ನರೇಂದ್ರ ಮೋದಿ 'ಲೋಕ' ವಿಜಯಕ್ಕೆ ಒಂದು ವರ್ಷ
ನವದೆಹಲಿ, ಮೇ 16: ಕಳೆದ ವರ್ಷ ಇದೇ ದಿನ ಅಂದರೆ 2014 ರ ಮೇ 16 ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ವಿಶ್ವವೇ ನಿಬ್ಬೆರಗಾಗುವಂತೆ ಸಾಧನೆ ಮಾಡಿದ ನರೇಂದ್ರ ಮೋದಿ ಬರೋಬ್ಬರಿ 3 ದಶಕದ ನಂತರ ಕೇಂದ್ರದಲ್ಲಿ ಬಹುಮತ ಪಡೆದುಕೊಂಡಿದ್ದರು. ಬಿಜೆಪಿ ನೇತೃತ್ವದ ಎನ್ ಡಿಎ 333 ಸ್ಥಾನಗಳನ್ನು ಪಡೆದುಕೊಂಡು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ದಾಖಲೆ ನಿರ್ಮಿಸಿದ್ದು ಈಗ ಇತಿಹಾಸ.
ಮೋದಿ ಸರ್ಕಾರದ ಒಂದು ವರ್ಷದ ಅವಧಿಯನ್ನು ಪರಾಮರ್ಶಿಸಿದರೆ ಅನೇಕ ಅಂಶಗಳನ್ನು ಗುರುತಿಸಬಹುದು. ಇಲ್ಲಿ ಸಾಧನೆಗಳು ಇವೆ, ವೈಫಲ್ಯಗಳು ಇವೆ. ಒಂದು ವರ್ಷದ ಹಾದಿಯಲ್ಲಿನ ಪ್ರಮುಖ ಹೆಜ್ಜೆಗಳನ್ನು ಗುರುತು ಮಾಡಿದರೆ ಕೆಲವನ್ನು ಉಲ್ಲೇಖಿಸಬಹುದು. ಜನಧನ ಯೋಜನೆ, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನಗಳು ಗಮನ ಸೆಳೆದರೆ ಕಪ್ಪು ಹಣ ವಾಪಸಾತಿ ಚರ್ಚೆ ನಡೆದೇ ಇದೆ. ಮೋದಿ ವಿದೇಶ ಬಾಂಧವ್ಯ ವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳು ಮುಖ್ಯವಾದವು.[2014 ರ ಲೋಕಸಭೆ ಫಲಿತಾಂಶ ನೋಡಿಕೊಂಡು ಬನ್ನಿ]
ಬಿಜೆಪಿ ಮತ್ತು ನರೇಂದ್ರ ಮೋದಿ ವಿಜಯದ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳು ಬಿಚ್ಚಿಟ್ಟಿವೆ. ಹೆಸರಿನಲ್ಲಿ ದೇಶಾದ್ಯಂತ ನಾಗರೀಕರು ಜಯದ ಘಳಿಗೆಯನ್ನು #NamoVictoryDay ಎಂಬ ಹೆಸರಿನಲ್ಲಿ ಮೆಲಕು ಹಾಕಿದ್ದಾರೆ.

250 ಮೆರವಣಿಗೆಗೆ ಸಿದ್ಧತೆ
ವಿಜಯದ ದಿನವನ್ನು ನೆನಪು ಮಾಡಿಕೊಳ್ಳಲು ಬಿಜೆಪಿ ದೇಶಾದ್ಯಂತ 250 ಮೆರವಣಿಗೆ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. 2014 ರ ಲೋಕಸಭೆ ಚುನಾವಣಾ ಫಲಿತಾಂಶದ ದಿನವನ್ನು ಒಂದು ಮೈಲಿಗಲ್ಲು ಎಂದೇ ಬಣ್ಣಿಸಿದೆ.

ಕಾಂಗ್ರೆಸ್ ಚಕ್ರಾಧಿಪತ್ಯ ಕೊನೆ
ಭಾರತದಂಥ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದೇ ಪಕ್ಷ ಬಹುಮತ ಸಾಧಿಸುವುದು ಕಷ್ಟ ಎಂಬ ಸ್ಥಿತಿ ಎದುರಾಗಿತ್ತು. ರಾಜಕಾರಣದ ತಜ್ಞರೇ ಇದನ್ನು ಒಪ್ಪಿಕೊಂಡಿದ್ದರು. ಆದರೆ ಮೋದಿ ಹವಾ ಎಲ್ಲವನ್ನು ತಲೆಕೆಳಗೆ ಮಾಡಿತು.

ಯುವಜನತೆಯೇ ಕಾರಣ
ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಿಭೂತರಾಗಿದ್ದು ಯುವಕರು. ಪ್ರತಿ ಚುನಾವಣೆಗಿಂತ ಹೆಚ್ಚಿನ ಪ್ರಮಾಣದ ಮತದಾನ ನಡೆದಾಗಲೇ ಕಮಲ ಅರಳುತ್ತದೆ ಎಂದು ಹೇಳಲಾಗಿತ್ತು.

ವಿರೋಧ ಪಕ್ಷವೇ ಇಲ್ಲ!
ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು ಹೊಸ ಇತಿಹಾಸ. ರಾಜೀವ್-ಇಂದಿರಾ ಕಾಲದ ನಂತರ ಅಂಥ ಸ್ಥಿತಿ ಬಂದಿದ್ದು ಮೋದಿ ಹವಾಕ್ಕೆ ತಕ್ಕ ಉದಾಹರಣೆ.

ಎಲ್ಲ ಕಡೆ ಕೇಸರಿ ಮಯ
ಉತ್ತರ ಪ್ರದೇಶದ ಶೇ.90 ಕ್ಷೇತ್ರಗಳು ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಜನ ಮೋದಿ ಅವರನ್ನು ಬರಮಾಡಿಕೊಂಡಿದ್ದರು. ನಂತರ ನಡೆದ ಕೆಲ ರಾಜ್ಯಗಳ ವಿಧಾನಸಭೆ ಚುನಾಚಣೆಗಳು ಇದನ್ನೇ ಸಾಬೀತು ಮಾಡಿದವು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications