Delhi AQI: ಹದಗೆಟ್ಟ ವಾಯು ಗುಣಮಟ್ಟ ನಿಯಂತ್ರಣಕ್ಕೆ ಸರ್ಕಾರ ಹೊಸ ಪ್ಲಾನ್
ನವದೆಹಲಿ, ನವೆಂಬರ್ 09: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ವಾರದಿಂದ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ತೀರಾ ಕಳಪೆ ಗಾಳಿ ಬೀಸುತ್ತಿದ್ದು, ಇದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಿವಾರಣೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ರಾಜ್ಯ ಸರ್ಕಾರ ಹೊಸ ಪ್ಲಾನ್ ಮಾಡಿದೆ.
ದೆಹಲಿಯಾದ್ಯಂತ ಈ ಕಳಪೆ ಗಾಳಿಯು ಅನಾರೋಗ್ಯ ಭೀತಿ ಸೃಷ್ಟಿಸಿದೆ. ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಅವರಿಗೆಲ್ಲ ಅನುಕೂಲಕರ ವಾತಾವರಣ ಸೃಷ್ಟಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ದೆಹಲಿಯಲ್ಲಿ ಕೃತಕ ಮಳೆ ಸುರಿಸುವ ಮೂಲಕ ಕಳಪೆ ವಾಯುಗುಣಟ್ಟದ ದಾಖಲಾತಿಗೆ ಕಡಿವಾಣ ಹಾಕಲು ಸಜ್ಜಾಗಿದೆ.

ಸರ್ಕಾರದ ಮೂಲಗಳ ಮಾಹಿತಿ ಪ್ರಕಾರ, ಇದೇ ನವೆಂಬರ್ 20-21 ರಂದು ಕೃತಕ ಮಳೆ ಸುರಿಸಲು ಚಿಂತನೆ ನಡೆಸಿದೆ. ದೆಹಲಿ ಅಕ್ಕಪಕ್ಕದ ರಾಜ್ಯಗಳ ಹೊಲಗಳಲ್ಲಿ ತ್ಯಾಜ್ಯ ಸುಡುವುದು, ವಾಹನಗಳ ಹೊಗೆ ಸೂಸುವಿಕೆಯ ಕಾರಣಗಳಿಂದ ನವದೆಹಲಿಯಲ್ಲಿ ವಾಯು ಗುಣಮಟ್ಟದ ಸೂಚ್ಯಂಕ (AQI) ಕಳೆದ ಒಂದು ವಾರದಲ್ಲಿ ದಿನೇ ದಿನೆ ಕುಸಿತ ಕಂಡಿದೆ.
ಐಐಟಿ ತಂಡದ ಜತೆ ಸಚಿವರ ಸಭೆ
ಹದಗೆಟ್ಟಿರುವ ದೆಹಲಿ ವಾಯುಗುಣಮಟ್ಟ ಸುಧಾರಣೆಗಾಗಿ ಪರಿಸರ ಸಚಿವ ಗೋಪಾಲ್ ರೈ ಮತ್ತು ಹಣಕಾಸು ಸಚಿವ ಅತಿಶಿ ಅವರು ಐಐಟಿ ಕಾನ್ಪುರದ ತಂಡದೊಂದಿಗೆ ಸಭೆ ನಡೆಸಿದ್ದಾರೆ. ಉತ್ತಮ ಗಾಳಿಯ ದಾಖಲಾತಿ ಇಲ್ಲದ ಈ ಸಂದರ್ಭದಲ್ಲಿ ಕೃತಕ ಮಳೆ ಯೋಜನೆ ಸಹಾಯಕ್ಕೆ ಬರಬಹುದು ಎಂದು ನಾಯಕರು ಅಂದಾಜಿಸಿದ್ದಾರೆ.
ಈ ಸಂಬಂಧ ದೆಹಲಿ ಸರ್ಕಾರ ಐಐಟಿ ಅಧಿಕಾರಿಗಳಲ್ಲಿ ವಿವರವಾದ ಯೋಜನೆ ಕೇಳಿದೆ. ಸಲ್ಲಿಕೆ ಆಗುವ ಈ ಯೋಜನೆಯನ್ನು ನಾಳೆ ನವೆಂಬರ್ 10ರಂದು ಶುಕ್ರವಾರ ಸುಪ್ರೀಂ ಕೋರ್ಟ್ಗೆ ಸರ್ಕಾರವೇ ಸಲ್ಲಿಸಲಿದೆ. ಈಗಾಗಲೇ ದೆಹಲಿಯ ವಿಷಕಾರಿ ಗಾಳಿ ದಿನಗಳನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಕೋರಿ ಸಲ್ಲಿಸಲಾದ ಕೆಲವು ಅರ್ಜಿಗಳನ್ನು ಕೋರ್ಟ್ ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದೆ.

ನ್ಯಾಯಾಲಯ ಅನುಮತಿಸಿದರೆ ದೆಹಲಿ ಸರ್ಕಾರ ಕೃತಕ ಮಳೆ ಸುರಿಸುವ ಯೋಜನೆ ಜಾರಿಗೆ ತರಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಆದಷ್ಟು ಶೀಘ್ರವೇ ಸಿಗಲಿದೆ ಎನ್ನಲಾಗಿದೆ.
ಕೃತಕ ಮಳೆಗೆ ಶೇ.40 ಮೋಡ ಕವಿದಿರಬೇಕು
ಉದ್ದೇಶಿತ ಈ ಕೃತಕ ಮಳೆ ಸೃಷ್ಟಿಗೆ ಆಗಸದಲ್ಲಿ ಕನಿಷ್ಠ ಶೇಕಡಾ 40ರಷ್ಟು ಮೋಡ ಕವಿದ ವಾತಾವರಣ ಕಂಡು ಬರಬೇಕಿದೆ. ಈ ಬಗ್ಗೆ ಐಐಟಿ ತಂಡ ತಿಳಿಸಿದೆ. ನವೆಂಬರ್ 20-21 ರಂದು ಮೋಡ ಕವಿಯುವ ನಿರೀಕ್ಷೆ ಇದ್ದು, ಅಂದು ಈ ಕೃತಕ ಮಳೆ ಸುರಿಸುವ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಲಾಗುವುದು ಎಂದು ಪರಿಸರ ಸಚಿವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಈ ಯೋಜನೆಯ ಪ್ರಸ್ತಾಪಿಸಲಾಗುತ್ತದೆ. ಬಳಿಕ ನ್ಯಾಯಾಲಯವು ಪರಿಶೀಲಿಸಿ ಅನುಮತಿಸಿದರೆ ಕೇಂದ್ರ ಸರ್ಕಾರದ ಸಹಾಯದಲ್ಲಿ ಕೃತಕ ಮಳೆ ಸುರಿಸಲು ತಯಾರಿ ಮಾಡಲಿದ್ದೇವೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
'ಜನರ ಆರೋಗ್ಯ ಕೊಲೆ': ಕೋರ್ಟ್ ಕಳವಳ
ದೆಹಲಿಯಲ್ಲಿನ ವಾಯು ಮಾಲಿನ್ಯ ಗಮನಿಸಿದ್ದ ಸುಪ್ರೀಂ ಕೋರ್ಟ್ "ಜನರ ಆರೋಗ್ಯದ ಕೊಲೆ" ನಡುವೆ ರಾಜಕೀಯ ಯುದ್ಧವನ್ನು ಆಡಲು ಅನುಮತಿಸುವುದಿಲ್ಲ ಎಂದು ಎಚ್ಚರಿಸಿತ್ತು. ಜೊತೆಗೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳಿಗೆ ಜಮೀನುಗಳಲ್ಲಿ ತ್ಯಾಜ್ಯ ಸುಡುವುದನ್ನು ತಕ್ಷಣವೇ ನಿಲ್ಲಿಸುವಂತೆ ತಿಳಿಸಿತ್ತು.
ಇದಕ್ಕೆ ದೆಹಲಿ ರಾಜ್ಯ ಸರ್ಕಾರವೂ ಜವಾಬ್ದಾರಿ ಆಗಿದೆ. ಇಲ್ಲಿ ನಿತ್ಯ ಓಡಾಡುವ ಬಸ್ಗಳು ಸುಸ್ಥಿತಿಯಲ್ಲಿ ಇಲ್ಲ. ಇಂತಹ ವಾಹನಗಳಿಂದಲೂ ಪರಿಸರ ಕಲುಷಿತಗೊಳ್ಳುತ್ತಿದ್ದು, ಸರ್ಕಾರ ತಮ್ಮ ಸಮಸ್ಯೆಗಳತ್ತವೂ ಗಮನ ಹರಿಸುವಂತೆ ಕೋರ್ಟ್ ನಿರ್ದೇಶಿಸಿತ್ತು.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications