ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕಾಂಗ್ರೆಸ್ನ ಹಿರಿಯ ಮುಖಂಡ!
ನವ ದೆಹಲಿ, ಮೇ 28: ಕಾಂಗ್ರೆಸ್ಗೂ ಆರ್ಎಸ್ಎಸ್ಗೂ ಎಣ್ಣೆ-ಸೀಗೆಕಾಯಿ. ರಾಹುಲ್ ಗಾಂಧಿ ಅವರಂತೂ ಹೊದಲ್ಲಿ ಬಂದಲ್ಲಿ ಬಿಜೆಪಿ ಜೊತೆಗೆ ಅದರ ಮಾತೃ ಸಂಸ್ಥೆ ಎಂದೇ ಕರೆಯಲಾಗುವ ಆರ್ಎಸ್ಎಸ್ ಅನ್ನು ಟೀಕಿಸದೇ ಇರುವುದಿಲ್ಲ. ಅಂತಹುದರಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡರೊಬ್ಬರು ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುತ್ತಿದ್ದಾರೆ.
ಆರ್ಎಸ್ಎಸ್ ಸಿದ್ಧಾಂತಕ್ಕೆ ಮಣಿಯದ್ದಕ್ಕೆ ತಮಿಳರ ಹತ್ಯೆ: ರಾಹುಲ್ ವಿವಾದಾತ್ಮಕ ಹೇಳಿಕೆ
ಹೌದು, ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಆರ್ಎಸ್ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣವನ್ನೂ ಮಾಡಲಿದ್ದಾರೆ.
ಜೂನ್ 7 ರಂದು ಆರ್ಎಸ್ಎಸ್ನ ಕೇಂದ್ರ ಸ್ಥಾನ ನಾಗ್ಪುರದಲ್ಲಿ ನಡೆಯಲಿರುವ ಮೂರನೇ ವರ್ಷದ 'ಸಂಘ ಶಿಕ್ಷ ವರ್ಗ' ಶಿಬಿರದಲ್ಲಿ ಅತಿಥಿಯಾಗಿ ಭಾಗವಹಿಸಲು ಪ್ರಣಬ್ ಮುಖರ್ಜಿ ಅವರು ಒಪ್ಪಿಕೊಂಡಿದ್ದಾರೆ.
ದಲಿತರ ಮನೆಯಲ್ಲಿ ಊಟ: ನಾಟಕ ನಿಲ್ಲಿಸಿ ಸಾಕು ಎಂದ ಭಾಗ್ವತ್
ಈ ವಿಷಯವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಅರುಣ್ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸ್ವಯಂ ಸೇವಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.