ಕೆಲಸ ಕಳೆದುಕೊಂಡ ಸೇಡಿಗೆ ತನ್ನದೇ ಕಂಪನಿಯಲ್ಲಿ 21 ಲಕ್ಷ ದರೋಡೆ ಮಾಡಿದ ಮಾಜಿ ಉದ್ಯೋಗಿ: ಮಕ್ಕಳು ಆಡುವ ಗನ್ ವಶಕ್ಕೆ!
ಅಕಸ್ಮಾತ್ ಕೆಲಸ ಕಳೆದುಕೊಂಡರೆ ಒಬ್ಬ ಮಾಜಿ ಉದ್ಯೋಗಿ ಏನು ಮಾಡಬಹದು ಹೇಳಿ? ಹೆಚ್ಚು ಹೆಚ್ಚು ಅಂದ್ರೆ ಒಂದು ಕೇಸ್ ಹಾಕಬಹುದು. ಇದನ್ನೂ ಮೀರಿ ಕಂಪನಿಗೆ ಹೋಗಿ, ಗಲಾಟೆ ಮಾಡಬಹುದು. ಆದರೆ ಇಲ್ಲೊಬ್ಬ ಮಹಾಶಯ ತನ್ನನ್ನು ಕೆಲಸದಿಂದ ತೆಗೆದಿದ್ದಕ್ಕೆ ಏನು ಮಾಡಿದ್ದಾನೆ ಗೊತ್ತಾ? ಮಾಡಬಾರದ್ದನ್ನು ಮಾಡಿ ಮಾಜಿ ಉದ್ಯೋಗಿ ಇದೀಗ ಜೈಲು ಸೇರಿದ್ದೇಕೆ? ಸಖತ್ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ಮುಂದೆ ಓದಿ.
ಹೌದು, ತನನ್ನು ಕೆಲಸದಿಂದ ವಜಾ ಮಾಡಿದಕ್ಕೆ ರೊಚ್ಚಿಗೆದ್ದಿದ್ದ ಖಾಸಗಿ ಕಂಪನಿಯ ಒಬ್ಬ ಉದ್ಯೋಗಿ ಮಾಡಬಾರದ ಕೃತ್ಯ ಮಾಡಿದ್ದಾನೆ. ಫ್ಲಿಪ್ಕಾರ್ಟ್ ಅತೃಪ್ತ ಉದ್ಯೋಗಿ ಮಾಡಿದ ಕೃತ್ಯ ಈಗ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಹಿಂದಿನ ಕಂಪನಿ ಮೇಲೆ ಮುನಿಸಿಕೊಂಡಿದ್ದ ಮಾಜಿ ಉದ್ಯೋಗಿ ಒಬ್ಬ ಅದೇ ಕಂಪನಿಗೆ ನುಗ್ಗಿದ್ದಾನೆ. ಸಹಚರರ ಜೊತೆ ಸೇರಿ ದರೋಡೆ ಕೂಡ ಮಾಡಿದ್ದಾನಂತೆ. ಇಂತಹ ವಿಲಕ್ಷಣವಾದ & ವಿಚಿತ್ರವಾದ ಘಟನೆ ನಡೆದಿರುವುದು ಹರಿಯಾಣದ ಸೋನಿಪತ್ ಪ್ರದೇಶದಲ್ಲಿ.

21 ಲಕ್ಷ ರೂಪಾಯಿ ದರೋಡೆ!
ಅಂದಹಾಗೆ ಈ ಕೇಸ್ ಸಂಬಂಧ ಈಗ ಮೂವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಅಂದ್ರೆ ಈ ದರೋಡೆ ರೂವಾರಿಯಾದ ಮಾಜಿ ಉದ್ಯೋಗಿ ಸುಮಿತ್ ಎಂಬಾತ ಸೇರಿ ಆತನ ಇಬ್ಬರು ಸಹಚರರಾದ ಸಂದೀಪ್ & ಅನಿಲ್ ಪೈಕಿ ಇಬ್ಬರು ಅರೆಸ್ಟ್ ಆಗಿದ್ದಾರೆ. ಈ ಮೂವರು ಮಕ್ಕಳು ಆಡುವ ಗನ್ ಹಿಡಿದು ತಮ್ಮ ಹಿಂದಿನ ಕಂಪನಿಗೆ ನುಗ್ಗಿ ದರೋಡೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪಿ ಇಬ್ಬರ ಜೊತೆಗೆ ಕಳೆದ ತಿಂಗಳು ಫ್ಲಿಪ್ಕಾರ್ಟ್ನ ಸೋನಿಪತ್ ಕಚೇರಿಗೆ ನುಗ್ಗಿದ್ದ. ಟಾಯ್ ಗನ್ ಬಳಸಿ 21 ಲಕ್ಷ ರೂಪಾಯಿ ಮೌಲ್ಯದ ನಗದನ್ನ ದೋಚಿದ್ದ ಅಂತಾ ಆರೋಪ ಮಾಡಲಾಗಿದೆ. ಮೂವರ ಪೈಕಿ ಇನ್ನೂಬ್ಬ ಇದೀಗ ಎಸ್ಕೇಪ್ ಆಗಿದ್ದು, ಪೊಲೀಸ್ ಪಡೆ ಆತನಿಗೆ ಬಲೆ ಬೀಸಿದೆ.
ಕೆಲಸದಿಂದ ವಜಾ ಮಾಡಿದ್ದಕ್ಕೆ ರಿವೇಂಜ್?
ಇನ್ನು ಪ್ರಮುಖ ಆರೋಪಿಯನ್ನ ಸೆಪ್ಟೆಂಬರ್ನಲ್ಲಿ ಕೆಲಸದಿಂದ ವಜಾ ಮಾಡಿದ್ದರು ಅಂತಾ ಹೇಳಲಾಗಿದೆ. ಇದೇ ಕಾರಣಕ್ಕೆ ರೊಚ್ಚಿಗೆದ್ದಿದ್ದ ಈತ ತನ್ನ ಸಹಚರರ ಜೊತೆಗೆ ಸೇರಿ ಇಂಥ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಪೊಲೀಸರು ಹೇಳಿದಂತೆ ಆರೋಪಿ ಸುಮಿತ್ ಕಚೇರಿಯಲ್ಲಿನ ಹಣದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿದ್ದನಂತೆ. ಅಕ್ಟೋಬರ್ 16 ರಂದು ಸ್ಕೆಚ್ ಹಾಕಿ ಕಚೇರಿಗೆ ನುಗ್ಗಿ ಕೃತ್ಯ ಎಸಗಿದ್ದ ಎಂದು ಆರೋಪ ಮಾಡಲಾಗಿದೆ.
ಈ ಸಂಬಂಧ ಈಗ ಆರೋಪಿಗಳನ್ನ ಬಂಧಿಸಿರುವ ಪೊಲೀಸ್ ಪಡೆ ಒಟ್ಟು 6.3 ಲಕ್ಷ ರೂ. ಹಣ ಸೇರಿದಂತೆ ಒಂದು ಕಾರು, ಆಟವಾಡುವ ಗನ್ ಮತ್ತು ಕೊಡಲಿ ವಶಕ್ಕೆ ಪಡೆದಿದೆ. ಈ ಘಟನೆ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಜೊತೆಗೆ ಇಂತಹ ಕೃತ್ಯ ಎಸಗಿದ ಆರೋಪಿ ಬಗ್ಗೆ ಕಮೆಂಟ್ಗಳ ಸುರಿಮಳೆ ಸುರಿಯುತ್ತಿದೆ. ಆದರೆ ಕೆಲಸ ಹೋದ್ರು ಪರವಾಗಿಲ್ಲ ಅಂತಾ ನಿಯತ್ತಿನ ಹಾದಿಯಲ್ಲಿ ಇರುವುದು ಬಿಟ್ಟು, ಈಗ ಈ ಕಿರಾತಕ ತನ್ನ ತಪ್ಪಿನಿಂದಾಗಿ ಜೈಲು ಸೇರಿ ಕಂಬಿ ಎಣಿಸುವಂತಾಗಿದ್ದು ಮಾತ್ರ ದುರಂತ.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications