ವಿಮಾನ ಪ್ರಯಾಣಿಕರ ಗಮನಕ್ಕೆ: ದೆಹಲಿಯಲ್ಲಿ ದಟ್ಟ ಮಂಜು: ಕೆಲವು ವಿಮಾನಗಳ ಹಾರಾಟ ರದ್ದು, ವಿಳಂಬ
ನವದೆಹಲಿ: ದೆಹಲಿಯಲ್ಲಿ ಕಳಪೆ ಗಾಳಿ ದಾಖಲಾತಿ ಮತ್ತು ದಟ್ಟ ಮಂಜಿನ ವಾತಾವರಣ ಮುಂದುವರಿದಿದೆ. ರಾಜ್ಯ ಸರ್ಕಾರ ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಲ್ಲಿ ನಿರತವಾಗಿದೆ. ಇನ್ನೊಂದೆಡೆ ಅಗೋಚರತೆಯು ವಿಮಾನಯಾನ ಸೇವೆಗೆ ಅಡ್ಡಿ ಉಂಟು ಮಾಡಿದೆ. ಗುರುವಾರ ಒಂದೇ ದಿನ 22 ವಿಮಾನಗಳ ಹಾರಾಟ ರದ್ದಾಗಿದೆ. 80ಕ್ಕೂ ಅಧಿಕ ವಿಮಾನಗಳ ಸೇವೆಯಲ್ಲಿ ವಿಳಂಬವಾಗಿತು. ಸಂಕಷ್ಟದಲ್ಲಿರುವ ಪ್ರಯಾಣಿಕರೊಂದಿಗೆ ದೆಹಲಿ ಏರ್ಪೋರ್ಟ್ ನಿರಂತರ ಸಂಪರ್ಕದಲ್ಲಿತ್ತು.
ಬೆಳಗಿನ ಜಾವ ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿತ್ತು. ಬಹುತೇಕ ನಗರ ಮಂಜಿನಿಂದ ಮುಚ್ಚಿಕೊಂಡಿತ್ತು. ಗೋಚರತೆ ಕ್ಷಣಿಸಿತ್ತು. ಇದರಿಂದ ನಗರವಾಸಿಗಳು ಸಂಚಾರ ತೊಂದರೆ ಅನುಭವಿಸಬೇಕಾಯಿತು. ವಾಹನಗಳು, ರೈಲುಗಳ ಸಂಚಾರ ಅಸ್ತವ್ಯಸ್ತವಾಯಿತು. ಇದೇ ವೇಳೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ22 ವಿಮಾನಗಳ ಹಾರಾಟ ರದ್ದಾಯಿತು. ಹತ್ತಾರು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಯಿತು. ಇದರಿಂದಾಗಿ ಪ್ರಯಾಣಿಕರಿಗೆ ಸಂಕಷ್ಟ ಎದುರಾಯಿತು. ಪ್ರಯಾಣಿಕರು ಏರ್ಪೋರ್ಟ್ನಲ್ಲಿಯೇ ಕೆಲ ಗಂಟೆಗಳನ್ನು ಕಳೆಯಬೇಕಾಯಿತು.

ಚಳಿ, ಮಂಜು ಮುನ್ಸೂಚನೆ: ವಿಮಾನ ಸೇವೆ ವ್ಯತ್ಯಯ ಮುಂದುವರಿಕೆ
ಐಎಂಡಿ ಪ್ರಕಾರ, ಮುಂದಿನ ಮೂರು ನಾಲ್ಕು ದಿನ ದೆಹಲಿಯಲ್ಲಿ ಇದೇ ರೀತಿ ಮಂಜು, ತೀವ್ರ ಚಳಿ ಮುಂದುವರಿಯಲಿದೆ. ಹೀಗಾಗಿ ಎರಡು ಮೂರು ದಿನ ಬೆಳಗ್ಗೆ ವಿಮಾನ ಸೇವೆಯಲ್ಲಿ ವ್ಯತ್ಯಯ, ಸಂಚಾರ ರದ್ದು ಹಾಗೂ ಸೇವೆಯಲ್ಲಿನ ವಿಳಂಬವು ಸಹ ಮುಂದುವರಿಯುವ ಸಾಧ್ಯತೆ ಇದೆ. ಮಧ್ಯಾಹ್ನ ಹೊತ್ತಿಗೆ ಎಂದಿನಂತೆ ಸಹಜ ಸ್ಥಿತಿಗೆ ವಿಮಾನ ಸೇವೆ ಮರಳಿತು ಎಂದು ದೆಹಲಿ ಐಜಿಐ ಗುರುವಾರ ತಿಳಿಸಿತು.
ಕಾಲ ಕಾಲಕ್ಕೆ ವಿಮಾನಗಳ ಸಂಚಾರ ಕುರಿತು ಪ್ರಯಾಣಿಕರಿಗೆ ದೆಹಲಿ ಏರ್ಪೋರ್ಟ್ ಎಕ್ಸ್ ಹ್ಯಾಂಡಲ್ನಲ್ಲಿ (@DelhiAirport) ಸಲಹೆ, ಸೂಚನೆ ನೀಡುತ್ತಲೆ ಇದ್ದದ್ದು ಕಂಡು ಬಂತು. ಇದೇ ವಿಚಾರವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸಹ ಅಗತ್ಯ ಸಲಹೆಗಳನ್ನು ವಿಮಾನಯಾನ ಸಂಸ್ಥೆಗಳಿಗೆ ಕೊಟ್ಟಿದೆ. ಶುಕ್ರವಾರ ಬೆಳಗ್ಗೆ ಸಹ ದಟ್ಟ ಮಂಜು, ಕಡಿಮೆ ಗೋಚರತೆ ಸ್ಥಿತಿ ಉಂಟಾಗಬಹುದು. ವಿಮಾನಯಾನ ಸಂಸ್ಥೆಗಳು, ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಸಹ ನಿರಂತರ ಪರಸ್ಪರ ಸಂಪರ್ಕದಲ್ಲಿರಬೇಕು ಎಂದು ತಿಳಿಸಲಾಗಿದೆ.
ವಿಮಾನ ಸೇವೆಯ ಜೊತೆಗೆ ದೆಹಲಿ ಮಾರ್ಗದಲ್ಲಿ ಸಂಚರಿಸುವ ಹಾಗೂ ದೆಹಲಿ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸುವ ರೈಲುಗಳಲ್ಲಿ ಸೇವೆ ಇಂದು ವ್ಯತ್ಯಯವಾಯಿತು. ಅವುಗಳ ಪಟ್ಟಿ ಇಲ್ಲಿದೆ.
ವಿಳಂಬವಾದ ರೈಲುಗಳ ಪಟ್ಟಿ
1) ಹರಿದ್ವಾರ ಭಾವನಗರ ಎಕ್ಸ್ಪ್ರೆಸ್ ರೈಲು (19272 ) 1 ಗಂಟೆ 7 ನಿಮಿಷ ವಿಳಂಬ
2) ಪ್ರಯಾಗ್ರಾಜ್ ಎಕ್ಸ್ಪ್ರೆಸ್ ರೈಲು (12417) 4 ಗಂಟೆ 4 ನಿಮಿಷ ವಿಳಂಬ.
3) ರೇವಾ ಆನಂದ್ ವಿಹಾರ್ ಎಕ್ಸ್ಪ್ರೆಸ್ ರೈಲು (12427) 3 ಗಂಟೆ 57 ನಿಮಿಷ ವಿಳಂಬವಾಗಿದೆ.
4) ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (12427) 8 ಗಂಟೆ 52 ನಿಮಿಷ ತಡವಾಗಿ ಆಗಮಿಸಿತು.
5) ಗೀತಾ ಜಯಂತಿ ಎಕ್ಸ್ಪ್ರೆಸ್ ರೈಲು (11841) 1 ಗಂಟೆ 40 ನಿಮಿಷ ವಿಳಂಬವಾಯಿತು.
6) ನೌಚಂಡಿ ಎಕ್ಸ್ಪ್ರೆಸ್ ರೈಲು (14241) ಸುಮಾರು 5 ಗಂಟೆ ಸೇವೆಯಲ್ಲಿ ವ್ಯತ್ಯವಾಯಿತು.
7) ಆನಂದ್ ವಿಹಾರ್ ಟರ್ಮಿನಸ್ ಎಕ್ಸ್ಪ್ರೆಸ್ ರೈಲು (13257) ಸುಮಾರು 12 ಗಂಟೆ ತಡವಾಗಿ ಚಲಿಸಿದೆ.
8) ಸಪ್ತ ಕ್ರಾಂತಿ ಎಕ್ಸ್ಪ್ರೆಸ್ ರೈಲು (12557) 45 ನಿಮಿಷ ವಿಳಂಬ.
9) ನವದೆಹಲಿ ಎಸಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು (12429) ಸುಮಾರು 45 ನಿಮಿಷಗಳಷ್ಟು ವಿಳಂಬವಾಗಿದೆ.
10) ಪದ್ಮಾವತ್ ಎಕ್ಸ್ಪ್ರೆಸ್ ರೈಲು (14207) ಸುಮಾರು 4 ಗಂಟೆಗಳಷ್ಟು ತಡವಾಯಿತು.
-
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications