ಬೆಂಗಳೂರು, ಮೇ 26: ಭಾರತದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 2,323 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಭಾರತದಲ್ಲಿ ಇಂದು ಬೆಳಗ್ಗೆಯವರೆಗೆ ಇದೂವರೆಗೆ ದಾಖಲಾದ ಒಟ್ಟು ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 4,31,145 ತಲುಪಿದೆ. ಹಾಗೆಯೇ ಬಹಳಷ್ಟು ಮಂದಿ ಸೋಂಕಿತರು ಚೇರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 48 ಕಡಿಮೆ ಆಗಿದೆ. ಈಗ ಭಾರತದಲ್ಲಿ ಆ್ಯಕ್ವಿವ್ ಕೇಸ್ಗಳ ಸಂಖ್ಯೆ 14996 ಇದೆ.
ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 25 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟಾರೆ ಸಾವು 5,24,348 ಆಗಿದೆ. ಭಾರತದಲ್ಲಿ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 0.03 ಮಾತ್ರ ಇದೆ. ಅಂದರೆ ದಾಖಲಾದ ಪ್ರತೀ 10 ಸಾವಿರ ಪ್ರಕರಣಗಳಲ್ಲಿ ಸದ್ಯ ಸಕ್ರಿಯವಾಗಿರುವುವು ಕೇವಲ ಮೂರು ಮಾತ್ರ. ಗುಣಮುಖರಾಗುವವರ ಸಂಖ್ಯೆ ಶೇ. 98.75 ಇದೆ. ಇದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯಾಗಿದೆ.
ರಾಜ್ಯ, ದೇಶ, ವಿದೇಶಗಳ ಕೋವಿಡ್ ಕುರಿತು ಸುದ್ದಿಗಳ ಸಂಕ್ಷಿಪ್ತ ಚಿತ್ರಣ ಈ ಪುಟದಲ್ಲಿ ಲಭ್ಯವಿದೆ.
Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada
Newest FirstOldest First
2:09 PM, 26 May
ಜರ್ಮನಿಯಲ್ಲಿ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ
ಜರ್ಮನಿ Covaxin COVID19 ಲಸಿಕೆಯನ್ನು ಅನುಮೋದಿಸಿದೆ. ಫೆಡರಲ್ ಕ್ಯಾಬಿನೆಟ್ ನಿರ್ಬಂಧಗಳನ್ನು ಸಡಿಲಿಸುವುದರಿಂದ ಪ್ರವೇಶಿಸುವವರಿಗೆ ಇನ್ನು ಮುಂದೆ ವ್ಯಾಕ್ಸಿನೇಷನ್ ಪುರಾವೆಗಳ ಅಗತ್ಯವಿರುವುದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.
9:37 AM, 23 May
ಭಾರತದಲ್ಲಿ 2022 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 2099 ಜನರು ಗುಣಮುಖಗೊಂಡಿದ್ದಾರೆ, 46 ಜನರು ಮೃತಪಟ್ಟಿದ್ದಾರೆ.
5:10 PM, 21 May
ಮಣಿಪುರದಲ್ಲಿ ಶೂನ್ಯ
ಮಣಿಪುರ ರಾಜ್ಯದಲ್ಲಿ ಕೋವಿಡ್ನಿಂದ ಸಂಪೂರ್ಣ ಮುಕ್ತವಾಗಿದೆ. ನಿನ್ನೆಯವರೆಗೂ ಸೋಂಕಿತರಾಗಿದ್ದ ಮೂವರು ವ್ಯಕ್ತಿಗಳು ಇಂದು ಶನಿವಾರ ಗುಣಮುಖರಾಗಿದ್ದಾರೆ. ಇದರೊಂದಿಗೆ ಈ ಈಶಾನ್ಯ ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಸೊನ್ನೆಗೆ ಇಳಿದಿದೆ. ಕಳೆದ ೨೬ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಮಣಿಪುರ ರಾಜ್ಯದಲ್ಲಿ ಝೀರೋ ಆ್ಯಕ್ಟಿವ್ ಕೇಸ್ ಇರುವುದು. ನಿನ್ನೆ ಶುಕ್ರವಾರ ೭೧ ಮಂದಿಯ ಸ್ಯಾಂಪಲ್ಗಳನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಯಾವುದೂ ಪಾಸಿಟಿವ್ ಬಂದಿಲ್ಲ ಎನ್ನಲಾಗಿದೆ.
11:28 AM, 21 May
ಸೌತ್ ಆಫ್ರಿಕಾದಿಂದ ಹೊಸ ರೂಪಾಂತರಿ
ದಕ್ಷಿಣ ಆಫ್ರಿಕಾದಿಂದ ಸದ್ಯದಲ್ಲೇ ಹೊಸ ರೂಪಾಂತರಿ ಕೋವಿಡ್ ವೈರಸ್ ವ್ಯಾಪಿಸುವ ಸಾಧ್ಯತೆ ದಟ್ಟವಾಗಿದೆ. ಇದು ಹಿಂದಿನ ರೂಪಾಂತರಿ ವೈರಸ್ಗಳಿಗಿಂತಲೂ ಅತಿ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಳೆದ ನಾಲ್ಕು ವಾರದಲ್ಲಿ ಆಫ್ರಿಕಾದ ಮಧ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ಹೊಸ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚುತ್ತಿದೆ.
11:24 AM, 21 May
ಈವರೆಗೆ ನೀಡಲಾಗಿರುವ ಕೋವಿಡ್ ಲಸಿಕೆಗಳ ಪ್ರಮಾಣ 192.12 ಕೋಟಿ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
11:21 AM, 21 May
ಕಳೆದ 24 ಗಂಟೆಯಲ್ಲಿ ಸುಮಾರು ಐದು ಲಕ್ಷದಷ್ಟು ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಈವರೆಗೆ ಮಾಡಲಾಗಿರುವ ಪರೀಕ್ಷೆಗಳ ಸಂಖ್ಯೆ 84.63 ಕೋಟಿ ದಾಟಿದಂತಾಗಿದೆ.
11:19 AM, 21 May
ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 25 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟಾರೆ ಸಾವು 5,24,348 ಆಗಿದೆ. ಭಾರತದಲ್ಲಿ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 0.03 ಮಾತ್ರ ಇದೆ. ಅಂದರೆ ದಾಖಲಾದ ಪ್ರತೀ 10 ಸಾವಿರ ಪ್ರಕರಣಗಳಲ್ಲಿ ಸದ್ಯ ಸಕ್ರಿಯವಾಗಿರುವುವು ಕೇವಲ ಮೂರು ಮಾತ್ರ. ಗುಣಮುಖರಾಗುವವರ ಸಂಖ್ಯೆ ಶೇ. 98.75 ಇದೆ. ಇದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯಾಗಿದೆ.
11:19 AM, 21 May
ಮೇ 20-21ರ ಪ್ರಕರಣಗಳು
ಭಾರತದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 2,323 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಭಾರತದಲ್ಲಿ ಇಂದು ಬೆಳಗ್ಗೆಯವರೆಗೆ ಇದೂವರೆಗೆ ದಾಖಲಾದ ಒಟ್ಟು ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 4,31,145 ತಲುಪಿದೆ. ಹಾಗೆಯೇ ಬಹಳಷ್ಟು ಮಂದಿ ಸೋಂಕಿತರು ಚೇರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 48 ಕಡಿಮೆ ಆಗಿದೆ. ಈಗ ಭಾರತದಲ್ಲಿ ಆ್ಯಕ್ವಿವ್ ಕೇಸ್ಗಳ ಸಂಖ್ಯೆ 14996 ಇದೆ.
ಕರ್ನಾಟಕದಲ್ಲಿ ಮೇ 14ರಂದು ಶುಕ್ರವಾರ 103 ಕೋವಿಡ್ 19 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ ಬೆಂಗಳೂರಿನಲ್ಲಿ 96 ಪ್ರಕರಣಗಳು ಇವೆ. ರಾಜ್ಯದ ಪಾಸಿಟಿವಿಟಿ ದರ ಶೇ 0.56 ಇದೆ. ರಾಜ್ಯದಲ್ಲಿ ಒಟ್ಟಾರೆ 1868 ಸಕ್ರಿಯ ಪ್ರಕರಣಗಳು ಇದ್ದು, ಇದರಲ್ಲಿ 1792 ಪ್ರಕರಣಗಳು ಬೆಂಗಳೂರಿನಲ್ಲಿಯೇ ಇವೆ. ಕಳೆದ 24 ಗಂಟೆಗಳಲ್ಲಿ 19,045 ಜನರಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಮೇ 13ರಂದು ಶುಕ್ರವಾರ 156 ಕೋವಿಡ್ 19 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ ಬೆಂಗಳೂರಿನಲ್ಲಿ 143 ಪ್ರಕರಣಗಳು ಇವೆ. ರಾಜ್ಯದ ಪಾಸಿಟಿವಿಟಿ ದರ ಶೇ 0.80 ಇದೆ. ರಾಜ್ಯದಲ್ಲಿ ಒಟ್ಟಾರೆ 1884 ಸಕ್ರಿಯ ಪ್ರಕರಣಗಳು ಇದ್ದು, ಇದರಲ್ಲಿ 1793 ಪ್ರಕರಣಗಳು ಬೆಂಗಳೂರಿನಲ್ಲಿಯೇ ಇವೆ. ಕಳೆದ 24 ಗಂಟೆಗಳಲ್ಲಿ 19,500 ಜನರಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 191 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,854ಕ್ಕೆ ಏರಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಕೂ ಮಾಡಿದ್ದಾರೆ.
ಈ ಅವಧಿಯಲ್ಲಿ ಕೋವಿಡ್ನಿಂದ ಯಾರು ಮೃತಪಟ್ಟಿದ್ದಾರೆ. 138 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, 11,380 ಕೋವಿಡ್ ಟೆಸ್ಟ್ ನಡೆಸಲಾಗಿದೆ.
ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇಕಡ 1.61ರಷ್ಟಿದ್ದು, ಬೆಂಗಳೂರು ನಗರದಲ್ಲಿ 171 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,763 ಇದೆ.
10:59 AM, 6 May
ಕಳೆದ 24 ಗಂಟೆಗಳಲ್ಲಿ 3545 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ. ದೇಶದಲ್ಲಿ ಸದ್ಯ ಸಕ್ರಿಯ ಪ್ರಕಣಗಳ ಸಂಖ್ಯೆ 19,688 ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೋವಡ್ನಿಂದಾಗಿ ದೇಶದಲ್ಲಿ 27 ಮಂದಿ ಮೃತಪಟ್ಟಿದ್ದಾರೆ.
11:28 PM, 4 May
ಜಗತ್ತಿನಲ್ಲಿ ಈವರೆಗೂ 514,760,016 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,266,165 ಮಂದಿ ಪ್ರಾಣ ಬಿಟ್ಟಿದ್ದಾರೆ. 469,488,566 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 39,005,285 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
11:27 PM, 4 May
ಕರ್ನಾಟಕದಲ್ಲಿ ಒಂದೇ ದಿನ 148 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1801ಕ್ಕೆ ಏರಿಕೆಯಾಗಿದೆ.
12:17 AM, 4 May
ಕಳೆದ ಏಪ್ರಿಲ್ 28ರ 2022ರ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಒಟ್ಟು 5,23,693 ಜನರು ಪ್ರಾಣ ಬಿಟ್ಟಿದ್ದಾರೆ ಎಂದು CRS ವರದಿ ಮಾಡಿದೆ
7:28 PM, 3 May
ಕರ್ನಾಟಕದಲ್ಲಿ ಒಂದೇ ದಿನ 107 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1815ಕ್ಕೆ ಏರಿಕೆಯಾಗಿದೆ.
12:51 PM, 3 May
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2568 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 4,30,84,913ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,137ಕ್ಕೆ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 363 ಪ್ರಕರಣಗಳು ಕಡಿಮೆಯಾಗಿವೆ.
9:36 AM, 2 May
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,157 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಾಗಿವೆ. ಇದು ನಿನ್ನೆಗಿಂತ 5% ಕಡಿಮೆಯಾಗಿದೆ. ಇದು ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 4,30,82,345ಕ್ಕೆ ಏರಿಕೆಯಾಗಿದೆ. ಭಾರತದ ಸಕ್ರಿಯ ಪ್ರಕರಣ 19,500 ಆಗಿದ್ದು, ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳು 408ರಷ್ಟು ಹೆಚ್ಚಾಗಿದೆ.
10:06 PM, 1 May
ಕೋವಿಡ್ ಸೋಂಕಿಗೆ ಒಬ್ಬರು ಬಲಿಯಾಗಿದ್ದು, ಈವರೆಗೆ ರಾಜ್ಯದಲ್ಲಿ ಸೋಂಕಿನಿಂದ 40060 ಮಂದಿ ಸಾವನ್ನಪ್ಪಿದ್ದಾರೆ.
10:05 PM, 1 May
ರಾಜ್ಯದಲ್ಲಿ ಇಂದು 108 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ಚೇತರಿಕೆ ಪ್ರಮಾಣ 3905844 ಆಗಿದೆ.
10:01 PM, 1 May
ಕರ್ನಾಟಕ ರಾಜ್ಯದಲ್ಲಿ ಇಂದು 104 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3947726ಕ್ಕೆ ಏರಿಕೆ ಕಂಡಿದೆ.
9:42 AM, 29 Apr
ಕೇಂದ್ರ ಆರೋಗ್ಯ ಸಚಿವಾಲಯದ ಹೆಲ್ತ್ ಬುಲೆಟಿನ್ ಪ್ರಕಾರ ಭಾರತದಲ್ಲಿ 24 ಗಂಟೆಯಲ್ಲಿ 3,377 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 2,496 ಜನರು ಗುಣಮುಖಗೊಂಡಿದ್ದಾರೆ ಮತ್ತು 60 ಜನರು ಮೃತಪಟ್ಟಿದ್ದಾರೆ. ಭಾರತದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 17,801.
8:45 AM, 29 Apr
ಮಿಜೋರಾಂನಲ್ಲಿ ಒಂದೇ ದಿನ 99 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 744ಕ್ಕೆ ಏರಿಕೆಯಾಗಿದೆ.
9:52 PM, 28 Apr
ಕರ್ನಾಟಕದಲ್ಲಿ 154 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿಯೇ 142 ಸೋಂಕಿತರು ದೃಢಪಟ್ಟಿದ್ದಾರೆ. ಇಂದು 116 ಸೋಂಕಿತರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು: 1,751, ಬೆಂಗಳೂರಿನಲ್ಲಿ 1,681.
9:48 PM, 28 Apr
ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 1490 ಹೊಸ ಕೋವಿಡ್- 19 ಪ್ರಕರಣಗಳು, 1070 ಚೇತರಿಕೆ ಮತ್ತು 2 ಸಾವುಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳು 5250.
9:55 AM, 28 Apr
ಭಾರತದಲ್ಲಿ 4 ಗಂಟೆಗಳ ಅವಧಿಯಲ್ಲಿ 3303 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.
2,563 ಜನರು ಗುಣಮುಖಗೊಂಡಿದ್ದು, ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 16,980 ಆಗಿದೆ.
9:20 AM, 27 Apr
ಭಾರತದಲ್ಲಿ ಒಂದೇ ದಿನ 2927 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 2252 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 16,279ಕ್ಕೆ ಏರಿಕೆಯಾಗಿದೆ.
7:04 AM, 27 Apr
ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಹಾಗೂ ಇನ್ನೂ ಕೆಲವು ಸಚಿವರು ಹಾಜರಿರಲಿದ್ದಾರೆ.
7:03 AM, 27 Apr
ದೇಶದಲ್ಲಿ ಕೊರೊನಾವೈರಸ್ ಏರಿಕೆ ನಡುವೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ಪರಿಶೀಲನಾ ಸಭೆಯಲ್ಲಿ ಆಯಾ ರಾಜ್ಯಗಳಲ್ಲಿನ ಕೋವಿಡ್-19 ಪರಿಸ್ಥಿತಿ ಹಾಗೂ ಅಂಕಿ-ಅಂಶಗಳ ಕುರಿತು ಚರ್ಚೆ ನಡೆಯಲಿದೆ.
9:42 AM, 26 Apr
ಭಾರತದಲ್ಲಿ 24 ಗಂಟೆಯಲ್ಲಿ 2,483 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 1,970 ಜನರು ಗುಣಮುಖಗೊಂಡಿದ್ದಾರೆ.
READ MORE
4:10 PM, 3 Mar
ಮೋದಿ ಟ್ವೀಟ್
ಕೊರೊನಾ ವೈರಸ್ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಯಾರೂ ಕೂಡ ಕೊರೊನಾ ವೈರಸ್ (ಕೊವಿಡ್ 19)ಗೆ ಭಯ ಪಡಬೇಕಿಲ್ಲ. ಧೈರ್ಯವಾಗಿರಿ ಎಂದು ನಾಡಿನ ಜನತೆಗೆ ಸಾಮಾಧಾನ ಹೇಳಿದ್ದಾರೆ.
4:11 PM, 3 Mar
ಕೊರೊನಾ ವೈರಸ್ನಿಂದ ದೂರವಿರುವುದು ಹೇಗೆ ಎನ್ನುವ ಕೆಲವು ಟಿಪ್ಸ್ ಗಳನ್ನು ಕೂಡ ನೀಡಿದ್ದಾರೆ. ನೀವು ಕೊರೊನಾದಿಂದ ದೂರವಿರಬೇಕಾದರೆ ಪದೇ ಪದೇ ನಿಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿರುಬೇಕು.
9:59 AM, 6 Mar
ಗುರುವಾರ ಚೀನಾದಲ್ಲಿ ಕೊರೊನಾ ವೈರಸ್ ನಿಂದ 30 ಮಂದಿ ಸಾವು, 143 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ರಾಷ್ಟ್ರೀಯ ಆರೋಗ್ಯ ಆಯೋಗದಿಂದ ಮಾಹಿತಿ ಬಹಿರಂಗ.
10:14 AM, 6 Mar
ಭಾರತೀಯ ಷೇರು ಮಾರುಕಟ್ಟೆಗೂ ತಟ್ಟಿದ ಕೊರೊನಾ ವೈರಸ್ ಬಿಸಿ. ಶುಕ್ರವಾರ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಭಾರಿ ಕುಸಿತ. 1250 ಅಂಕಗಳ ಕುಸಿತ ಕಂಡ ಮುಂಬೈ ಷೇರು ಮಾರುಕಟ್ಟೆ.
10:40 AM, 6 Mar
Jammu and Kashmir: Isolation wards have been set up in Srinagar over #Coronavirus. 30 positive cases of Coronavirus have been reported across the country till now. pic.twitter.com/qstVG36Z87
ಭಾರತದಲ್ಲಿ 30 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಹಿನ್ನೆಲೆಯ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಐಸೋಲೇಟೆಡ್ ವಾರ್ಡ್ ಗಳ ಸ್ಥಾಪನೆ.
10:47 AM, 6 Mar
ಭೂತಾನ್ ನಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆ. ಮಾರ್ಚ್.02ರಂದು ಅಮೆರಿಕಾದಿಂದ ಗುವಾಹಟಿಗೆ ಬಂದಿದ್ದ 76 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆ.
10:57 AM, 6 Mar
59 ವರ್ಷದ ಪತ್ನಿಯ ಜೊತೆಗೆ 10 ಸಹ ಪ್ರಯಾಣಿಕರೊಂದಿಗೆ ಅಮೆರಿಕಾಗೆ ತೆರಳಿದ್ದ ವೃದ್ಧ. 10 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿರುವ ಬಗ್ಗೆ ಮಾಹಿತಿ.
11:21 AM, 6 Mar
ಭಾರತದಲ್ಲಿ ಒಟ್ಟು 30 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆ.
ಜೈಪುರ್ - 17
ಆಗ್ರಾ - 6
ದೆಹಲಿ ಮತ್ತು ಎನ್ಆರ್ ಸಿ - 3
ಕೇರಳ - 03
ತೆಲಂಗಾಣ - 1
11:30 AM, 6 Mar
ಚೀನಾ, ಹಾಂಗ್ ಕಾಂಗ್, ಇಟಲಿ, ಇರಾನ್, ಇಂಡೋನೆಷ್ಯಾ, ಜಪಾನ್, ಮಲೇಶಿಯಾ, ನೇಪಾಳ, ಸಿಂಗಾಪುರ, ತೈವಾನ್, ಥೈಲ್ಯಾಂಡ್, ವಿಯೆಟ್ನಾ ಮತ್ತು ದಕ್ಷಿಣ ಕೊರೊಯಾದಿಂದ ನೇರ ಮತ್ತು ಪರೋಕ್ಷವಾಗಿ ಭಾರತಕ್ಕೆ ಆಗಮಿಸಿದ ಪ್ರವಾಸಿಗರಿಂದ ಸೋಂಕು.
11:31 AM, 6 Mar
ಚೀನಾ, ಇರಾನ್, ಇಟಲಿ, ಕೊರಿಯಾ ಸೇರಿದಂತೆ ಸೋಂಕಿತ ರಾಷ್ಟ್ರಗಳಿಗೆ ಪ್ರಯಾಣಿಸದಂತೆ ಭಾರತೀಯರಿಗೆ ಎಚ್ಚರಿಕೆ ಸಂದೇಶ ರವಾನೆ.
12:08 PM, 6 Mar
ದೆಹಲಿಯ ಮತ್ತೊಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು. ಭಾರತದಲ್ಲಿ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆ.
1:19 PM, 6 Mar
ತೆಲಂಗಾಣದಲ್ಲಿ ಕೊರೊನಾ ವೈರಸ್ ಪೀಡಿತ ದೇಶಗಳಿಂದ ಆಗಮಿಸಿದ 361 ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಸೋಂಕು ತಗಲಿರುವ ಶಂಕೆ ಮೇಲೆ ತೀವ್ರ ಕಣ್ಗಾವಲಿನಲ್ಲಿ ಇರಿಸಲಾಗಿದೆ. 361 ಪ್ರಯಾಣಿಕರ ಪೈಕಿ 13 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು, 24 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಈ 24 ಜನರ ಪೈಕಿ 11 ಮಂದಿಗೆ ಕೊರೊನಾ ವೈರಸ್ ಇಲ್ಲವೆಂದು ವರದಿ ಬಂದಿದ್ದು, ಉಳಿದ 13 ಜನರ ರಕ್ತ ಪರೀಕ್ಷೆಯ ಫಲಿತಾಂಶವು ಇನ್ನಷ್ಟೇ ತಿಳಿದು ಬರಬೇಕಿದೆ.
1:48 PM, 6 Mar
Punjab: 13 Italian nationals have been kept in isolation at a hotel in Amritsar, keeping in view the Coronavirus situation. Vikas Heera, SDM says, "None of the 13 people have symptoms for Coronavirus. They all are healthy. They have been isolated as a precautionary measure". pic.twitter.com/UdGeuEqd2T
ಇಟಲಿಯ 13 ಪ್ರಯಾಣಿಕರನ್ನು ಅಮೃತ್ ಸರ್ ನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ. ಈ ಪೈಕಿ ಯಾರಿಗೂ ಕೊರೊನಾ ಸೋಂಕು ತಗಲಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಐಸೋಲೆಟೆಡ್ ನಲ್ಲಿ ಇರಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ಎಸ್ ಡಿಎಂ ಆಸ್ಪತ್ರೆ ವೈದ್ಯ ವಿಕಾಸ್ ಹೀರಾ ತಿಳಿಸಿದ್ದಾರೆ.
1:51 PM, 6 Mar
Tamil Nadu Health Minister C. Vijayabaskar: There is no #Coronavirus infection in the state. People should not panic but at the same time do not be careless as it is an airborne disease. We are doing 24x7 screening in Chennai. We also have dedicated ambulances on standby. pic.twitter.com/iNNi1xFKTO
ತಮಿಳುನಾಡಿನಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಚೆನ್ನೈನಲ್ಲಿ 24/7 ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಸಿ. ವಿಜಯ್ ಭಾಸ್ಕರ್ ತಿಳಿಸಿದ್ದಾರೆ.
3:12 PM, 6 Mar
ಕೊರೊನಾ ವೈರಸ್ ನಿಂದ ಇರಾನ್ ವಿದೇಶಾಂಗ ಸಚಿವರ ಸಲಹೆಗಾರ ಹುಸೇನ್ ಶೇಖುಲೆಸ್ಲಂ ಗುರುವಾರ ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
3:21 PM, 6 Mar
ಕೊರೊನಾ ವೈರಸ್ ಹಿನ್ನೆಲೆ ಇರಾನ್ ನಿಂದ 300 ಭಾರತೀಯರನ್ನು ವಿಶೇಷ ವಿಮಾನದಲ್ಲಿ ದೇಶಕ್ಕೆ ವಾಪಸ್ ಕರೆದುಕೊಂಡು ಬರಲಾಗುತ್ತಿದೆ. ಶುಕ್ರವಾರ ರಾತ್ರಿ ವೇಳೆಗೆ ಈ ವಿಶೇಷ ವಿಮಾನವು ಭಾರತಕ್ಕೆ ಆಗಮಿಸಲಿದೆ ಎಂದು ವಿಮಾನಯಾನ ಸಚಿವ ಹಾರ್ದಿಪ್ ಸಿಂಗ್ ಪುರಿ ತಿಳಿಸಿದ್ದಾರೆ.
4:08 PM, 6 Mar
ನೆದರ್ ಲ್ಯಾಂಡ್ ನಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾರಿಗುವ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ.
4:21 PM, 6 Mar
West Bengal CM Mamata Banerjee on Kolkata: I have held a meeting with all concerned officers. Till today, no positive case of #Coronavirus detected in West Bengal. There is no need to panic. pic.twitter.com/6qG1RVmaET
ಕೊರೊನಾ ವೈರಸ್ ಹಿನ್ನೆಲೆ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಆಗಿದೆ. ರಾಜ್ಯದಲ್ಲಿ ಇದುವರೆಗೂ ಒಂದೇ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
4:35 PM, 6 Mar
ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ ಭೂತಾನ್.
10:31 AM, 7 Mar
ಶುಕ್ರವಾರ ಚೀನಾದಲ್ಲಿ 28 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸತ್ತವರ ಸಂಖ್ಯೆ 3070ಕ್ಕೆ ಏರಿಕೆಯಾಗಿದೆ.
ಬೆಂಗಳೂರಲ್ಲಿ ಕೊರೊನಾ ಜೊತೆಗೆ ಎಚ್1ಎನ್1 ಭೀತಿಯೂ ಆರಂಭವಾಗಿದೆ. ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಭಯ ಕಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಒಂದೆಡೆ ಕುಳಿತು ಕೆಲಸ ಮಾಡುವ ಕಾರಣ ಒಬ್ಬರಿಂದೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ.
ಕೊರೊನಾದಿಂದ ವಿಮಾನ ಸಂಸ್ಥೆಗಳು ಬರೋಬ್ಬರಿ 8 ಲಕ್ಷ ಕೋಟಿಯಷ್ಟು ನಷ್ಟ ಅನುಭವಿಸಿವೆ. ವಿಶ್ವಾದ್ಯಂತ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದು ಭಾರಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಜಗತ್ತಿನ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ.ಕೊರೊನಾದಿಂದ ಜಾಗತಿಕ ಆರ್ಥಿಕತೆಗೆ ಸುಮಾರು 25 ಲಕ್ಷ ಕೋಟಿ ರೂ.ನಷ್ಟವಾಗಬಹುದು ಎಂದು ಭವಿಷ್ಯ ನುಡಿದಿದೆ.
3:47 PM, 7 Mar
"ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಹಿಡಿದು ನಗರ ಪ್ರದೇಶದ ಎಲ್ಲ ಸ್ಥಳದಲ್ಲೂ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದರು.
3:47 PM, 7 Mar
"ರಾಜ್ಯ ಸರ್ಕಾರದಿಂದ ಟಾಸ್ಕ್ ಫೋರ್ಸ್ ರಚಿಸಿ ಕೊರೊನಾ ಪ್ರಕರಣಗಳ ಮೇಲೆ ನಿಗಾ ವಹಿಸಲಾಗಿದೆ. ನಮ್ಮ ಸರ್ಕಾರದ ಮುಂಜಾಗ್ರತಾ ಕ್ರಮದಿಂದಾಗಿ ಕರ್ನಾಟಕಕ್ಕೆ ಕೊರೊನಾ ಬಂದಿಲ್ಲ. ಲಕ್ಷಾಂತರ ಜನ ನಿತ್ಯ ರಾಜ್ಯದಿಂದ ಓಡಾಟ ಮಾಡುತ್ತಿದ್ದರೂ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಕೊರೊನಾ ಪತ್ತೆಗಾಗಿ ಹೊಸ ಯಂತ್ರಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿಕೊಡುತ್ತಿದ್ದೇವೆ" ಎಂದು ತಿಳಿಸಿದರು-ಡಾ. ಸುಧಾಕರ್
3:47 PM, 7 Mar
ಇದೇ ಸಂದರ್ಭ ರಾಜ್ಯ ಬಜೆಟ್ ಕುರಿತ ಪ್ರಶ್ನೆಗೂ ಪ್ರತಿಕ್ರಿಯಿಸಿ, "ರಾಜ್ಯ ಬಜೆಟ್ ಬಗ್ಗೆ ಯಾರಿಗೂ ಅಸಮಾಧಾನ ಇಲ್ಲ. ಆರ್ಥಿಕ ಹಿಂಜರಿತದ ನಡುವೆಯೇ ಉತ್ತಮ ಬಜೆಟ್ ನೀಡಲಾಗಿದೆ. ಎಲ್ಲ ಭಾಗಗಳಿಗೂ ಅವಶ್ಯಕತೆಗೆ ತಕ್ಕ ಅನುದಾನ ನೀಡಿದ್ದಾರೆ. ಇದು ಅಭಿವೃದ್ಧಿ ದೃಷ್ಟಿಯಿಂದ ಪೂರಕವಾದ ಬಜೆಟ್ ಆಗಿದೆ" ಎಂದು ಹೇಳಿಕೆ ನೀಡಿದರು-ಡಾ. ಸುಧಾಕರ್
3:52 PM, 7 Mar
ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಬಗ್ಗೆ ಶಂಕಿಸಲಾಗಿದೆ.
3:53 PM, 7 Mar
ಜಮ್ಮು ಮತ್ತು ಕಾಶ್ಮೀರದ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ರಕ್ತ ಪರೀಕ್ಷೆಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಬ್ಬರನ್ನೂ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ.
3:53 PM, 7 Mar
ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ಭೀತಿ ಹೆಚ್ಚಾಗಿರುವ ಕಾರಣ ಜಮ್ಮು ಮತ್ತು ಸಾಂಬಾ ಜಿಲ್ಲೆಗಳ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಮಾರ್ಚ್ 31 ರವರೆಗೆ ಮುಚ್ಚಲು ಜಮ್ಮು ಮತ್ತು ಕಾಶ್ಮೀರದ ಪ್ರಿನ್ಸಿಪಾಲ್ ಸೆಕ್ರೆಟರಿ (ಪ್ಲಾನ್ನಿಂಗ್) ಆದೇಶಿಸಿದ್ದಾರೆ.
4:15 PM, 7 Mar
ವೈರಾಣು ಹಬ್ಬದೇ ಇರುವಂತೆ ಭಾರತದ ವಾತಾವರಣ ನಮ್ಮನ್ನ ಕಾಪಾಡಬಹುದು. ಹಾಗಂದ ಮಾತ್ರಕ್ಕೆ ಕೊರೊನಾ ವೈರಸ್ ಬಗ್ಗೆ ಭಾರತೀಯರು ನಿರ್ಲಕ್ಷ್ಯ ಮಾಡುವಂತಿಲ್ಲ. ಒಂದು ವೇಳೆ ಕೊರೊನಾ ವೈರಸ್ ಭಾರತದಲ್ಲಿ ಹರಡಿದರೆ, ಮಿಕ್ಕೆಲ್ಲಾ ದೇಶಗಳಿಗಿಂತ ಹೆಚ್ಚು ಆಪತ್ತು ಭಾರತಕ್ಕೆ ಕಾದಿದೆ.
5:07 PM, 7 Mar
ಜನಸಂದಣಿ ಇರುವ ಜಾಗಕ್ಕೆ ಹೋದರೆ, ಎಲ್ಲಿ ಸೋಂಕು ತಗುಲುತ್ತೋ ಎಂಬ ಭಯದಿಂದ ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಕಡೆಗೆ ಬೆಂಗಳೂರಿನ ಮಂದಿ ಮುಖ ಮಾಡುತ್ತಿಲ್ಲ. ಕೊರೊನಾ ಭೀತಿಯಿಂದಾಗಿ ಮಾಲ್ ಗಳಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಮಲ್ಟಿಪ್ಲೆಕ್ಸ್ ಗಳಲ್ಲೂ ಜನ ಇಲ್ಲದ ಕಾರಣ ಬಾಕ್ಸ್ ಆಫೀಸ್ ಕಲೆಕ್ಷನ್ ಗೂ ಹೊಡೆತ ಬಿದ್ದಿದೆ.
COVID-19 Vaccination in India Live Updates in Kannada: coronavirus vaccine programmes launched in India by PM Narendra Modi as vaccination drive on Jan 16.