ನರೇಂದ್ರ ಮೋದಿಗೆ ‘ಗರಿಷ್ಠ ಅಹಂಕಾರ, ಕನಿಷ್ಠ ಅನುಭೂತಿ’: ಜೈರಾಮ್ ರಮೇಶ್ ಕಿಡಿ

ನವದೆಹಲಿ, ಮೇ 15: "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಎಂದು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಟೀಕಿಸಿದ್ದಾರೆ.

ನರೇಂದ್ರ ಮೋದಿ ಅವರು "ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ'ದ ಭರವಸೆ ನೀಡಿದ್ದರು. ವಾಸ್ತವವೆಂದರೆ ಗರಿಷ್ಠ ಅಹಂಕಾರಿ, ಕನಿಷ್ಠ ಅನುಭೂತಿಯುಳ್ಳವರು ಎಂದು ಮಾಜಿ ಸಚಿವ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಡದ ಹೊಸ ವಿಧಾನಸಭೆ ಸಂಕೀರ್ಣದ ಎಲ್ಲಾ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ಜೈರಾಮ್ ರಮೇಶ್, ಕೇಂದ್ರ ಸರ್ಕಾರ ಮಾನವ ಜೀವಕ್ಕೆ ಯಾವಾಗ ಆದ್ಯತೆ ನೀಡುತ್ತದೆ ಎಂದು ಪ್ರಧಾನಮಂತ್ರಿಯನ್ನು ಕೇಳಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Former Minister Jairam Ramesh Expressed Outrage On PM Narendra Modi

"ಆತ್ಮೀಯ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವದಲ್ಲಿ ಸ್ಪಂದಿಸುವ ಮತ್ತು ಜವಾಬ್ದಾರಿಯುತ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತದೆ. ಛತ್ತೀಸ್‌ಗಡ ಸರ್ಕಾರವು ತನ್ನ ಜನರ ಜೀವನಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಆದ್ಯತೆ ನೀಡುತ್ತಿದೆ, ಮತ್ತು ಕೋವಿಡ್-19ರ ವಿರುದ್ಧ ಹೋರಾಡುವ ತನ್ನ ಪ್ರಯತ್ನಗಳನ್ನು ದ್ವಿಗುಣಗೊಳಿಸಿದೆ. ಈ ಸೆಂಟ್ರಲ್ ವಿಸ್ಟಾ ನಿರ್ಮಿಸುವ ಹುಚ್ಚುತನವನ್ನು ನೀವು ಯಾವಾಗ ಕಲಿತಿರಿ ಮತ್ತು ಯಾವಾಗ ನಿಲ್ಲಿಸುತ್ತೀರಿ?" ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರವು ಎರಡನೇ ಅಲೆಯನ್ನು ನಿಭಾಯಿಸುವುದರ ಬಗ್ಗೆ ಕಾಂಗ್ರೆಸ್ ಬಹಳಷ್ಟು ಟೀಕಿಸಿದೆ. ಕೋವಿಡ್ ವಿರುದ್ಧದ ಅಕಾಲಿಕ ವಿಜಯದ ಘೋಷಣೆಯಿಂದಾಗಿ ಇಂದು ದುರಂತವಾಗಿದೆ ಎಂದು ಆರೋಪಿಸಿದರು.

ಇನ್ನು ಪ್ರತ್ಯೇಕ ಟ್ವೀಟ್‌ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಗಂಗಾ ನದಿಗೆ ಶವಗಳನ್ನು ಎಸೆಯುವ ಬಗ್ಗೆ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಕಿಡಿಕಾರಿದ್ದಾರೆ.

"ಗಂಗಾ ಮಾತೆ ತನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಹೇಳಿಕೊಳ್ಳುವವನು ತಾಯಿ ಗಂಗಾಳನ್ನು ಅಳುವಂತೆ ಮಾಡಿದ್ದಾನೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ, ಸುದ್ದಿ ವರದಿಯ ಚಿತ್ರವೊಂದನ್ನು ಹಾಕಿ, ನದಿ ಬಯಲು ಪ್ರದೇಶಗಳಲ್ಲಿ 2,000ಕ್ಕೂ ಹೆಚ್ಚು ಶವಗಳನ್ನು ಹೂಳಲಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+