ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ
Ethanol: ದೇಶವು ಸಂಕಷ್ಟದ ಸಮಯದಲ್ಲಿ ಇರುವಾಗ ಎಥೆನಾಲ್ ಹೇಗೆ ಸಹಕಾರಿ ಆಗಿದೆ ಎನ್ನುವ ಬಗ್ಗೆ ಬರಹಗಾರ ಕೃಷ್ಣ ಭಟ್ ಅವರ ಬರಹ ಇಲ್ಲಿದೆ.
ಸ್ವಲ್ಪ ದಿನದ ಹಿಂದೆ ಎಥೆನಾಲ್ ಬ್ಲೆಂಡಿಂಗ್ ವಿಷಯದಲ್ಲಿ ಮೋದಿ ಸರ್ಕಾರವನ್ನು ಬಹಳ ಜನರು ಹಿಗ್ಗಾ ಮುಗ್ಗಾ ಬೈದಿದ್ದರು. ಜನರನ್ನೇನು ಮೂರ್ಖರು ಅಂದ್ಕೊಂಡಿದ್ದಾರಾ ಅಂತ ಬೈದಿದ್ದೇ ಬೈದಿದ್ದು. ಈಗ ಅದೇ ಜನರು ಅಥವಾ ಅಂಥದ್ದೇ ಮನಸ್ಥಿತಿಯ ಬೇರೆ ಜನರು ಭಾರತ ಮೋದಿ ಕಾಲದಲ್ಲಿ ಆಮದು ತೈಲದ ಮೇಲೆ ವಿಪರೀತ ಡಿಪೆಂಡೆಂಟ್ ಆಗಿದೆ ಅಂತ ಬೈತಾ ಇದ್ದಾರೆ. ತೈಲದಲ್ಲಿ ಶೇ.20 ರಷ್ಟು ಎಥೆನಾಲ್ ಸೇರಿಸಿದಾಗ ನಮ್ಮ ತೈಲ ಬೇಡಿಕೆ ಶೇ.20ರಷ್ಟು ಕಡಿಮೆ ಆಗಿದ್ದರ ಪರಿಣಾಮ ನಮಗೆ ಈಗ ಅನುಭವಕ್ಕೆ ಬರ್ತಾ ಇದೆ.

ಹಾರ್ಮುಜ್ ಜಲಸಂಧಿಯ ಆಚೆ ತೈಲ ತುಂಬಿಕೊಂಡು ನಿಂತಿರುವ ಒಂದೊಂದು ಹಡಗನ್ನೂ ಈಚೆ ತರೋದಕ್ಕೆ ಸರ್ಕಾರ ಮಾಡುತ್ತಿರುವ ವ್ಯಾಯಾಮ ಇಲ್ಲಿ ತೆಂಗಿನೆಣ್ಣೆ ತಿಕ್ಕಿಸಿಕೊಳ್ಳುತ್ತ ಪಟ್ಟಾಂಗ ಹೊಡೆಯುವವರಿಗೆ ಹೇಗೆ ಗೊತ್ತಾಗಬೇಕು ಹೇಳಿ. ಆವತ್ತು ನೋಟ್ ಬ್ಯಾನ್ ಮಾಡಿದಾಗ ಬೈದುಕೊಂಡವರು, ನೋಟು ಎಕ್ಸ್ಚೇಂಜ್ ಮಾಡಿಸಿಕೊಳ್ಳುವುದಕ್ಕೆ ಬ್ಯಾಂಕಿನವರೆಗೆ ನಡೆಯುವಂತಾದ್ದಕ್ಕೆ, ಎಟಿಎಂ ಎದುರು ಕ್ಯೂ ನಿಲ್ಲಬೇಕಾದ್ದಕ್ಕೆ ಬೈದುಕೊಂಡಿದ್ದ ಜನರೇ ಮೊನ್ನೆ ದುರಂಧರ್ 2 ಸಿನಿಮಾಗೆ 500 ರೂ. ಟಿಕೆಟ್ ತೆತ್ತು ಕೂತು ನೋಡುತ್ತಾ, "ಭಾಯಿಯೋ ಬೆಹನೋಂ... ಆಜ್ ರಾತ್ ಆಠ್ ಬಜೇ ಸೇ..." ಅಂತ ಮೋದಿ ಮಾತು ಶುರು ಮಾಡುತ್ತಿದ್ದ ಹಾಗೆ ಚಪ್ಪಾಳೆ ತಟ್ಟಿ ಬಂದಿರುತ್ತಾರೆ. ಅವತ್ತು ಯುಪಿಐ ಬಂದಾಗ, "10 ರೂ. ಚಾ ಕುಡಿಯಕ್ಕೆ ಹೋದರೆ ಯುಪಿಐಯಲ್ಲಿ ದುಡ್ಡು ಕೊಡಕ್ಕೆ ಆಗತ್ತಾ? ಇದೆಲ್ಲ ಸಾಧ್ಯವೇ ಇಲ್ಲ" ಅಂದಿದ್ದ ಜನರೇ ಈಗ ಯುಪಿಐಗೆ ಒಗ್ಗಿಕೊಂಡಿದ್ದಾರೆ.
ಮೋದಿ ಸರ್ಕಾರವನ್ನು ಬೈಯುವುದಕ್ಕೆ ಬೇಕಾದಷ್ಟು ದೂರದೃಷ್ಟಿ ಇಲ್ಲದ ಯೋಜನೆಗಳು ಸಿಗುತ್ತವೆ. ಈಗ ಉಜ್ವಲ ಯೋಜನೆಯನ್ನೇ ಗಮನಿಸಿ. ಹಳ್ಳಿಗೂ ಎಲ್ಪಿಜಿ ತಲುಪಿಸುವ ಉತ್ಸಾಹವನ್ನೇ ಸರ್ಕಾರ ಕಡಿಮೆ ದರದಲ್ಲಿ ಗೋಬರ್ ಗ್ಯಾಸ್ ಒದಗಿಸುವುದಕ್ಕೆ ಪ್ರಯತ್ನಿಸಿದ್ದರೆ ಎಲ್ಪಿಜಿ ಹಾಗೂ ರಸಗೊಬ್ಬರದ ಮೇಲಿನ ಜನರ ಅವಲಂಬನೆ ಒಂದು ಸ್ವಲ್ಪವಾದರೂ ಕಡಿಮೆ ಆಗ್ತಿತ್ತು. ಆದರೆ ಚರಂಡಿ ಗ್ಯಾಸ್ ಅಂತ ಕಾಂಗ್ರೆಸ್ನವರು ಆಡಿಕೊಂಡಾಗ ಜನರು ಕೀಳರಿಮೆಗೆ ಬಿದ್ದರು. ನಗರದ ಟನ್ಗಟ್ಟಲೆ ಕಸ ಅಲ್ಲೆಲ್ಲೋ ಬಿದ್ದು ಹೊರಳಾಡುತ್ತಿದ್ದರೆ ನೋಡಿಕೊಂಡು ಸುಮ್ಮನಿದ್ದೇವೆ. ಅದರಿಂದ ಮಿಥೇನ್ ಉತ್ಪಾದನೆ ಮಾಡಿದರೆ ನಮ್ಮ ಇಂಧನದ ಅವಲಂಬನೆ ಎಷ್ಟು ಕಡಿಮೆ ಆದೀತು ಎಂದು ಯೋಚನೆಯನ್ನೂ ಮಾಡುವುದಿಲ್ಲ.
ಸರ್ಕಾರವನ್ನು ಬೈಯುವಾಗ ಸರ್ಕಾರದ ನೀತಿಯನ್ನು ಟೀಕಿಸುವಾಗ ನಮಗೆ ಆ ಯೋಜನೆಯ ದೂರದೃಷ್ಟಿಯ ಬಗ್ಗೆ ಅರಿವಿರಬೇಕು. ಎಲ್ಲ ಯೋಜನೆಗಳೂ ತಕ್ಷಣ ಪರಿಹಾರ ನೀಡುವುದಿಲ್ಲ. ಕೆಲವು ಬಾರಿ, ನೀಡಿದ ಪರಿಹಾರ ನಮಗೆ ಅರಿವಿಗೂ ಬರದೇ ಇರಬಹುದು. ಆದರೆ ಸರ್ಕಾರ ಇರಬೇಕಾದ್ದೇ ಹಾಗೆ.
ಕೃಷ್ಣ ಭಟ್, ಬರಹಗಾರ
-
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
Tejasvi Surya: ಕೆಎಸ್ಸಿಎನಿಂದ ಐಪಿಎಲ್ ಫ್ರೀ ಟಿಕೆಟ್ ಚರ್ಚೆ: ಕಾಂಗ್ರೆಸ್ ಶಾಸಕರಿಗೆ ಸಂಸದ ತೇಜಸ್ವಿ ಸೂರ್ಯ ಕ್ಲಾಸ್ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ರಾಜಾರಾಂ ತಲ್ಲೂರು ಬರಹ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications