ವಿದೇಶಿ ಮಾಧ್ಯಮಕ್ಕೆ 'Operation Sindoor' ಹೆಸರಿನ ವಿವರಣೆ ಕೊಟ್ಟ ಶಶಿ ತರೂರ್
Operation Sindoor: ಭಾರತ ಪಾಕಿಸ್ತಾನದ ಮಧ್ಯೆ ಯುದ್ಧ ಸನ್ನಿವೇಶಗಳು ಮುಂದುವರಿದಿವೆ. ಯುದ್ಧಕ್ಕೆ ಭಾರತವು 'ಆಪರೇಷನ್ ಸಿಂದೂರ' ಎಂದು ಹೆಸರಿಟ್ಟಿದೆ. ಈ ಹೆಸರಿನ ಶಕ್ತಿಯ ಬಗ್ಗೆ ವಿದೇಶಿ ಮಾಧ್ಯಮಗಳಿಗೆ ಕಾಂಗ್ರಸ್ ಸಂಸದ ಶಶಿ ತರೂರ್ ವಿವರಿಸಿದ್ದಾರೆ. "ಆಪರೇಷನ್ ಸಿಂಧೂರ" ಎಂಬುದು ನವವಿವಾಹಿತೆ ವಿಧವೆಯಾದ ವಧುವಿನ ದುಃಖ ತೋರ್ಪಡಿಸುವ ಪ್ರಬಲ ಹೆಸರಾಗಿದೆ. ಇದರ ಸಂಕೇತವೇ ರಕ್ತಪಾತ, ನಷ್ಟವನ್ನು ಶತ್ರುಗಳಿಗೆ ಜ್ಞಾಪಿಸುವಾಗಿದೆ ಎಂದು ಅವರು ವಿವರಿಸಿದ್ದಾರೆ.
ಸೌದಿ ಅರೇಬಿಯಾದ ಸುದ್ದಿ ವಾಹಿನಿ ಅಲ್ ಅರೇಬಿಯಾ ಜೊತೆಗೆ ಮಾತನಾಡಿದ ಅವರಿಗೆ ಭಾರತದ 'ಆಪರೇಷನ್ ಸಿಂಧೂರ'ವು ಕಾಶ್ಮೀರ ಪಹಲ್ಗಾಮ್ ನಲ್ಲಿ ನಡೆಸಿದ ದಾಳಿಯ ಉಗ್ರರು ನೆತ್ತರಿಗೂ ಈ ಶಬ್ಧವು ಹೆಚ್ಚು ಭಿನ್ನವಾಗಿಲ್ಲ. ರಕ್ತ ಬಣ್ಣವು, ಸಿಂದೂರು ಹೆಚ್ಚೇನು ಭಿನ್ನವಾಗಿಲ್ಲ. ಭಾರತದ ಪಹಲ್ಗಾಮ್ ದಾಳಿ ಪ್ರತಿದಾಳಿ, ನೋವಿಗೆ ಸೇಡು ತೀರಿಸಿಕೊಳ್ಳುತ್ತಿದೆ. ಉಗ್ರರ ರಕ್ತ ಹರಿಯುವುದನ್ನು ಈ ಹೆಸರು ಸೂಚಿಸುತ್ತದೆ ಎಂದು ಅವರು ಹೇಳಿದರು.

ವಿವಾಹಿತ ಮಹಿಳೆಯರು ತಮ್ಮ ಮುಂದಲೆ ಹಚ್ಚಿಕೊಳ್ಳುವ ಕುಂಕುಮ ಚಿಹ್ನೆಯೇ ಸಿಂದೂರವಾಗಿದೆ. ಇತ್ತೀಚೆಗೆ ಉಗ್ರರು ನಡೆಸಿದ ಪಹಲ್ಗಾಮ್ ದಾಳಿಯಲ್ಲಿ ಆಗಷ್ಟೇ ವಿವಾಹವಾಗಿ ವಧು ತನ್ನ ಪತಿ ಜೊತೆಗೆ ಮಧುಚಂದ್ರಕ್ಕೆ ಬಂದಾಗ ಪತಿ ಕಳೆದುಕೊಂಡು ವಿಧವೆಯಾಗಿದ್ದಾರೆ. ಆ ವಧು ಸೇರಿದಂತೆ ಕೆಲವು ಮಹಿಳೆಯರ ಸಿಂಧೂರವನ್ನು ಪಾಕಿಸ್ತಾಣ ಕಸಿದುಕೊಂಡಿದೆ. ಆ ವಧು ಪತಿ ಇಲ್ಲದೇ ಮಂಡಿಯೂರಿ ದುಃಖಿತಳಾಗಿದ್ದಾಳೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಉಗ್ರರು ಭಾರತೀಯ ಹೆಣ್ಣಿನ ಹಣೆಯ ಸಿಂಧೂರ ಅಳಿಸಿದ್ದರು. ಅದರ ಪ್ರತಿಯಾಗಿ ಭಾರತ ಸೇನೆ ಉಗ್ರರ ರಕ್ತವನ್ನು ಹರಿಸುತ್ತಿದೆ ಎಂದು ಅವರು ಬಿಡಿಸಿ ಹೇಳಿದ್ದಾರೆ.
ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರನ್ನು ಕಳೆದುಕೊಂಡ ಪತ್ನಿ ಹಿಮಾಂಶಿ ನರ್ವಾಲ್ ಅವರ ಹೃದಯವಿದ್ರಾವಕ ಚಿತ್ರ ಭಾರತೀಯರಿಗೆ ಇನ್ನೂವರೆಗೂ ಕಾಡುತ್ತಿದೆ. ಇಲ್ಲಿನ ಉಗ್ರರ ದಾಳಿಯಲ್ಲಿ ಬರೋಬ್ಬರಿ 26 ಮಂದಿಯನ್ನು ಭಾರತ ಕಳೆದುಕೊಂಡಿದೆ. ಅದರ ಪ್ರತಿಕಾರವೇ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ. ಇದು ಕೇವಲ ಹೆಸರಲ್ಲ ಭಾರತೀಯರ ಭಾವನಾತ್ಮಕ ಪದ. ಉಗ್ರರ ದಾಳಿಗೆ ನೋವುಂಡ ಭಾರತೀಯರ ಸೇಡಿನ ಪ್ರತಿಕ, ಮೃತರಿಗೆ ದೊರಕಿಸಿ ಕೊಟ್ಟ ನ್ಯಾಯ ಎಂದು ಶಶಿ ತರೂರ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಪಾಕಿಸ್ತಾನ ಮೇಲೆ ಭಾರತ ನಡೆಸಿದ ದಾಳಿ, ಆಪರೇಷನ್ ಸಿಂದೂರವು ಅದ್ಭುತ ಎಂದು ಅವರು ಹೆಸರಿಸಿದ್ದರು. ಪಹಲ್ಗಾಮ್ ಅಟ್ಯಾಕ್ ಆದ ವೇಳೆ ಅವರು ಬಹಿರಂಗವಾಗಿಯೇ ಪಾಕಿಸ್ತಾನ ನಡೆ ಖಂಡಿಸಿದ್ದರು. ದೇಶದ ಪರವಾಗಿ ಮಾತನಾಡಿದ್ದರು. ಅಂತಾರರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ತಮ್ಮ ಸ್ಪಷ್ಟ ನಿಲುವು ತಿಳಿಸಿದ್ದರು. ದಾಳಿ ಬಗ್ಗೆ ಒಪ್ಪದ ಪಾಕಿಸ್ತಾನವನ್ನು "ನಿರಾಕರಣೆಯ ನಿಪುಣ" ಎಂದು ಜರಿದಿದ್ದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications