ನರೇಂದ್ರ ಮೋದಿ 'ಲೋಕ' ವಿಜಯಕ್ಕೆ ಒಂದು ವರ್ಷ
ನವದೆಹಲಿ, ಮೇ 16: ಕಳೆದ ವರ್ಷ ಇದೇ ದಿನ ಅಂದರೆ 2014 ರ ಮೇ 16 ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ವಿಶ್ವವೇ ನಿಬ್ಬೆರಗಾಗುವಂತೆ ಸಾಧನೆ ಮಾಡಿದ ನರೇಂದ್ರ ಮೋದಿ ಬರೋಬ್ಬರಿ 3 ದಶಕದ ನಂತರ ಕೇಂದ್ರದಲ್ಲಿ ಬಹುಮತ ಪಡೆದುಕೊಂಡಿದ್ದರು. ಬಿಜೆಪಿ ನೇತೃತ್ವದ ಎನ್ ಡಿಎ 333 ಸ್ಥಾನಗಳನ್ನು ಪಡೆದುಕೊಂಡು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ದಾಖಲೆ ನಿರ್ಮಿಸಿದ್ದು ಈಗ ಇತಿಹಾಸ.
ಮೋದಿ ಸರ್ಕಾರದ ಒಂದು ವರ್ಷದ ಅವಧಿಯನ್ನು ಪರಾಮರ್ಶಿಸಿದರೆ ಅನೇಕ ಅಂಶಗಳನ್ನು ಗುರುತಿಸಬಹುದು. ಇಲ್ಲಿ ಸಾಧನೆಗಳು ಇವೆ, ವೈಫಲ್ಯಗಳು ಇವೆ. ಒಂದು ವರ್ಷದ ಹಾದಿಯಲ್ಲಿನ ಪ್ರಮುಖ ಹೆಜ್ಜೆಗಳನ್ನು ಗುರುತು ಮಾಡಿದರೆ ಕೆಲವನ್ನು ಉಲ್ಲೇಖಿಸಬಹುದು. ಜನಧನ ಯೋಜನೆ, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನಗಳು ಗಮನ ಸೆಳೆದರೆ ಕಪ್ಪು ಹಣ ವಾಪಸಾತಿ ಚರ್ಚೆ ನಡೆದೇ ಇದೆ. ಮೋದಿ ವಿದೇಶ ಬಾಂಧವ್ಯ ವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳು ಮುಖ್ಯವಾದವು.[2014 ರ ಲೋಕಸಭೆ ಫಲಿತಾಂಶ ನೋಡಿಕೊಂಡು ಬನ್ನಿ]
ಬಿಜೆಪಿ ಮತ್ತು ನರೇಂದ್ರ ಮೋದಿ ವಿಜಯದ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳು ಬಿಚ್ಚಿಟ್ಟಿವೆ. ಹೆಸರಿನಲ್ಲಿ ದೇಶಾದ್ಯಂತ ನಾಗರೀಕರು ಜಯದ ಘಳಿಗೆಯನ್ನು #NamoVictoryDay ಎಂಬ ಹೆಸರಿನಲ್ಲಿ ಮೆಲಕು ಹಾಕಿದ್ದಾರೆ.

250 ಮೆರವಣಿಗೆಗೆ ಸಿದ್ಧತೆ
ವಿಜಯದ ದಿನವನ್ನು ನೆನಪು ಮಾಡಿಕೊಳ್ಳಲು ಬಿಜೆಪಿ ದೇಶಾದ್ಯಂತ 250 ಮೆರವಣಿಗೆ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. 2014 ರ ಲೋಕಸಭೆ ಚುನಾವಣಾ ಫಲಿತಾಂಶದ ದಿನವನ್ನು ಒಂದು ಮೈಲಿಗಲ್ಲು ಎಂದೇ ಬಣ್ಣಿಸಿದೆ.

ಕಾಂಗ್ರೆಸ್ ಚಕ್ರಾಧಿಪತ್ಯ ಕೊನೆ
ಭಾರತದಂಥ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದೇ ಪಕ್ಷ ಬಹುಮತ ಸಾಧಿಸುವುದು ಕಷ್ಟ ಎಂಬ ಸ್ಥಿತಿ ಎದುರಾಗಿತ್ತು. ರಾಜಕಾರಣದ ತಜ್ಞರೇ ಇದನ್ನು ಒಪ್ಪಿಕೊಂಡಿದ್ದರು. ಆದರೆ ಮೋದಿ ಹವಾ ಎಲ್ಲವನ್ನು ತಲೆಕೆಳಗೆ ಮಾಡಿತು.

ಯುವಜನತೆಯೇ ಕಾರಣ
ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಿಭೂತರಾಗಿದ್ದು ಯುವಕರು. ಪ್ರತಿ ಚುನಾವಣೆಗಿಂತ ಹೆಚ್ಚಿನ ಪ್ರಮಾಣದ ಮತದಾನ ನಡೆದಾಗಲೇ ಕಮಲ ಅರಳುತ್ತದೆ ಎಂದು ಹೇಳಲಾಗಿತ್ತು.

ವಿರೋಧ ಪಕ್ಷವೇ ಇಲ್ಲ!
ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು ಹೊಸ ಇತಿಹಾಸ. ರಾಜೀವ್-ಇಂದಿರಾ ಕಾಲದ ನಂತರ ಅಂಥ ಸ್ಥಿತಿ ಬಂದಿದ್ದು ಮೋದಿ ಹವಾಕ್ಕೆ ತಕ್ಕ ಉದಾಹರಣೆ.

ಎಲ್ಲ ಕಡೆ ಕೇಸರಿ ಮಯ
ಉತ್ತರ ಪ್ರದೇಶದ ಶೇ.90 ಕ್ಷೇತ್ರಗಳು ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಜನ ಮೋದಿ ಅವರನ್ನು ಬರಮಾಡಿಕೊಂಡಿದ್ದರು. ನಂತರ ನಡೆದ ಕೆಲ ರಾಜ್ಯಗಳ ವಿಧಾನಸಭೆ ಚುನಾಚಣೆಗಳು ಇದನ್ನೇ ಸಾಬೀತು ಮಾಡಿದವು.
-
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು? -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
RCB: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳ ಆಯೋಜನೆಗೆ ಆರ್ಸಿಬಿ ಒಪ್ಪಿಗೆ -
Dharavi Slum: ಏಷ್ಯಾದ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಬಡತನವೂ ಬಂಡವಾಳ, ಧಾರಾವಿ ಸಂಪೂರ್ಣ ವಿವರ ಇಲ್ಲಿದೆ -
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್ -
ಇರಾನ್-ಇಸ್ರೇಲ್ ಸಂಘರ್ಷ: ಕತಾರ್ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ












Click it and Unblock the Notifications