100ರ ನಕಲಿ ನೋಟು ಮುದ್ರಿಸಲು ದಾವೂದ್ ಗ್ಯಾಂಗ್ ಆಲೋಚನೆ!
ಗುಪ್ತಚರ ಇಲಾಖೆ ಅಧಿಕಾರಿಗಳ ಬಂದಿರುವ ಹೊಸ ಮಾಹಿತಿ ಪ್ರಕಾರ, ಡಿ ಗ್ಯಾಂಗ್ ನ ಒಳಗೆ ನೋಟು ರದ್ದು ವಿಚಾರದ ಚರ್ಚೆಯೇ ಆಗುತ್ತಿದ್ದು, ತಮ್ಮ ದಂಧೆ ಹೇಗೆ ನಡೆಸಬೇಕು ಎಂಬ ಚಿಂತೆ ಹತ್ತಿದೆಯಂತೆ.
ಬೆಂಗಳೂರು, ನವೆಂಬರ್ 10: ದಾವೂದ್ ಇಬ್ರಾಹಿಂ ಗುಂಪು 100 ರುಪಾಯಿಯ ನಕಲಿ ನೋಟುಗಳ ಮುದ್ರಣಕ್ಕೆ ಆಲೋಚಿಸುತ್ತಿದೆಯಾ? 500 ಹಾಗೂ 1000 ರುಪಾಯಿ ನೋಟುಗಳನ್ನು ಭಾರತದಲ್ಲಿ ರದ್ದು ಮಾಡಿದ ಮೇಲೆ ದಾವೂದ್ ದಂಧೆಗೆ ಭಾರಿ ಹೊಡೆತ ಬಿದ್ದಿದೆ. ಗುಪ್ತಚರ ಇಲಾಖೆ ಅಧಿಕಾರಿಗಳ ಅಂದಾಜಿನ ಪ್ರಕಾರ, ದಾವೂದ್ ವ್ಯವಹಾರಗಳಿಗೆ ಆಗಿರುವ ನಷ್ಟ ಐದು ಸಾವಿರ ಕೋಟಿ ರುಪಾಯಿ.
ಗುಪ್ತಚರ ಇಲಾಖೆ ಅಧಿಕಾರಿಗಳ ಬಂದಿರುವ ಹೊಸ ಮಾಹಿತಿ ಪ್ರಕಾರ, ಡಿ ಗ್ಯಾಂಗ್ ನ ಒಳಗೆ ನೋಟು ರದ್ದು ವಿಚಾರದ ಚರ್ಚೆಯೇ ಆಗುತ್ತಿದ್ದು, ತಮ್ಮ ದಂಧೆ ಹೇಗೆ ನಡೆಸಬೇಕು ಎಂಬ ಚಿಂತೆ ಹತ್ತಿದೆಯಂತೆ. ಸದ್ಯಕ್ಕೆ ನೂರು ರುಪಾಯಿ ನೋಟು ಇನ್ನೂ ಚಾಲ್ತಿಯಲ್ಲಿ ಇರುವುದರಿಂದ ಅದೇ ಮೌಲ್ಯದ ನೋಟನ್ನು ನಕಲಿ ಮಾಡಿದರೆ ಹೇಗೆ ಅಂತ ಕೂಡ ಚರ್ಚೆ ಜಾರಿಯಲ್ಲಿದೆ.[ನೋಟು ರದ್ದು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಕೇಂದ್ರದಿಂದ ಕೇವಿಯಟ್]

ಆದ್ದರಿಂದ ನೂರು ರುಪಾಯಿಯ ನಕಲಿ ನೋಟುಗಳು ಬರಬಹುದು, ಹುಷಾರಾಗಿರಿ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಆದರೆ ಇದರಿಂದ ತುಂಬ ಲಾಭವೇನೂ ಸಾಧ್ಯವಿಲ್ಲ. ಆದ್ದರಿಂದ ತುಂಬ ದಿನ ನಡೆಸಿಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಜೊತೆಗೆ, 500, 1000 ಹಾಗೂ 100 ರುಪಾಯಿ ನಕಲಿ ನೋಟಿನ ತಯಾರಿಕೆಗೆ ಒಂದೇ ಖರ್ಚು ಆಗುತ್ತದೆ.
ಆದ್ದರಿಂದ ತುಂಬ ಒಳ್ಳೆ ದಂಧೆಯಾಗಿ ಉಳಿಯಲ್ಲ. ಈ ಐಡಿಯಾವನ್ನು ದಾವೂದ್ ಗ್ಯಾಂಗ್ ಕೈ ಬಿಡಬಹುದು ಎನ್ನುತ್ತಾರೆ ಅಧಿಕಾರಿಗಳು. ಪ್ರತಿ ನಾಲ್ಕು ನಕಲಿ ನೋಟಿಗೆ ಒಂದು ಸಾಚಾ ನೋಟು ಗ್ಯಾಂಗ್ ಗೆ ದೊರೆಯುತ್ತದೆ. ಈ ದಂಧೆ 4:1 ಪ್ರಮಾಣದಲ್ಲಿ ನಡೆಯುವಂಥದ್ದು. ಸಾವಿರ ರುಪಾಯಿ ನೋಟು ನಕಲು ಮಾಡಿದಾಗ ಡಿ ಗ್ಯಾಂಗ್ ದಂಧೆ ಸಕತ್ ಆಗಿ ಬೆಳೆದಿತ್ತು.[ನೋಟ್ ಬ್ಯಾನ್ ಬೆನ್ನಲ್ಲೇ ಕೇಂದ್ರದ ಮತ್ತೊಂದು ಮಹತ್ವದ ಆದೇಶ]
ಅದು ಯಾವ ಪರಿಯಲ್ಲಿ ನಕಲಿ ನೋಟು ಮಾಡುತ್ತಿದ್ದರೆಂದರೆ ಅಸಲಿ ಹಾಗೂ ನಕಲಿ ನೋಟನ್ನು ಅಕ್ಕಪಕ್ಕ ಇಟ್ಟರೆ ಯಾವುದು ಸಾಚಾ ಅಂತ ಹೇಳೋದೇ ಸಾಧ್ಯವಿರುತ್ತಿರಲಿಲ್ಲ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications