ಜೂ. 3ರಿಂದ ಮತಯಂತ್ರ ಹ್ಯಾಕಥಾನ್ ಸವಾಲು: ಚುನಾವಣಾ ಆಯೋಗ
ಮತಯಂತ್ರಗಳ ತಿರುಚುವಿಕೆಗೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಶನಿವಾರ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿತು.
ನವದೆಹಲಿ, ಮೇ 20: ಮುಂದಿನ ತಿಂಗಳ 3ರಿಂದ ಬಹಿರಂಗ ಸವಾಲಿಗೆ ಸಿದ್ಧ ಎಂದು ಕೇಂದ್ರ ಚುನಾವಣಾ ಆಯೋಗ (ಇಸಿ) ಶನಿವಾರ ಘೋಷಿಸಿದೆ. ಮತಯಂತ್ರಗಳ ತಿರುಚುವಿಕೆಗೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಇಸಿ, ಶನಿವಾರ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿತು.
ಆನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸಿ ಆಯುಕ್ತ ಡಾ. ನಾಸೀಂ ಝೈದಿ, ''ಮತ ಯಂತ್ರಗಳಲ್ಲಿ ಯಾವುದೇ ದೋಷವಿಲ್ಲ. ಆದರೂ ಇದರ ದೋಷಗಳನ್ನು ಪತ್ತೆ ಹಚ್ಚುವಲ್ಲಿ ಯಾವುದಾದರೂ ರಾಜಕೀಯ ಪಕ್ಷಗಳು ಮುಂದೆಬರುವುದಾದರೆ ಬರಬಹುದು'' ಎಂದು ತಿಳಿಸಿದ್ದಾರೆ.
ಪ್ರತಿ ಪಕ್ಷಕ್ಕೆ 3 ಅವಕಾಶ: ಮತ ಯಂತ್ರ ದೋಷ ಸಾಬೀತು ಸವಾಲನ್ನು ಸ್ವೀಕರಿಸುವ ಯಾವುದೇ ರಾಜಕೀಯ ಪಕ್ಷವು, ತನ್ನ ಮೂವರು ಅಧಿಕೃತ ವ್ಯಕ್ತಿಗಳನ್ನು ನೊಂದಾಯಿಸಬೇಕು. ಇದೇ ತಿಂಗಳ 26ರೊಳಗೆ ರಾಜಕೀಯ ಪಕ್ಷಗಳು ಈ ಸವಾಲು ಸ್ವೀಕರಿಸುವಲ್ಲಿ ತಮಗಿರುವ ಆಸಕ್ತಿಯನ್ನು ಆಯೋಗಕ್ಕೆ ತಿಳಿಸಬೇಕು. ಅಧಿಕೃತ ವ್ಯಕ್ತಿಗಳ ಹೆಸರನ್ನು ನೊಂದಾಯಿಸಿದ ರಾಜಕೀಯ ಪಕ್ಷಗಳಿಗೆ ಮಾತ್ರ ಮತ ಯಂತ್ರ ಪರೀಕ್ಷೆಗೆ ಅನುವು ಮಾಡಿಕೊಡಲಾಗುವುದು ಎಂದು ಝೈದಿ ತಿಳಿಸಿದ್ದಾರೆ.

ಹಾಗೆ ಪರೀಕ್ಷೆಗಾಗಿ ಬರುವ ವ್ಯಕ್ತಿಯು ಮತ ಯಂತ್ರಗಳನ್ನು ವಿರೂಪಗೊಳಿಸುವುದು ಅಥವಾ ಮತ್ಯಾವುದೇ ಥರವಲ್ಲದ ಕ್ರಮಗಳ ಮೂಲಕ ಪರೀಕ್ಷೆ ನಡೆಸಲು ಹೋಗುವಂತಿಲ್ಲ. ಪರೀಕ್ಷೆ ನಡೆಸಲು ಬಂದ ವ್ಯಕ್ತಿಯು ಅರ್ಧಕ್ಕೇ ಪರೀಕ್ಷೆಯಿಂದ ಹಿಂದೆ ಸರಿದರೆ ಆತ ಸೋತನೆಂದೇ ಅರ್ಥ.
ಝೈದಿ ಹೇಳಿದ ಇತರ ಹೇಳಿಕೆಗಳು ಹೈಲೈಟ್ಸ್ ಇಲ್ಲಿವೆ...
- ಮಲೇಷ್ಯಾ ಮುಂತಾದ ಕಡೆಗೆ ಉಪಯೋಗಿಸುವ ಮತಯಂತ್ರಗಳಲ್ಲಿನ ಡೇಟಾವನ್ನು ಕಾಂಪ್ಯಾಕ್ಟ್ ಡಿಸ್ಕ್ (ಸಿಡಿ) ನಲ್ಲಿ ದಾಖಲಿಸಬಹುದು. ಆದರೆ, ನಮ್ಮ ಮತಯಂತ್ರಗಳಲ್ಲಿನ ದತ್ತಾಂಶವನ್ನು ಹಾಗೆ ಬೇರೆಡೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಹಾಗಾಗಿ, ಇದು ಶೇ. 100ರಷ್ಟು ಸೇಫ್.
- ಮುಂದಿನ ಚುನಾವಣೆಗಳಲ್ಲಿ ವಿವಿಪಿಎಟಿ ತಂತ್ರಜ್ಞಾನವುಳ್ಳ ಮೆಷೀನ್ ಗಳನ್ನೂ ಮತ ಯಂತ್ರಗಳ ಜತೆಗೆ ಉಪಯೋಗಿಸುತ್ತೇವೆ. ಹಾಗಾಗಿ, 13.95 ಲಕ್ಷ ಬ್ಯಾಲೆಟ್ ಯೂನಿಟ್ ಗಳು, 9.3 ಲಕ್ಷ ಬ್ಯಾಲೆಟ್ ಕಂಟ್ರೋಲ್ ಯೂನಿಟ್ ಗಳು ಹಾಗೂ 16.5 ಲಕ್ಷ ವಿವಿಪಿಎಟಿ ಗಳನ್ನು ತಯಾರಿಸಲು ಆದೇಶಿಸಲಾಗಿದೆ.
- ಹಾಗೊಂದು ವೇಳೆ, ಮತ ಯಂತ್ರಗಳನ್ನು ಸುಲಭವಾಗಿ ದೋಷಪೂರಿತವಾಗಿಸಬಹುದು ಎಂದಾದರೆ, ನಾವು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿ ಮತ್ತೊಮ್ಮೆ ಪರೀಕ್ಷೆಗೊಳಪಡಿಸುತ್ತೇವೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications