40 ದಿನಗಳ ನರಕ: ಭಾರತೀಯರಿಗೆ ಕೊರೊನಾ ಕೊಟ್ಟ ಎಚ್ಚರಿಕೆ ಗಂಟೆ!
ನವದೆಹಲಿ, ಡಿಸೆಂಬರ್ 28: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮತ್ತೆ ಚಿಗುರೊಡೆಯುತ್ತಿದೆ. ಓಮಿಕ್ರಾನ್ ರೂಪಾಂತರದ ಬಿಎಫ್.7 ಉಪತಳಿಯು ಜಾಗತಿಕ ಮಟ್ಟದಲ್ಲಿ ಹೈಅಲರ್ಟ್ ಅನ್ನು ಘೋಷಿಸುವಂತಾ ವಾತಾವಾರಣವನ್ನು ಸೃಷ್ಟಿಸಿ ಬಿಟ್ಟಿದೆ.
ಜಗತ್ತಿನ ಬಹುತೇಕ ರಾಷ್ಟ್ರಗಳು ಹೈಅಲರ್ಟ್ ಘೋಷಿಸಿವೆ. ಕೋವಿಡ್--19 ಸೋಂಕಿನ ಯಾವುದೇ ಅಲೆಯು ಇರುವುದಿಲ್ಲ ಎಂದು ತಜ್ಞರು ಸೂಚಿಸಿದ್ದರೂ, ಹೆಚ್ಚುತ್ತಿರುವ ಪ್ರಕರಣಗಳ ಭಯ ಇನ್ನೂ ದೊಡ್ಡದಾಗಿದೆ. ಈ ಹಂತದಲ್ಲಿ ಮುಂದಿನ 40 ದಿನಗಳು ಭಾರತದ ಮಟ್ಟಿಗೆ ಬಲುನಿರ್ಣಾಯಕವಾಗಲಿವೆ, ಏಕೆಂದರೆ ಭಾರತವು ಈ ಹಿಂದಿನ ಕೋವಿಡ್-19 ಅಲೆಗಳ ಸಂದರ್ಭದಲ್ಲಿ ಜನವರಿ ಮಧ್ಯದಲ್ಲಿ ಅತಿಹೆಚ್ಚು ಪ್ರಕರಣಗಳನ್ನು ವರದಿ ಮಾಡುತ್ತಿದ್ದವು.
ಕೊರೊನಾ ವೈರಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಸಲಿ ಸತ್ಯ!
ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಕೋವಿಡ್-19 ಪರಿಸ್ಥಿತಿ ಮತ್ತು ಸನ್ನದ್ಧತೆಯ ಕುರಿತು ರಾಜ್ಯ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ್ದು ಆಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 'ಟೆಸ್ಟ್-ಟ್ರ್ಯಾಕ್-ಟ್ರೀಟ್ ಮತ್ತು ವ್ಯಾಕ್ಸಿನೇಷನ್' ಮೇಲೆ ಕೇಂದ್ರೀಕರಿಸಲು ನಿರ್ದೇಶಿಸಲಾಗಿದೆ. ಮುಂದಿನ 40 ದಿನಗಳು ಭಾರತದ ಮಟ್ಟಿಗೆ ಹೇಗೆ ನಿರ್ಣಾಯಕವಾಗಲಿವೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಕೋವಿಡ್-19 ಕುರಿತಾದ ಬೆಳವಣಿಗೆಗಳು
* ರಾಷ್ಟ್ರ ರಾಜಧಾನಿಯಲ್ಲಿ 60 ವಯಸ್ಸಿನವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲಾಗುತ್ತಿದೆ. ಇದರ ಮಧ್ಯೆ 386.25 ರೂಪಾಯಿ ಬೆಲೆಯ ಖಾಸಗಿ ಸೌಲಭ್ಯಗಳಲ್ಲಿ ಎಲ್ಲರಿಗೂ ಲಸಿಕೆಯು ಲಭ್ಯವಿರುತ್ತದೆ. ಅಗತ್ಯವಿರುವ ಪ್ರತಿಯೊಬ್ಬರು ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಳ್ಳುವುದಾಗಿ ಸೂಚನೆ ನೀಡಲಾಗಿದೆ.
* ಕಳೆದ ವಾರ ಪ್ರತಿರಕ್ಷಣೆ ಕಾರ್ಯಕ್ರಮದ ಭಾಗವಾಗಿ ಅನುಮೋದಿಸಲಾದ ಭಾರತ್ ಬಯೋಟೆಕ್ನ ಇಂಟ್ರಾನಾಸಲ್ ಲಸಿಕೆಯು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. ಸರಕು ಮತ್ತು ಸೇವಾ ತೆರಿಗೆಯನ್ನು ಹೊರತುಪಡಿಸಿ iNCOVACC ಲಸಿಕೆಯ ಒಂದು ಡೋಸ್ ಪ್ರತಿ 8 ರೂಪಾಯಿ ಆಗುತ್ತದೆ. ಇದಕ್ಕಾಗಿ ಸ್ಲಾಟ್ಗಳನ್ನು ಈಗ CoWin ಪೋರ್ಟಲ್ನಲ್ಲಿ ಬುಕ್ ಮಾಡಬಹುದು.
* ಜನವರಿ ನಾಲ್ಕನೇ ವಾರದಿಂದ ಮೂಗಿನ ಲಸಿಕೆ ಸಾರ್ವಜನಿಕರಿಗೆ ಸಿಗಲಿದೆ
* ಕಳೆದ ಮೂರು ದಿನಗಳಲ್ಲಿ ಮುಂಬೈನಲ್ಲಿ ವರದಿಯಾಗುತ್ತಿದ್ದ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಶೇ.32ರಷ್ಟು ಏರಿಕೆಯಾಗಿದೆ. ಇದರ ಬೆನ್ನಲ್ಲೇ ಬೃಹತ್ ಮುಂಬೈ ಕಾರ್ಪೋರೇಷನ್ ಹೈಅಲರ್ಟ್ ಅನ್ನು ಘೋಷಿಸಿದೆ.
* ತಮಿಳುನಾಡಿನಲ್ಲಿ 4 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್-19 ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ದುಬೈನಿಂದ ಬಂದ ಇಬ್ಬರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ಬಂದಿದ್ದು, ತಾಯಿ-ಮಗಳು ಇಬ್ಬರು ಚೀನಾದಿಂದ ಶ್ರೀಲಂಕಾ ಮೂಲಕ ಆಗಮಿಸಿದ್ದರು ಎಂದು ಗೊತ್ತಾಗಿದೆ.
ಕೊರೊನಾವೈರಸ್ ಸಲಹಾ ಸಮಿತಿ ಮುಖ್ಯಸ್ಥರು ಹೇಳೋದೇನು?
ಚೀನಾದಲ್ಲಿ ಏಕಾಏಕಿ ಏರಿಕೆ ಕಾಣುತ್ತಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಬಗ್ಗೆ ಭಾರತೀಯರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರದ ಕೋವಿಡ್-19 ಸಮಿತಿ ಮುಖ್ಯಸ್ಥ ಎನ್ಕೆ ಅರೋರಾ ಸ್ಪಷ್ಟಪಡಿಸಿದ್ದಾರೆ. ಪ್ರಪಂಚದಾದ್ಯಂತ ಎಚ್ಚರಿಕೆಯ ಗಂಟೆಗಳನ್ನು ಬಾರಿಸಿರುವ ಚೀನಾದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಕುರಿತು ಭಾರತದಲ್ಲಿ ಜನರು ಭಯಪಡುವ ಅವಶ್ಯಕತೆಯಿಲ್ಲ. ಚೀನಾದಿಂದ ಮಾಹಿತಿಯ ಮುಕ್ತ ಹರಿವಿನ ಅನುಪಸ್ಥಿತಿಯಲ್ಲಿ ಭಾರತವು "ಮುನ್ನೆಚ್ಚರಿಕೆ ಮತ್ತು ಪೂರ್ವಭಾವಿ" ಸಿದ್ಧತೆಗಳನ್ನು ನಡೆಸುತ್ತಿದೆ.
ಕೊರೊನಾಗೆ ಯಾಕೆ ಹೆದರಲ್ಲ ಭಾರತೀಯರು?
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೊದಲನೇ ಅಲೆ, ಎರಡನೇ ಅಲೆ ಮತ್ತು ಮೂರನೇ ಅಲೆಯಿಂದಾಗಿ ಜನರಲ್ಲಿ ಸಹಜವಾಗಿ ಪ್ರತಿರಕ್ಷಣಾ ಸಾಮರ್ಥ್ಯ ವೃದ್ಧಿಯಾಗಿದೆ. ಇದರ ಜೊತೆಗೆ ಹೈಬ್ರಿಡ್ ಇಮ್ಯುನಿಟಿಗೆ ಕೋವಿಡ್-19 ಲಸಿಕೆಗಳು ಕಾರಣವಾಗಿವೆ. ಕೊರೊನಾವೈರಸ್ ಲಸಿಕೆಯಿಂದಾಗಿ ಸೋಂಕನ್ನು ಎದುರಿಸುವ ಸಾಮರ್ಥ್ಯವು ಈಗಾಗಲೇ ಭಾರತೀಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕಾರಣಕ್ಕಾಗಿ ಹೊಸ ಅಲೆಗೆ ಭಾರತೀಯರು ಭಯ ಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆಯನ್ನು ಸಹ ಇದೇ ಸಂದರ್ಭದಲ್ಲಿ ಮರೆಯುವಂತಿಲ್ಲ.
ಕೊರೊನಾದಿಂದ ಭಾರತೀಯರು ಸೇಫ್!
ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕೊರೊನಾವೈರಸ್ ವಿರುದ್ಧ ಭಾರತೀಯರು ಹೆಚ್ಚು ಸುರಕ್ಷಿತರಾಗಿದ್ದಾರೆ. ಏಕೆಂದರೆ ದೇಶದಲ್ಲಿನ ಶೇ.97ರಷ್ಟು ಪ್ರತಿಶತ ಜನರು ಎರಡು ಡೋಸ್ ಕೋವಿಡ್-19 ಲಸಿಕೆಯನ್ನು ಪಡೆದುಕೊಂಡಿದ್ದಾರೆ, ಇತರರು ಒಂದಕ್ಕಿಂತ ಹೆಚ್ಚು ಬಾರಿ ವೈರಸ್ಗೆ ತುತ್ತಾಗಿದ್ದಾರೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.96 ಪ್ರತಿಶತದಷ್ಟು ಮಕ್ಕಳು ಕೋವಿಡ್ಗೆ ಒಡ್ಡಿಕೊಂಡಿರುವುದರಿಂದ ಮಕ್ಕಳು ಸಹ ಸುರಕ್ಷಿತವಾಗಿದ್ದಾರೆ. ಆದ್ದರಿಂದ ವ್ಯಾಕ್ಸಿನೇಷನ್ ನಡೆಯುತ್ತಿರುವಾಗಲೂ ಜನರು ಬಹಿರಂಗಪಡಿಸಿದ ಮಾಪನಾಂಕ ನಿರ್ಣಯದ ವಿಧಾನ, ಕೋವಿಡ್ ದೃಷ್ಟಿಕೋನದಿಂದ ನಾವು ಅತ್ಯಂತ ಸುರಕ್ಷಿತ ಸಮಾಜವೆಂದು ಅವರು ಹೇಳಿದರು.
ಈಗ ದೇಶದಲ್ಲಿ ನಡೆಯುತ್ತಿರುವ ಪ್ರತಿಕ್ರಿಯೆಯು "ಪೂರ್ವಭಾವಿ ಮತ್ತು ಪರ-ಸಕ್ರಿಯ ಪ್ರತಿಕ್ರಿಯೆಯಾಗಿದೆ. ಮುಖ್ಯವಾಗಿ ಚೀನಾದ ಪ್ರಸ್ತುತ ಪರಿಸ್ಥಿತಿಯ ಮೇಲೆ ಭಾರಿ ಅಪಾರದರ್ಶಕತೆ ಇದೆ. ಈ ಹೊಸ ಪ್ರಕರಣಗಳ ವಿಷಯದಲ್ಲಿ ಅಪಾರದರ್ಶಕತೆ, ಪ್ರಕರಣಗಳ ತೀವ್ರತೆ, ಅವುಗಳ ಲಸಿಕೆ ಸ್ಥಿತಿ ಮತ್ತು ನಂತರ ಅಲ್ಲಿ ಪರಿಚಲನೆಯಲ್ಲಿರುವ ರೀತಿಯ ರೂಪಾಂತರಗಳು ಮುಖ್ಯವಾಗಿರುತ್ತದೆ," ಎಂದು ಎನ್ ಕೆ ಅರೋರಾ ಹೇಳಿದರು.