Get Updates
Get notified of breaking news, exclusive insights, and must-see stories!

ಛತ್ತೀಸ್‌ಗಡ ಉಳಿಸಿಕೊಳ್ಳಲು ಕಾಂಗ್ರೆಸ್‌ ಸ್ಮಾರ್ಟ್‌ ಮೂವ್‌: ಕೊನೆ ಕ್ಷಣದಲ್ಲಿ ಡಿಸಿಎಂ ನೇಮಕ

ರಾಯಪುರ, ಜೂನ್‌ 29: ಛತ್ತೀಸ್‌ಗಢದ ಸಚಿವ ಟಿ ಎಸ್ ಸಿಂಗ್ ದೇವ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸುವ ಕಾಂಗ್ರೆಸ್‌ನ ಕ್ರಮವು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರೊಂದಿಗೆ ರಾಜ್ಯ ಘಟಕದಲ್ಲಿನ ಆಂತರಿಕ ಕಲಹವನ್ನು ತಡೆಯಲು ಮತ್ತು ವರ್ಷಾಂತ್ಯದ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಪ್ರಯತ್ನದಂತೆ ಕಂಡುಬರುತ್ತಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಎದುರುಬಾಣಗಳನ್ನು ಎದುರಿಸುತ್ತಿರುವ ಭೂಪೇಶ್‌ ಬಾಘೆಲ್, ಬುಧವಾರದಂದು ಸಿಂಗ್ ಡಿಯೊ ಅವರ ನೇಮಕವನ್ನು ಶ್ಲಾಘಿಸಿದ್ದು, ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರವನ್ನು ಜಪಿಸಿದರು.

Congress smart move to retain Chhattisgarh

ಸಿಂಗ್ ದೇವ್ ಅವರ ಪರವಾಗಿ ಕೆಲಸ ಮಾಡುವುದು ಮುಖ್ಯವಾಗಿದೆ. ಅವರು ರಾಜ್ಯದಲ್ಲಿ ಪ್ರಮುಖ ನಾಯಕರಾಗಿದ್ದು, ರಾಜ್ಯದ ಉತ್ತರ ಭಾಗದಲ್ಲಿ (ಸುರ್ಗುಜಾ) ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ. ಅಂಬಿಕಾಪುರದ ಹಾಲಿ ಶಾಸಕರು ಹೊಸದಿಲ್ಲಿಯಲ್ಲಿ ಪಕ್ಷದ ಹೈಕಮಾಂಡ್‌ನ ವಿಶ್ವಾಸವನ್ನು ಹೊಂದಿದ್ದಾರೆ.

ಛತ್ತೀಸ್‌ಗಢದಲ್ಲಿ ಉಪಮುಖ್ಯಮಂತ್ರಿಯಾಗಿ ಸಿಂಗ್ ದೇವು (70) ಅವರನ್ನು ನೇಮಕ ಮಾಡುವ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದಾರೆ ಎಂದು ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ರಾತ್ರಿ ಬಿಡುಗಡೆಯಾದ ಪಕ್ಷದ ಹೇಳಿಕೆ ತಿಳಿಸಿದೆ. ಹಿಂದಿನ ದಿನ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಛತ್ತೀಸ್‌ಗಢದ ಉನ್ನತ ಕಾಂಗ್ರೆಸ್ ನಾಯಕರು ಪಕ್ಷದ ಕಾರ್ಯತಂತ್ರ ಮತ್ತು ರಾಜ್ಯದಲ್ಲಿ ಚುನಾವಣಾ ಸಿದ್ಧತೆ ಕುರಿತು ಚರ್ಚಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಛತ್ತೀಸ್‌ಗಢ ಸಿಎಂ ಬಘೇಲ್, ಪಕ್ಷದ ರಾಜ್ಯ ಉಸ್ತುವಾರಿ ಕುಮಾರಿ ಸೆಲ್ಜಾ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸೇರಿದಂತೆ ಪ್ರಮುಖರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.

ರಾಜಮನೆತನದಿಂದ ಬಂದ ಸಿಂಗ್ ದೇವ್ ಅವರ ನೇಮಕದ ನಂತರ, ಬಘೆಲ್ ಅವರು ಟ್ವಿಟ್ಟರ್‌ನಲ್ಲಿ "ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿಯನ್ನು ಪಡೆದಿದ್ದಕ್ಕಾಗಿ ಮಹಾರಾಜ್ ಸಾಹಬ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಬರೆದಿದ್ದಾರೆ.

Congress smart move to retain Chhattisgarh

ಮಾಜಿ ಸಿಎಂ ಮತ್ತು ಬಿಜೆಪಿಯ ಹಿರಿಯ ನಾಯಕ ರಮಣ್ ಸಿಂಗ್ ಅವರು ಟ್ವಿಟ್ ಮಾಡಿ, "ದುಬ್ನೆ ಲಗೀ ಕಷ್ಟಿ ತೊ ಕಪ್ತಾನ್ ನೆ ಯು ಕುಚ್ ಕಿಯಾ, ಸೌಪ್ ದಿ ಹೈ ಪಟ್ವಾರ್ ಆಧಿ ದುಸ್ರೆ ಕೆ ಹಾತ್ ಮಿ (ದೋಣಿ ಮುಳುಗಲು ಪ್ರಾರಂಭಿಸಿದಾಗ, ಕ್ಯಾಪ್ಟನ್ ಈ ರೀತಿ ಮಾಡಿದರು. ಅರ್ಧದಷ್ಟು ಚುಕ್ಕಾಣಿಯನ್ನು ಬೇರೆಯವರಿಗೆ ಹಸ್ತಾಂತರಿಸಲಾಗಿದೆ). ಉಳಿದ 4 ತಿಂಗಳು ಮಹಾರಾಜ್ ಜೀ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ರಾಜಕೀಯ ತಜ್ಞರ ಪ್ರಕಾರ, ಉಪ ಮುಖ್ಯಮಂತ್ರಿಯ ನಿರ್ಧಾರವು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಸುಸ್ಥಿಯಲ್ಲಿ ಇರಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್‌ನ ಪ್ರಯತ್ನ ಮಾಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನೊಳಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪಕ್ಷದ ಕ್ರಮವಾಗಿ ಈ ನಿರ್ಧಾರವು ತೋರುತ್ತಿದೆ. ಆದರೆ, ವಿಧಾನಸಭೆ ಚುನಾವಣೆಗೂ ಮುನ್ನವೇ ಇದನ್ನು ತೆಗೆದುಕೊಳ್ಳಬೇಕಿತ್ತು. ಈ ಸಮಯದಲ್ಲಿ ಇಂತಹ ನಿರ್ಧಾರವು ಪಕ್ಷದ ಮೇಲೆ ಬ್ಯಾಕ್‌ ಫಯರ್‌ ಆಗಬಹುದು ಎಂದು ವಿಶ್ಲೇಷಕರು ತಿಳಿಸಿದ್ದಾರೆ.

2018ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಛತ್ತೀಸ್‌ಗಢದ ರಾಜಕೀಯ ವಲಯಗಳಲ್ಲಿ ಸಿಎಂ ಹುದ್ದೆ ಹಂಚಿಕೆ ಸೂತ್ರವು ಗೊಂದಲ ಸೃಷ್ಟಿಸಿತ್ತು. ಭೂಪೇಶ್‌ ಬಾಘೆಲಾ ಮತ್ತು ಅವರ ಇಬ್ಬರು ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಸಿಂಗ್ ಡಿಯೋ ಮತ್ತು ತಾಮ್ರಧ್ವಜ್ ಸಾಹು ಆಗ ಉನ್ನತ ಹುದ್ದೆಗೆ ಪ್ರಮುಖ ಆಕಾಂಕ್ಷಿಗಳಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+