ಕೋವಿಡ್ ಲಸಿಕೆ ಸರ್ಕಾರಗಳ ಕೈ ಕಚ್ಚಲಾರಂಭಿಸಿದಂತಿದೆ: ರಾಜಾರಾಂ ತಲ್ಲೂರು ಬರಹ
ಕೋವಿಡ್ ಲಸಿಕೆ ಸರ್ಕಾರಗಳ ಕೈ ಕಚ್ಚಲಾರಂಭಿಸಿದಂತಿದೆ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಇಂಗ್ಲಂಡಿಗಿಂತ ಕರ್ನಾಟಕವು ಗಾತ್ರದಲ್ಲಿ ಒಂದೂವರೆ ಪಾಲು ದೊಡ್ಡದು. ಅಷ್ಟು ಸಣ್ಣ ದೇಶ ಇಂಗ್ಲಂಡಿನಲ್ಲಿ ಡಿಸೆಂಬರ್ 2025ರ ಹೊತ್ತಿಗೆ 22,819 ಮಂದಿ, ತಮಗೆ ಕೋವಿಡ್ ಲಸಿಕೆಯಿಂದ ಗಂಭೀರ ಹಾನಿ/ಜೀವಹಾನಿ ಆಗಿರುವ ಬಗ್ಗೆ ಪರಿಹಾರ ನೀಡಬೇಕೆಂದು ಕೋರಿ ಅಲ್ಲಿನ ಸರ್ಕಾರದ ಮುಂದೆ ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಗ್ಲಂಡಿನ ದಿ ಟೆಲಿಗ್ರಾಫ್ ನಿನ್ನೆ ವರದಿ ಮಾಡಿದೆ.

ಇಂಗ್ಲಂಡ್ ಸರ್ಕಾರ ಅಲ್ಲಿ ಎಷ್ಟು ಇಕ್ಕಟ್ಟಿಗೆ ಸಿಲುಕಿದೆ ಎಂದರೆ, ಹೆಚ್ಚು ಅರ್ಜಿಗಳು ಬರಲಾರವೆಂದು ಅರ್ಜಿಗಳ ಸಂಸ್ಕರಣೆಗೆ ಒಂದು ಕಂಪನಿಗೆ (ಕ್ರಾಫರ್ಡ್ ಅಂಡ್ ಕಂಪನಿ) ನೀದುವುದಾಗಿ ಒಪ್ಪಿಕೊಂಡಿದ್ದ 60ಲಕ್ಷ ಪೌಂಡ್ ಜಾಗದಲ್ಲಿ ಈಗ ಐದು ಕೋಟಿ ಪೌಂಡ್ ಹಣ ಅವರಿಗೆ ತೆರಬೇಕಾಗಿದೆ. ಇದು ಸರ್ಕಾರ ಊಹಿಸಿದ್ದಕ್ಕಿಂತ ಎಂಟು ಪಟ್ಟು ಹೆಚ್ಚು. ಹಾಗಾಗಿ, ಈಗ ಆ ಗುತ್ತಿಗೆಯನ್ನೇ ಇನ್ನೊಂದು ಕಂಪನಿಗೆ (ಮ್ಯಾಕ್ಸಿಮಸ್ ಯುಕೆ ಸರ್ವೀಸಸ್) ನೀಡಲು ತೀರ್ಮಾನಿಸಲಾಗಿದೆಯಂತೆ.
ನಮಗೆ ಭಾರತೀಯರಿಗೆ ಗಮನಾರ್ಹ ಸಂಗತಿ ಏನೆಂದರೆ, ಈ ಪರಿಹಾರ ಕೋರಿ ಬಂದಿರುವ ಅರ್ಜಿಗಳಲ್ಲಿ ಬಹುಪಾಲು ಆಸ್ಟ್ರಜೆನೆಕಾ ಲಸಿಕೆ ಪಡೆದವರದು. ಅರ್ಥಾತ್, ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ (SII) ಸಿದ್ಧಪಡಿಸಿರುವ ಲಸಿಕೆ. ಭಾರತದ ಈ ಲಸಿಕೆ ಕೂಡ ಆಸ್ಟ್ರಜೆನೆಕಾ ಲೈಸನ್ಸಿನಡಿ ಸಿದ್ಧಗೊಂಡಂತಹದು.
UKಯಲ್ಲಿ ಈ ಬೆಳವಣಿಗೆಗಳಾಗುತ್ತಿರುವ ಹಿನ್ನೆಲೆಯಲ್ಲೋ ಗೊತ್ತಿಲ್ಲ, ಭಾರತದಲ್ಲಿ ಸರ್ಕಾರವು ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅಫಿದಾವಿತ್ನಲ್ಲಿ, ಕೋವಿಡ್ ಲಸಿಕೆ ಎಂದೂ ಕಡ್ಡಾಯ ಆಗಿರಲಿಲ್ಲ, ಅದು "ವಲಂಟರಿ" ಆಗಿತ್ತು ಮತ್ತು ಹಾಗಾಗಿ ಅಡ್ಡಪರಿಣಾಮಗಳಿಗೆ ತಾನು ಯಾವುದೇ ರೀತಿಯಲ್ಲಿ ಹೊಣೆ ಅಲ್ಲ ಎಂದು ಹೇಳಿಕೊಂಡಿರುವುದಾಗಿ ಪತ್ರಿಕೆಗಳಲ್ಲಿ ವರದಿ ಆಗಿದೆ.
ಇಡೀ ಭಾರತದಲ್ಲಿ ಸರ್ಕಾರಿ ವ್ಯವಸ್ಥೆಗೆ (National AEFI Committee) 2023ರ ತನಕ ವರದಿ ಆಗಿರುವ, ಅದು ಪರಿಶೀಲಿಸಿರುವ ಗಂಭೀರ ಅಡ್ಡಪರಿಣಾಮಗಳ ಸಂಖ್ಯೆ ಕೇವಲ 2708 ಅಂತೆ. ಅದರಲ್ಲಿ ಸಾವಿನ ಪ್ರಮಾಣ ಕೇವಲ 1114 ಅಂತೆ. (ಆಧಾರ: https://pubmed.ncbi.nlm.nih.gov/40034661/). ಅಷ್ಟು ಸಣ್ಣ ದೇಶ ಇಂಗ್ಲಂಡಿನ ಅಡ್ಡಪರಿಣಾಮಗಳ ಗಾತ್ರಕ್ಕೂ, ಅದೇ ಲಸಿಕೆ ಪಡೆದ ಭಾರತದ ಅಡ್ಡಪರಿಣಾಮಗಳ ಪ್ರಮಾಣಕ್ಕೂ ಹೋಲಿಕೆ, ಸಾಧ್ಯತೆಗಳ ಅಧ್ಯಯನ ಆಗಬೇಡವೆ ?
-
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications