗುತ್ತಿದೆ.

'ಗಗನ್' ಇದ್ದಿದ್ದರೆ ವಿಮಾನ ಉಳಿಯುತ್ತಿತ್ತು?
ಅಂದಹಾಗೆ ಭಾರೀ ಮಳೆ, ಮಂಜು ಕವಿದ ಸಮಯದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಭಾರಿ ದೊಡ್ಡ ಸಹಾಯ ಮಾಡುವುದೇ 'ಗಗನ್'. ಹಾಗಾದರೆ ಏನಿದು ಗಗನ್ ಎಂದು ನೋಡುವುದಾದರೆ, ಉಪಗ್ರಹ ಆಧಾರಿತ ತಂತ್ರಾಂಶ ವ್ಯವಸ್ಥೆಯನ್ನೇ 'ಗಗನ್' ಎಂದು ಕರೆಯಲಾಗುತ್ತದೆ. ಆದರೆ ಈ ವ್ಯವಸ್ಥೆ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ಲಿಯರ್ಜೆಟ್ ವಿಮಾನದಲ್ಲಿ ಇರಲೇ ಇಲ್ಲ ಎನ್ನಲಾಗಿದೆ. ಅಕಸ್ಮಾತ್ ಗಗನ್ ತಂತ್ರಾಂಶ ಇದ್ದಿದ್ದರೆ ಆಗ ಅಜಿತ್ ಪವಾರ್ ಅವರ ಜೀವ ಉಳಿಯಬಹುದಿತ್ತು ಅಂತಿದ್ದಾರೆ ತಜ್ಞರು.
ವಿಮಾನದಲ್ಲಿ ಗಗನ್ ಯಾಕೆ ಇರಲಿಲ್ಲ?
ಇಸ್ರೋ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ ಜಂಟಿಯಾಗಿ ಅಭಿವೃದ್ಧಿ ಮಾಡಿರುವ ತಂತ್ರಾಂಶ ವ್ಯವಸ್ಥೆಯೇ ಗಗನ್. ಭಾರತದ ವಾಯುಪ್ರದೇಶದ ಮೇಲೆ ಹಾರುವ ಎಲ್ಲ ವಿಮಾನಗಳಿಗೂ ಜಿಪಿಎಸ್ ನಿಖರತೆ ಮತ್ತು ವಿಶ್ವಾಸಾರ್ಹತೆ ಹೆಚ್ಚು ಮಾಡುತ್ತದೆ ಈ ತಂತ್ರಾಂಶ. ಉಪಗ್ರಹ ಆಧರಿಸಿ ನಿಖರವಾದ ಮಾಹಿತಿ ಒದಗಿಸುತ್ತದೆ, ಹೀಗಿದ್ದರೂ 'ಗಗನ್' ತಂತ್ರಾಂಶ ಏಕೆ ಇರಲಿಲ್ಲ? ಎಂಬ ಚರ್ಚೆ ಇದೀಗ ಶುರುವಾಗಿದೆ. ಭಾರತದಲ್ಲಿ 2021 ಜೂನ್ 30ಕ್ಕೆ ಗಗನ್ ತಂತ್ರಾಂಶ ವ್ಯವಸ್ಥೆ ಜಾರಿ ಮಾಡಲಾಗಿತ್ತು.
ಈ ದಿನಾಂಕದ ನಂತರ ನೋಂದಣಿ ಆಗಿರುವ ಎಲ್ಲ ವಿಮಾನಗಳಲ್ಲಿ ಗಗನ್ ತಂತ್ರಾಂಶ ವ್ಯವಸ್ಥೆಯು ಜಾರಿಯಲ್ಲಿದೆ. ಆದರೆ ಅಪಘಾತಕ್ಕೆ ಈಡಾಗಿರುವ ಅಜಿತ್ ಪವಾರ್ ಅವರ ವಿಮಾನ, ಇದಕ್ಕಿಂತ 28 ದಿನಗಳ ಹಿಂದೆ ಭಾರತದಲ್ಲಿ ನೋಂದಣಿ ಆಗಿತ್ತು. ಹೀಗಾಗಿ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ಖಾಸಗಿ ವಿಮಾನದಲ್ಲಿ 'ಗಗನ್' ತಂತ್ರಾಂಶ ಇರಲಿಲ್ಲ ಎನ್ನಲಾಗಿದೆ. ಅಕಸ್ಮಾತ್ ಈ ಗಗನ್ ತಂತ್ರಾಂಶ ಇದ್ದಿದ್ದರೆ ಅಜಿತ್ ಪವಾರ್ ಅವರು ಬದುಕುತ್ತಿದ್ದರಾ? ಅವರ ಜಿವ ಉಳಿಸಲು ಗಗನ್ ಸಹಾಯ ಮಾಡುತ್ತಿತ್ತಾ? ಎಂಬ ಚರ್ಚೆ ಶುರುವಾಗಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications