ಖಾಸಗಿ ವಿಮಾನಯಾನ ಸಂಸ್ಥೆಗೆ ₹30 ಲಕ್ಷ ದಂಡ! ಕಾರಣ ತಿಳಿಯಿರಿ
ಮುಂಬೈ: ವಿಮಾನದಲ್ಲಿ ಪ್ರಯಾಣ ಮಾಡುವುದು ಅಂದ್ರೆ ದುಬಾರಿ. ಅದ್ರಲ್ಲೂ ವಿಮಾನ ಸಂಚಾರ ವ್ಯವಸ್ಥೆ ಕಲ್ಪಿಸುವ ಸಂಸ್ಥೆಗಳು ತಪ್ಪನ್ನು ಮಾಡಿದ್ರೆ ಭಾರಿ ದಂಡ ಕಟ್ಟಲೇಬೇಕು. ಈಗ ಯಾಕೆ ಈ ಮಾತು ಅಂದ್ರೆ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೊ ಏರ್ಲೈನ್ಸ್ಗೆ ₹30 ಲಕ್ಷ ದಂಡ ವಿಧಿಸಲಾಗಿದೆ. ಅರೆರೆ ಇಷ್ಟು ದೊಡ್ಡ ಮೊತ್ತದ ಫೈನ್ ಬಿದ್ದಿದ್ದು ಯಾಕೆ? ದಂಡ ವಿಧಿಸಿದ್ದು ಯಾರು? ಬನ್ನಿ ತಿಳಿಯೋಣ.
ಅಂದಹಾಗೆ ಇಂಡಿಗೊ ಏರ್ಲೈನ್ಸ್ಗೆ ದೇಶದಲ್ಲಿ ದೊಡ್ಡ ಹೆಸರು ಇದೆ. ಆದರೆ ಇದೀಗ ಈ ಸಂಸ್ಥೆ ವಿರುದ್ಧ ಭಾರಿ ದಂಡ ವಿಧಿಸಿದೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ). ಅಷ್ಟಕ್ಕೂ ಹೀಗೆ ಡಿಜಿಸಿಎ ಭಾರಿ ಪ್ರಮಾಣದ ದಂಡ ವಿಧಿಸಲು ಕಾರಣವನ್ನು ತಿಳಿಸಲಾಗಿದೆ. ವೈಮಾನಿಕ ಕಾರ್ಯಾಚರಣೆ, ತರಬೇತಿ & ಎಂಜಿನಿಯರಿಂಗ್ ಕಾರ್ಯವಿಧಾನ ಸಂಬಂಧಿತ ದಾಖಲಾತಿಗಳ ನ್ಯೂನತೆಗಳ ಹಿನ್ನೆಲೆ ಡಿಜಿಸಿಎ ಇಂಡಿಗೊ ಏರ್ಲೈನ್ಸ್ಗೆ ₹30 ಲಕ್ಷ ದಂಡ ವಿಧಿಸಿದೆ. ಹಾಗಾದರೆ ಕ್ರಮಕ್ಕೆ ಪ್ರಮುಖ ಕಾರಣ ಏನು? ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಕಠಿಣ ಕ್ರಮ ಕೈಗೊಂಡಿದ್ದು ಏಕೆ? ಮುಂದೆ ಓದಿ.

ನಿರ್ದೇಶನಾಲಯ ಪರಿಶೀಲನೆಯಲ್ಲಿ ಘಟನೆ ಬೆಳಕಿಗೆ
ಅಷ್ಟಕ್ಕೂ ಕಳೆದ 6 ತಿಂಗಳ ಅವಧಿಯಲ್ಲಿ 4 ಬಾರಿ A321 ವಿಮಾನದ ಟೇಲ್ ಸ್ಟ್ರೈಕ್ ಅಂದ್ರೆ ವಿಮಾನ ಲ್ಯಾಂಡಿಂಗ್ ವೇಳೆ ಹಿಂಬದಿ ಭಾಗ ರನ್ವೇಗೆ ತಾಗುವ ಘಟನೆ ಸಂಭವಿಸಿತ್ತು ಅಂತಾ ಹೇಳಲಾಗಿದೆ. ಈ ಬಗ್ಗೆ ನಿರ್ದೇಶನಾಲಯ ಪರಿಶೀಲಿಸಿತ್ತು. ಹಾಗೆ ಲೆಕ್ಕಪರಿಶೋಧನೆಯ ವೇಳೆ ವೈಮಾನಿಕ ಸಂಸ್ಥೆ ಕಾರ್ಯಾಚರಣೆ, ತರಬೇತಿ, ಎಂಜಿನಿಯರಿಂಗ್ & ವಿಮಾನದ ದತ್ತಾಂಶ ಮೇಲ್ವಿಚಾರಣೆ ಕಾರ್ಯಕ್ರಮ ಪರಿಶೀಲನೆ ನಡೆಸಲಾಗಿದೆ ಎಂದು ಡಿಜಿಸಿಎ ಹೇಳಿತ್ತು. ವಿಶೇಷ ಲೆಕ್ಕಪರಿಶೋಧನೆ ಸಮಯದಲ್ಲಿ, ಇಂಡಿಗೊ ಕಾರ್ಯಾಚರಣೆ/ತರಬೇತಿ ಕಾರ್ಯವಿಧಾನಗಳು ಸೇರಿದಂತೆ ಎಂಜಿನಿಯರಿಂಗ್ ಕಾರ್ಯವಿಧಾನ ಸಂಬಂಧಿತ ದಾಖಲಾತಿಗಳಲ್ಲಿ ಕೆಲವು ವ್ಯವಸ್ಥಿತ ನ್ಯೂನತೆ ಗಮನಿಸಲಾಗಿದೆ ಎಂದು ತಿಳಿಸಲಾಗಿತ್ತು.
ಅಂದಹಾಗೆ ಈ ಬಗ್ಗೆ ವೈಮಾನಿಕ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್ ನೀಡಿತ್ತು. ಇನ್ನು ಶೋಕಾಸ್ ನೋಟಿಸ್ಗೆ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಅದು ತೃಪ್ತಿಕರವಾಗಿರದ ಹಿನ್ನೆಲೆಯಲ್ಲಿ ₹30 ಲಕ್ಷ ದಂಡ ವಿಧಿಸಲಾಗಿದೆ ಎನ್ನಲಾಗಿದೆ. ಬರೋಬ್ಬರಿ ₹30 ಲಕ್ಷ ರೂಪಾಯಿ ದಂಡ ವಿಧಿಸುವ ಜೊತೆಗೆ, ಡಿಜಿಸಿಎ ಮಾನದಂಡಕ್ಕೆ ಅನುಗುಣವಾಗಿ ಕೆಲ ತಿದ್ದುಪಡಿ ಮಾಡಿಕೊಳ್ಳಲು ಸೂಚಿಸಲಾಗಿದೆಯಂತೆ. ಒಟ್ನಲ್ಲಿ ಹೀಗೆ ವಿಮಾನಯಾನ ಸಂಸ್ಥೆಗೆ ಭಾರಿ ಪ್ರಮಾಣದ ದಂಡ ವಿಧಿಸಿರುವುದು ಈಗ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications