Extreme Weather: 2025ರಲ್ಲಿ ಹವಾಮಾನ ವೈಪರೀತ್ಯಕ್ಕೆ ಸಾಕ್ಷಿಯಾದ ಪ್ರದೇಶಗಳು
Year Ender 2025: ಪ್ರಸಕ್ತ ವರ್ಷ 2025 ಅಂತ್ಯಗೊಳ್ಳಲು ಕೆಲವೇ ದಿನಗಳು ಬಾಕಿ ಇವೆ. ಅನೇಕ ಸಂಗತಿಗಳು, ಸಿಹಿ ಕಹಿ ನೆನಪುಗಳು ಈ ವರ್ಷ ಘಟಿಸಿವೆ. ಇದೇ ವರ್ಷ ಭಾರತಾದ್ಯಂತ ಹವಾಮಾನ ವೈಪರೀತ್ಯಗಳು, ಅವಘಡಗಳು ಸಂಭವಿಸಿ ಅನೇಕ ಜನರ ಜೀವನ ಬೀದಿಗೆ ಬಿದ್ದಿದೆ. ಆಯಾ ಭಾಗದಲ್ಲಿ ವಿಪರೀತ್ಯ ಮಳೆ, ಚಂಡಮಾರುತ, ಪ್ರವಾಹನಗಳ, ಗುಡ್ಡ ಕುಸಿತಗಳು ಅಪಾರ ಹಾನಿ ಸಹ ಮಾಡಿವೆ. ಈ ಬಗ್ಗೆ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಮತ್ತು ಡೌನ್ ಟು ಅರ್ಥ್ನ ಕ್ಲೈಮೇಟ್ ಇಂಡಿಯಾ 2025 ವರದಿ ನೀಡಿದೆ.
2025ರ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಶೇಕಡ 99 ರಷ್ಟು ದಿನಗಳಲ್ಲಿ ಹವಾಮಾನ ವಿಕೋಪಗಳು ಘಟಿಸಿವೆ. ಹಾಗಾದರೆ ಈ ವರ್ಷ ಯಾವೆಲ್ಲ ಭಾಗಗಳಲ್ಲಿ ಪ್ರಮುಖ ಹವಾಮಾನ ವೈಪರೀತ್ಯಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಿವೆ ಎಂಬುದರ ಬಗ್ಗೆ 'ಡೌನ್ ಟು ಅರ್ಥ್' ವರದಿ ಮಾಡಿದೆ.

ಅಸ್ಸಾಂ, ಮಣಿಪುರದಲ್ಲಿ ಭಾರೀ ಪ್ರವಾಹ
2025ರಲ್ಲಿ ಕಳೆದ ಜೂನ್ನಲ್ಲಿ ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ ರಾಜ್ಯಗಳ ಅನೇಕ ಪ್ರದೇಶಗಳು ಅಕ್ಷರಶಃ ಭಾರೀ ಪ್ರವಾಹಕ್ಕೆ ನಲುಗಿದವು. ಅಪಾರ ಹಾನಿಗೆ ಸಾಕ್ಷಿಯಾದವು. ಅಂದಾಜಿನ ಪ್ರಕಾರ, ಸುಮಾರು 08 ಲಕ್ಷ ಜನರ ಜೀವನ ಅಸ್ತವ್ಯಸ್ತವಾಯಿತು. ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ ಕನಿಷ್ಠ ಎಂಟು ನದಿಗಳು ಅಪಾಯ ಮಟ್ಟ ಮೀರಿ ಹರಿದವು. ಇದರಿಂದ ನದಿ ಪಾತ್ರದ ಜನರು ಪ್ರವಾಹಕ್ಕೆ ಸಿಲುಕಿ ಸಂಕಷ್ಟ ಅನುಭವಿಸುವಂತಾಯಿತು.
ಉತ್ತರಾಖಂಡನಲ್ಲಿ ಭೂಕುಸಿತ, ಪ್ರವಾಹ
ಉತ್ತರಾಖಂಡ ರಾಜ್ಯ ವ್ಯಾಪ್ತಿಯಲ್ಲಿ ಸುರಿದ ನಿರಂತರ ಮಳೆ ಸುರಿಯಿತು. ನೋಡ ನೋಡುತ್ತಿದ್ದಂತೆ ರಾಜ್ಯವು ಮೇಘಸ್ಫೋಟಕ್ಕೆ ಸಾಕ್ಷಿ ಆಯಿತು. ಅನೇಕ ಜೀವಗಳು ಇಲ್ಲಿನ ಮಳೆ, ಮಳೆಯಿಂದ ಉಂಟಾದ ಭೂಕುಸಿತಗಳಿಗೆ ಸಾವು ನೋವುಗಳು ಸಂಭವಿಸಿದವು. ಡೆಹರಾಡೋನ್ ಮತ್ತು ಉತ್ತರಾಖಂಡದ ಹತ್ತಿರದ ಸ್ಥಳಗಳಲ್ಲಿ ಭಾರೀ ಮಳೆ ಮತ್ತು ಮೇಘಸ್ಫೋಟವು ತೀವ್ರ ಹಾನಿ ಉಂಟು ಮಾಡಿದ್ದರ ಬಗ್ಗೆ ವರದಿ ಆಯಿತು. ಈ ಭಾಗದ ರಸ್ತೆಗಳು, ಸೇತುವೆಗಳು ನಾಶವಾದವು. ಹೋಟೆಲ್, ಅಂಗಡಿ ಮುಂಗಟ್ಟು, ಮನೆಗಳಲ್ಲಿ ನೀರು ನುಗ್ಗಿ ಬಂತು. ಜನರ ಜೀವನ ಮತ್ತೆ ಹಳಿಗೆ ಬರಲು ವಾರಗಳ ಕಾಲ ಬೇಕಾಯಿತು. ಈ ಘಟನೆ ವರ್ಷಗಳ ಕಳೆದರೂ ಮರೆಯುವಂತಿಲ್ಲ.
ಜಮ್ಮುವಿನಲ್ಲಿ ಭೂಕುಸಿತ: ಯಾತ್ರಿಕರ ಜೀವ ಹಾನಿ
ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಕಣಿವೆ ರಾಜ್ಯ ಜಮ್ಮುವಿನಲ್ಲಿ ಭೂಕುಸಿತ ಸಂಭವಿಸಿತು. ಇಲ್ಲಿನ ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತದಲ್ಲಿ ಅನೇಕ ಯಾತ್ರಿಕರು ಜೀವ ಬಿಟ್ಟರು. ಈ ಘಟನೆ ಬಳಿಕ ಚಿಸೋಟಿಯಲ್ಲಿ ಮೇಘಸ್ಫೋಟ ಸಂಭವಿಸಿತು. ಇದರಿಂದ ದಿಢೀರ್ ಪ್ರವಾಹ ಉಂಟಾಯಿತು. ಅನೇಕ ಮಂದಿ ಯಾತ್ರಿಕರು ಗಾಯಗೊಂಡರು. ಆಗಸ್ಟ್ ಮೂರನೇ ವಾರ ಕಥುವಾ ಜಿಲ್ಲೆಯ ವ್ಯಾಪ್ತಿಯ ಜೋಡ್ ಘಾಟಿ ಗ್ರಾಮದಲ್ಲಿ ವಿಪರೀತ ಮಳೆಗೆ ನಾಲ್ಕು ಮಕ್ಕಳು ಸೇರಿ 07 ಮಂದಿ ಪ್ರಾಣಬಿಟ್ಟರು. ಕೆಲವು ದಿನ ಜನರು ಆತಂಕದಲ್ಲಿ ಬುದುಕಬೇಕಾಯಿತು.
ವರ್ಷಾಂತ್ಯಕ್ಕೆ ದಿತ್ವಾ ಚಂಡಮಾರುತದ ಅಬ್ಬರ
ಬಂಗಾಳಕೊಲ್ಲಿ ಭಾಗದಲ್ಲಿ ನವೆಂಬರ್ ಅಂತ್ಯ, ಡಿಸೆಂಬರ್ ಆರಂಭದಲ್ಲಿ ದಿತ್ವಾ ಚಂಡಮಾರುತ ಸೃಷ್ಟಿಯಿಂದ ಶ್ರೀಲಂಕಾ ಹಾಗೂ ಕರಾವಳಿ ರಾಜ್ಯಗಳಲ್ಲಿ ತನ್ನ ಪ್ರಭಾವ ಬೀರಿತು. ಇಲ್ಲಿ ಸಾವಿನ ಸಂಖ್ಯೆ 465 ಕ್ಕೇರಿತು. ಚಂಡಮಾರುತ ಬಿರುಗಾಳಿ, ಮಳೆ, ಪ್ರವಾಹಕ್ಕೆ ಸುಮಾರು 366 ಜನರು ಕಾಣೆಯಾದರು ಎಂದು ವರದಿ ಆಗಿದೆ. ಅಷ್ಟು ಮಾತ್ರವಲ್ಲದೇ ಹಲವೆಡೆ ಪ್ರವಾಹ, ಭೂಕುಸಿತ ಉಂಟಾಯಿತು. ಕುಡಿಯಲು ನೀರಿನ ಸಮಸ್ಯೆ ಉಂಟಾಯಿತು. ಇದರಿಂದ ಹೊರ ಬಂದು ಮೊದಲಿನಂತ ಜೀವನ ನಡೆಯಲು ಶ್ರೀಲಂಕಾ ಇಂದಿಗೂ ಹೆಣಗಾಡುತ್ತಿದೆ.
ವೈಪರೀತ್ಯ: ಸಾವು ನೋವಿನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
ಶ್ರೀಲಂಕಾ ದೇಶದಲ್ಲಿ ಸೈಕ್ಲೋನ್ನಿಂದ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ಭಾರತ ನವೆಂಬರ್ 28 ರಂದು ಆಪರೇಷನ್ ಸಾಗರ್ ಬಂಧು ಆರಂಭಿಸಿತು. ಇನ್ನೂ ಹವಾಮಾನ ಅಪಾಯ ಸೂಚ್ಯಂಕ ಪ್ರಕಾರ, 1995 ಮತ್ತು 2024 ರವರೆಗೆ ಪ್ರಪಂಚದಾದ್ಯಂತ 8.32 ಲಕ್ಷಕ್ಕೂ ಅಧಿಕ ಮಂದಿ ಹವಾಮಾನ ವೈಪರೀತ್ಯದಿಂದ ಮೃತಪಟ್ಟಿದ್ದಾರೆ. ಇಂತಹ ವೈಪರೀತ್ಯಗಳ ಪ್ರಭಾವ, ಹಾನಿ ಎದುರಿಸಿದ ದೇಶಗಳ ಸಾಲಿನಲ್ಲಿ ಭಾರತ 9ನೇ ಸ್ಥಾನದಲ್ಲಿದೆ.
ಭಾರತದಲ್ಲಿ ಸಾವು ನೋವು ಪ್ರತ್ಯೇಕವಾಗಿ ನೋಡುವುದಾದರೆ 2025ರಲ್ಲಿ ಜೂನ್-ಸೆಪ್ಟೆಂಬರ್ ವರೆಗಿನ ಮುಂಗಾರು ಋತುವಿನಲ್ಲಿ ದೇಶಾದ್ಯಂತ ಕನಿಷ್ಠ 1,528 ಸಾವುಗಳು ಸಂಭವಿಸಿವೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications