ಸಾಕು ಕುದುರೆ ಸಾವು: ಡೋಲು ಬಾರಿಸುತ್ತ ಶವಯಾತ್ರೆ ಮಾಡಿದ ಮಾಲೀಕ, ಗ್ರಾಮಸ್ಥರು ಭಾವುಕ
ಮನುಷ್ಯರ ಅಂತ್ಯಸಂಸ್ಕಾರದ ಬಗ್ಗೆ ಹಲವು ಸ್ವಾರಸ್ಯಕರ ಸುದ್ದಿಗಳನ್ನು ನೀವು ಓದಿರಬೇಕು. ಇಂದು ನಾವು ಪ್ರಾಣಿಯ ಅಂತ್ಯಕ್ರಿಯೆಯ ಸುದ್ದಿಯನ್ನು ತರುತ್ತಿದ್ದೇವೆ. ವಾಸ್ತವವಾಗಿ ಪ್ರಾಣಿ ಪ್ರೇಮಿ ವಿಶುಂದೇವ ಪ್ರಸಾದ್ ಅವರ ಕುದುರೆ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಬಳಿಕ ಇದ್ದಕ್ಕಿದ್ದಂತೆ ಕುದುರೆ ಸತ್ತಿತು. ಇದಾದ ಬಳಿಕ ನಡೆದ ಘಟನೆಯಿಂದಾಗಿ ಕಣ್ಣುಗಳು ತುಂಬಿ ಬಂದಿವೆ.
ಬಿಹಾರದ ನಳಂದಾ ಜಿಲ್ಲೆಯಲ್ಲಿ ಕುದುರೆಯ ಶವಯಾತ್ರೆಯ ವೀಡಿಯೋ ನೋಡಿದ ಜನ ಭಾವುಕರಾಗಿದ್ದಾರೆ. ಬಿಹಾರ ಷರೀಫ್ನ ಪಟುವಾನಾ ಗ್ರಾಮದ ನಿವಾಸಿ ವಿಶುಂದೇವ ಪ್ರಸಾದ್ ಅವರು ಪ್ರಾಣಿಗಳ ಮೇಲಿನ ಅಪಾರ ಪ್ರೀತಿಯಿಂದ ಸುದ್ದಿಯಾಗಿದ್ದಾರೆ. ಅವರಿಗೆ ಕುದುರೆ ಸಾಕಾಣಿಕೆ ಮಾಡುವುದು, ಸವಾರಿ ಮಾಡುವುದೆಂದರೆ ತುಂಬಾ ಇಷ್ಟ.

ಹೀಗಾಗಿ ವಿಶುಂದೇವ ಪ್ರಸಾದ್ ಅವರು ತಮ್ಮ ಹವ್ಯಾಸವನ್ನು ಪೂರೈಸಲು ಕುದುರೆಯನ್ನು ಖರೀದಿಸಿದರು. ನಂತರ ಅದನ್ನು ತಮ್ಮ ವೃತ್ತಿಗೆ ಅವರು ಬಳಸುತ್ತಿದ್ದರು. ಅವರು ಕುದುರೆಗಳ ಮೇಲೆ ಹಗಲು ಕಳೆಯುತ್ತಿದ್ದರು. ಕುಟುಂಬದ ಸದಸ್ಯತಂತೆ ಕುದುರೆ ಕೂಡ ಅವರಿಗೆ ಬಹಳ ಹತ್ತಿರವಾಗಿತ್ತು. ಕುದುರೆಯೂ ಮಾಲೀಕನಿಗೆ ಗುರು ಶಿಷ್ಯನಂತಿತ್ತು.
ಕುದುರೆಯು ತನ್ನ ಯಜಮಾನನ ಪ್ರತಿಯೊಂದು ಮಾತನ್ನೂ ಪಾಲಿಸಲು ಪ್ರಾರಂಭಿಸಿತು. ಕ್ರಮೇಣ ಯಜಮಾನ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಹೆಚ್ಚಾಗತೊಡಗಿತು. ಇದು ಅದೆಷ್ಟು ಸುದ್ದಿಯಾಗಿತ್ತು ಅಂದರೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಸೋನ್ಪುರ ಮೇಳದಿಂದ ವಿಶುಂದೇವ ಪ್ರಸಾದ್ ಕುದುರೆಯನ್ನು ಖರೀದಿಸಿದ್ದರು.
ಆದರೆ ಕೆಲವು ದಿನಗಳಿಂದ ಕುದುರೆಯ ಆರೋಗ್ಯ ಸರಿಯಿರಲಿಲ್ಲ, ಇದ್ದಕ್ಕಿದ್ದಂತೆ ಅದು ಸತ್ತಿತು. ಕುದುರೆಯ ಮರಣದ ನಂತರ, ವಿಶುಂದೇವ ಪ್ರಸಾದ್ ಅವರು ಕುಟುಂಬದ ಸದಸ್ಯರನ್ನು ಕಳೆದುಕೊಂಡಂತೆ ದುಖ:ವನ್ನು ವ್ಯಕ್ತಪಡಿಸಿದ್ದಾರೆ. ಕುದುರೆ ಗಾಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಅದರ ಅಂತ್ಯಕ್ರಿಯೆ ಸ್ಥಳಕ್ಕೆ ಕರೆದೊಯ್ದಿದ್ದಾರೆ. ವಿಶುಂದೇವ ಪ್ರಸಾದ್ ಅವರು ಕುದುರೆ ಶವವನ್ನು ತನ್ನ ಸ್ಥಳೀಯ ಹಳ್ಳಿಯಿಂದ ಬಂಡಿಯಲ್ಲಿ ಸುಮಾರು ಕಿಲೋ ಮೀಟರ್ ಮೆರವಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಇನ್ನೂ ಅಲ್ಲಿ ಕುದುರೆಯನ್ನು ಬುಲ್ಡೋಜರ್ನಿಂದ ಹೂಳಲಾಯಿತು. ಕುದುರೆಯ ಶವಯಾತ್ರೆಯಲ್ಲಿ ಯಜಮಾನನಷ್ಟೇ ಅಲ್ಲ ಗ್ರಾಮದ ಜನರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪಶುಪಾಲಕ ವಿಶುಂದೇವ ಪ್ರಸಾದ್ ಅವರು ಕುದುರೆ ಸಾಕಾಣಿಕೆಯನ್ನು ತುಂಬಾ ಇಷ್ಟಪಡುತ್ತಾರೆ. ಹಲವು ವರ್ಷಗಳ ಹಿಂದೆ ಅವರು ತಮ್ಮ ಹವ್ಯಾಸವನ್ನು ಪೂರೈಸಲು ಸೋನ್ಪುರದಿಂದ ಕುದುರೆಯನ್ನು ಖರೀದಿಸಿದರು. ಕುದುರೆಯೊಂದಿಗೆ ಬಹಳ ಆಳವಾದ ಸ್ನೇಹ ಬೇರೂರಿತ್ತು. ಗ್ರಾಮದ ಮೂಲಕ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಮಾಲೀಕರು ಸಾಗಿ ಸ್ಥಳೀಯ ಸ್ಮಶಾನದಲ್ಲಿ ಸಮಾಧಿ ಮಾಡಿದರು.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications