ಜೂ. 3ರಿಂದ ಮತಯಂತ್ರ ಹ್ಯಾಕಥಾನ್ ಸವಾಲು: ಚುನಾವಣಾ ಆಯೋಗ
ಮತಯಂತ್ರಗಳ ತಿರುಚುವಿಕೆಗೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಶನಿವಾರ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿತು.
ನವದೆಹಲಿ, ಮೇ 20: ಮುಂದಿನ ತಿಂಗಳ 3ರಿಂದ ಬಹಿರಂಗ ಸವಾಲಿಗೆ ಸಿದ್ಧ ಎಂದು ಕೇಂದ್ರ ಚುನಾವಣಾ ಆಯೋಗ (ಇಸಿ) ಶನಿವಾರ ಘೋಷಿಸಿದೆ. ಮತಯಂತ್ರಗಳ ತಿರುಚುವಿಕೆಗೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಇಸಿ, ಶನಿವಾರ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿತು.
ಆನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸಿ ಆಯುಕ್ತ ಡಾ. ನಾಸೀಂ ಝೈದಿ, ''ಮತ ಯಂತ್ರಗಳಲ್ಲಿ ಯಾವುದೇ ದೋಷವಿಲ್ಲ. ಆದರೂ ಇದರ ದೋಷಗಳನ್ನು ಪತ್ತೆ ಹಚ್ಚುವಲ್ಲಿ ಯಾವುದಾದರೂ ರಾಜಕೀಯ ಪಕ್ಷಗಳು ಮುಂದೆಬರುವುದಾದರೆ ಬರಬಹುದು'' ಎಂದು ತಿಳಿಸಿದ್ದಾರೆ.
ಪ್ರತಿ ಪಕ್ಷಕ್ಕೆ 3 ಅವಕಾಶ: ಮತ ಯಂತ್ರ ದೋಷ ಸಾಬೀತು ಸವಾಲನ್ನು ಸ್ವೀಕರಿಸುವ ಯಾವುದೇ ರಾಜಕೀಯ ಪಕ್ಷವು, ತನ್ನ ಮೂವರು ಅಧಿಕೃತ ವ್ಯಕ್ತಿಗಳನ್ನು ನೊಂದಾಯಿಸಬೇಕು. ಇದೇ ತಿಂಗಳ 26ರೊಳಗೆ ರಾಜಕೀಯ ಪಕ್ಷಗಳು ಈ ಸವಾಲು ಸ್ವೀಕರಿಸುವಲ್ಲಿ ತಮಗಿರುವ ಆಸಕ್ತಿಯನ್ನು ಆಯೋಗಕ್ಕೆ ತಿಳಿಸಬೇಕು. ಅಧಿಕೃತ ವ್ಯಕ್ತಿಗಳ ಹೆಸರನ್ನು ನೊಂದಾಯಿಸಿದ ರಾಜಕೀಯ ಪಕ್ಷಗಳಿಗೆ ಮಾತ್ರ ಮತ ಯಂತ್ರ ಪರೀಕ್ಷೆಗೆ ಅನುವು ಮಾಡಿಕೊಡಲಾಗುವುದು ಎಂದು ಝೈದಿ ತಿಳಿಸಿದ್ದಾರೆ.

ಹಾಗೆ ಪರೀಕ್ಷೆಗಾಗಿ ಬರುವ ವ್ಯಕ್ತಿಯು ಮತ ಯಂತ್ರಗಳನ್ನು ವಿರೂಪಗೊಳಿಸುವುದು ಅಥವಾ ಮತ್ಯಾವುದೇ ಥರವಲ್ಲದ ಕ್ರಮಗಳ ಮೂಲಕ ಪರೀಕ್ಷೆ ನಡೆಸಲು ಹೋಗುವಂತಿಲ್ಲ. ಪರೀಕ್ಷೆ ನಡೆಸಲು ಬಂದ ವ್ಯಕ್ತಿಯು ಅರ್ಧಕ್ಕೇ ಪರೀಕ್ಷೆಯಿಂದ ಹಿಂದೆ ಸರಿದರೆ ಆತ ಸೋತನೆಂದೇ ಅರ್ಥ.
ಝೈದಿ ಹೇಳಿದ ಇತರ ಹೇಳಿಕೆಗಳು ಹೈಲೈಟ್ಸ್ ಇಲ್ಲಿವೆ...
- ಮಲೇಷ್ಯಾ ಮುಂತಾದ ಕಡೆಗೆ ಉಪಯೋಗಿಸುವ ಮತಯಂತ್ರಗಳಲ್ಲಿನ ಡೇಟಾವನ್ನು ಕಾಂಪ್ಯಾಕ್ಟ್ ಡಿಸ್ಕ್ (ಸಿಡಿ) ನಲ್ಲಿ ದಾಖಲಿಸಬಹುದು. ಆದರೆ, ನಮ್ಮ ಮತಯಂತ್ರಗಳಲ್ಲಿನ ದತ್ತಾಂಶವನ್ನು ಹಾಗೆ ಬೇರೆಡೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಹಾಗಾಗಿ, ಇದು ಶೇ. 100ರಷ್ಟು ಸೇಫ್.
- ಮುಂದಿನ ಚುನಾವಣೆಗಳಲ್ಲಿ ವಿವಿಪಿಎಟಿ ತಂತ್ರಜ್ಞಾನವುಳ್ಳ ಮೆಷೀನ್ ಗಳನ್ನೂ ಮತ ಯಂತ್ರಗಳ ಜತೆಗೆ ಉಪಯೋಗಿಸುತ್ತೇವೆ. ಹಾಗಾಗಿ, 13.95 ಲಕ್ಷ ಬ್ಯಾಲೆಟ್ ಯೂನಿಟ್ ಗಳು, 9.3 ಲಕ್ಷ ಬ್ಯಾಲೆಟ್ ಕಂಟ್ರೋಲ್ ಯೂನಿಟ್ ಗಳು ಹಾಗೂ 16.5 ಲಕ್ಷ ವಿವಿಪಿಎಟಿ ಗಳನ್ನು ತಯಾರಿಸಲು ಆದೇಶಿಸಲಾಗಿದೆ.
- ಹಾಗೊಂದು ವೇಳೆ, ಮತ ಯಂತ್ರಗಳನ್ನು ಸುಲಭವಾಗಿ ದೋಷಪೂರಿತವಾಗಿಸಬಹುದು ಎಂದಾದರೆ, ನಾವು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿ ಮತ್ತೊಮ್ಮೆ ಪರೀಕ್ಷೆಗೊಳಪಡಿಸುತ್ತೇವೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications